ದಾಸೋಹ ಮೂರ್ತಿ ಹಾಲಕೆರೆ ಅನ್ನದಾನೇಶ್ವರ ಶ್ರೀಗಳಿಗೆ ಜನ್ಮ​ದಿ​ನೋ​ತ್ಸ​ವ

First Published Dec 19, 2020, 11:33 AM IST

ನಿಂಗರಾಜ ಬೇವಿನಕಟ್ಟಿ

ನರೇಗಲ್ಲ(ಡಿ.19): ಅನ್ನ, ಅಕ್ಷರ ದಾಸೋಹದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ, ಸಾವಿರಾರು ಶಿಕ್ಷಕರ ಸಮುದಾಯಕ್ಕೆ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ ಹಾಲಕೆರೆ ಅನ್ನದಾನೇಶ್ವರ ಶ್ರೀಗಳು 83 ವಸಂತ​ಗ​ಳನ್ನು ಪೂರೈಸಿ 84ನೇ ವರ್ಷಕ್ಕೆ ಪಾದಾ​ರ್ಪಣೆ ಮಾಡುತ್ತಿರುವ ಸಂದ​ರ್ಭ​ದಲ್ಲಿ ರಾಜ್ಯಾ​ದ್ಯಂತ ಹಾಲಕೆರೆ ಅನ್ನದಾನೇಶ್ವರ ಮಠದ ವಿವಿಧ ಮಠ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪೂಜಾ ಕೈಂಕರ್ಯಗಳು ಜರುಗಲಿವೆ.
 

ಶಿಕ್ಷಣ ಕ್ಷೇತ್ರ​ ತೆರೆ​ಯುವ ಮೂಲಕ ಅಸಂಖ್ಯಾತ ಮಕ್ಕಳ ಅಕ್ಷರ ನಿಧಿಯಾಗಿ​ರುವ ಶ್ರೀಗಳು, ಸದಾ ರೈತಪರವಾದ ವಿಚಾರಧಾರೆ ಹೊಂದಿ ಸಾವಯವ ಕೃಷಿಗೆ ಉತ್ತೇಜನ ನೀಡಿ, ಮಣ್ಣಿನ ಸಂರಕ್ಷಣೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ರೈತರಲ್ಲಿ ಜಾಗೃತಿ ಮೂಡಿಸುತ್ತಿ​ದ್ದಾರೆ.
undefined
ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಬೇಕೆಂಬ ಮಹಾತ್ವಾಕಾಂಕ್ಷೆಯಿಂದ ನಕಲು ರಹಿತ ಪರೀಕ್ಷೆಗೆ ಆದ್ಯತೆ ನೀಡಿರುವ ಶ್ರೀಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಲಕೆರೆ ಮಠದಿಂದ ಉಳವಿ ವರೆಗೆ 261 ಚಕ್ಕಡಿಗಳ ಮೂಲಕ ಸತತ ಹದಿನೈದು ದಿನಗಳ ಕಾಲ ಚಕ್ಕಡಿಯಲ್ಲಿ ಸಾಗರೋಪಾದಿ ಭಕ್ತರೊಂದಿಗೆ ಉಳವಿಯಾತ್ರೆ ಕೈಗೊಂಡು ಜನತೆಗೆ ಅರಿವು ಮೂಡಿಸಿದರು.
undefined
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಕ್ಷಾಂತರ ಮೌಲ್ಯವನ್ನು ಶಿಷ್ಯವೇತನವನ್ನಾಗಿ ನೀಡುವ ಮೂಲಕ ಮಕ್ಕಳ ಕಲಿಕೆಗೆ ಹಾಗೂ ಅಂಗ​ವಿ​ಕಲ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡಿ ದಾರಿದೀಪವಾಗಿ​ದ್ದಾ​ರೆ.
undefined
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಬಸವಲಿಂಗಯ್ಯ ಹಾಗೂ ಗುರಮ್ಮ ದಂಪತಿ ಪುತ್ರರಾಗಿ ಡಿ. 19, 1938ರಂದು ಜನಿಸಿರುವ ಅನ್ನದಾನ ಶ್ರೀಗಳು ಬೈಲಹೊಂಗಲ ಹಾಗೂ ನರೇಗಲ್ಲಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಮುಂದಿನ ವಿದ್ಯಾ​ಭ್ಯಾ​ಸ​ವನ್ನು 12 ವರ್ಷ ಶಿವಯೋಗ ಮಂದಿರದಲ್ಲಿ ಮಾಡಿ​ದ್ದಾರೆ. ಉನ್ನತ ವ್ಯಾಸಂಗಕ್ಕೆ ಕಾಶಿಗೆ ತೆರಳಿದ ಶ್ರೀಗಳು ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
undefined
ಇಂದು ಅದೇ ಅನ್ನದಾನೇಶ್ವರ ಮಠ, ಶಿವಯೋಗಮಂದಿರ, ಬಳ್ಳಾರಿ, ಹೊಸಪೇಟೆಯಲ್ಲಿನ ಮಠಗಳ ಪೀಠಾಧಿಕಾರಿಗಳಾಗಿ ನಮ್ಮೆದುರು ನಡೆ​ದಾ​ಡುವ ದೇವ​ರಾದ ಶ್ರೀಗಳು
undefined
ಶಿವಯೋಗ ಮಂದಿರದಲ್ಲಿ 2010ರಲ್ಲಿ ನಿರ್ಮಿಸಿದ ತೇರು ಏಷ್ಯಾದಲ್ಲಿಯೇ ಅತಿ ಎತ್ತರದ ತೇರು ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಮುಖ ನಾಯ​ಕರು ಆಗ​ಮಿಸಿ ರಥೋ​ತ್ಸ​ವಕ್ಕೆ ಚಾಲನೆ ನೀಡಿ​ರು​ವುದು ಇನ್ನೂ ಕಣ್ಮುಂದೆ ಇದೆ. 2005ರಲ್ಲಿ ಬೆಳ್ಳಿರಥ ನಿರ್ಮಿಸುವ ಮೂಲಕ ಮಹಿಳೆಯರಿಂದ ಎಳೆಸುವ ಮೂಲಕ ಶ್ರೀಗಳು ಸಮಾ​ನತೆ ಕಲ್ಪಿ​ಸಿ​ದ್ದಾ​ರೆ.
undefined
ಶ್ರೀಗಳು 1987ರಲ್ಲಿ ಅಧಿಕಾರ ವಹಿಸಿದ ದಿನ​ದಿಂದ ನರೇಗಲ್ಲ, ಗಜೇಂದ್ರಗಡ, ಕುಷ್ಟಗಿ ಸೇರಿ​ದಂತೆ ಮುಂತಾದ ಭಾಗಗಳಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಇತ್ತೀಚೆಗೆ ವಿವಿಧ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಗುಣ​ಮ​ಟ್ಟದ ಶಿಕ್ಷ​ಣಕ್ಕೆ ಆದ್ಯತೆ ನೀಡಿ​ದ್ದಾರೆ. ಹೀಗಾಗಿ ಪ್ರತಿ ಸ್ಫರ್ಧಿ​ಯಲ್ಲಿ ಈ ಸಂಸ್ಥೆಯ ವಿದ್ಯಾ​ರ್ಥಿ​ಗಳು ಅತ್ಯು​ತ್ತಮ ಸಾಧನೆ ಮಾಡು​ತ್ತಿ​ದ್ದಾ​ರೆ.
undefined
ನಮ್ಮ ವಿದ್ಯಾ​ಲ​ಯ​ದಲ್ಲಿ ವರ್ಷ​ದಿಂದ ವರ್ಷಕ್ಕೆ ಪ್ರತಿ​ಭಾ​ನ್ವಿ​ತರ ಸಂಖ್ಯೆ ಹೆಚ್ಚು​ತ್ತಲೆ ಸಾಗಿದೆ. ಇದಕ್ಕೆ ಶ್ರೀಗ​ಳ ಸಮ​ಯೋ​ಚಿತ ಮಾರ್ಗ​ದ​ರ್ಶ​ನವೇ ಕಾರ​ಣ​ವಾ​ಗಿ​ದೆ ಎಂದು ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯವೈ.ಸಿ. ಪಾಟೀಲ ಹೇಳಿದ್ದಾರೆ.
undefined
ಶ್ರೀಗಳ ಆಶೀರ್ವಾದದಿಂದ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆದಿದ್ದು, ಪ್ರತಿವರ್ಷ ಮಹಾವಿದ್ಯಾಲಯದ ಫಲಿತಾಂಶ ಸುಧಾರಣೆಯಾಗುತ್ತಿದೆ ಎಂದು ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್‌.ಜಿ. ಕೇಶಣ್ಣವರ ತಿಳಿಸಿದ್ದಾರೆ.
undefined
ಹೊಸದಾಗಿ ಅಭಿನವ ಅನ್ನದಾನ ಪದವಿ ಪೂರ್ವ ಮಹಾವಿದ್ಯಾಲಯ ಸ್ಥಾಪಿಸಿದ್ದು ಮೊದಲ ಬ್ಯಾಚಿ​ನ್‌ ವಿದ್ಯಾ​ರ್ಥಿ​ಗಳು ಅತ್ಯು​ತ್ತಮ ಫಲಿ​ತಾಂಶ ಪಡೆ​ದಿ​ದ್ದಾ​ರೆ ಎಂದು ಅಭಿ​ನ​ವ ಅನ್ನ​ದಾನ ಪಪೂ ಮಹಾ​ವಿ​ದ್ಯಾ​ಲ​ಯದ ಪ್ರಾಚಾ​ರ್ಯೆ ಅನಸೂಯಾ ಪಾಟೀಲ ಹೇಳಿದ್ದಾರೆ.
undefined
click me!