ರಾತ್ರಿ 11.30ರವರೆಗೂ ರೈತರನ್ನು ಸಂಭಾಳಿಸುವಲ್ಲಿ ಪೊಲೀಸರು ಹೈರಾಣಾದರು. ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ ಸೇರಿ ಸ್ಥಳೀಯ ಮುಖಂಡರು ಆಗಮಿಸಿ ಊಟದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆದರು. ಆನಂದ ಮಾಸ್ತಿ ನಿಡಗುಂದಿಕೊಪ್ಪ, ಮೆಹಬೂಬ್ ಸಾಬ್ ಮುಲ್ಲಾ ರೋಣ, ಶಿವಾನಂದ ಹೊಸಮನಿ, ಮಂಜು ಸರ್ವಿ, ಮಲ್ಲಿಕಾರ್ಜುನ ಸರ್ವಿ, ಸಿದ್ಧಪ್ಪ ಸರ್ವಿ, ಸುನೀಲ ಮಾಸ್ತಿ ಸೇರಿದಂತೆ ನೂರಾರು ರೈತರಿದ್ದರು.