ಸಿಬಿಐ ವಶದಲ್ಲಿ ಕುಲಕರ್ಣಿ: ರಾಜಕೀಯ ಸೇಡು ತೀರಿಸಿಕೊಳ್ಳಲು ಪ್ರಹ್ಲಾದ್ ಜೋಶಿ ಯತ್ನ, ಸಿದ್ದು

First Published Nov 9, 2020, 2:49 PM IST

ಬಾಗಲಕೋಟೆ(ನ.09): ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನ ಸಿಬಿಐ ಬಂಧಿಸಿದ್ದು ಬಿಜೆಪಿಯ ರಾಜಕೀಯ ಪ್ರೇರಿತವಾಗಿದೆ. ತನಿಖೆ ಮುಗಿದು, ಚಾರ್ಜ್‌ಶೀಟ್ ಹಾಕಿದ ಮೇಲೆ ಮತ್ತೆ ರಿ ಓಪನ್ ಮಾಡಿ, ಸಿಬಿಐಗೆ ಕೊಟ್ಟಿದ್ದು ರಾಜಕೀಯ ಪ್ರೇರಿತವಲ್ಲವಾ?, ರಾಜಕೀಯ ಸೇಡು ತೀರಿಸಿಕೊಳ್ಳಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಯತ್ನ ಮಾಡುತ್ತಿದ್ದಾರೆ. ವಿರೋಧ ಪಕ್ಷದವರನ್ನು ಬಾಯಿಮುಚ್ಚಿಸಿದ್ರೆ, ತಮಗೆ ಇಷ್ಟ ಬಂದ ಹಾಗೆ ಆಟ ಆಗಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ ಎಂದು ಆರೋಪಿಸಿದ್ದಾರೆ. 

ಇಂದು(ಸೋಮವಾರ) ಜಿಲ್ಲೆಯ ಬಾದಾಮಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿ, ಶಿರಾ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಇಂಟೆಲಿಜೆನ್ಸ್ ಮಾಹಿತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವ ಇಂಟೆಲಿಜೆನ್ಸ್ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಯಾವ ಆಧಾರದ ಮೇಲೆ ಹೇಳ್ತಿದ್ದಾರೆ ನನಗೆ ಗೊತ್ತಿಲ್ಲ. ನಾನು ಕಣ್ಣಾರೆ ನೋಡಿರೋದು ಕಾಂಗ್ರೆಸ್ ಪರ ಜನರ ಒಲವು ಹೆಚ್ಚಿತ್ತು. ಪ್ರಧಾನಿ ಮೋದಿ ಅಲೆ ಎಲ್ಲಿದೆ, ಅಲೆನೂ ಇಲ್ಲ ಪಲೆನೂ ಇಲ್ಲ ಎಂದಿದ್ದಾರೆ.
undefined
ಇನ್ನು ಇದೇ ವೇಳೆ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಸನ್ಮಾನಿಸಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
undefined
ಬಿಡಿಸಿಸಿ ಬ್ಯಾಂಕ್‌ಗೆ ನೂತನ ನಿರ್ದೆಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹುನಗುಂದ ಕ್ಷೇತ್ರದ ಕಾಂಗ್ರೆಸ್ ಮುಖಂಡರೊಂದಿಗೆ ಸಿದ್ದರಾಮಯ್ಯರನ್ನ ಕಾಶಪ್ಪನವರ ಭೇಟಿ ಮಾಡಿದ್ದಾರೆ. ಈ ಮೂಲಕ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನದತ್ತ ಕಾಶಪ್ಪನವರ ಲಾಭಿ ನಡೆಸುತ್ತಿದ್ದಾರೆ.
undefined
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಡಿಸಿಸಿ ಬ್ಯಾಂಕ್‌ಗಳಲ್ಲಿ ನಮ್ಮದೇನು ಇಲ್ಲ, ಅದನ್ನ ನೀವೇ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ಕಳೆದ ಬಾರಿ ಮಾತು ಕೊಟ್ಟಿದ್ದೀರಿ, ಈ ಬಾರಿ ಆ ಮಾತು ಈಡೇರಿಸಿ ಎಂದ ಕಾಶಪ್ಪನವರ ಬೆಂಬಲಿಗರು ಸಿದ್ದರಾಮಯ್ಯ ಅವರ ಬಳಿ ಕೇಳಿಕೊಂಡಿದ್ದಾರೆ.
undefined
ಬಿಡಿಸಿಸಿ ಬ್ಯಾಂಕ್‌ನ ಗದ್ದುಗೆ ಮೇಲೆ ಕಣ್ಣಿಟ್ಟ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ
undefined
click me!