ಈ ಹಿಂದಿನ ಕಹಿನೆನಪಿನ ಭಯವಿಲ್ಲದಂತೆ, ಮತಗಟ್ಟೆಗಳು ದೂರ ಅನ್ನೋದನ್ನ ಮರೆತು ಮತ ಹಾಕೋಕಾದ್ರೂ ಬರ್ಲಿ ಅಂತಾ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉಚಿತ ವಾಹನವನ್ನ ಕಲ್ಪಿಸೋಕೆ ಮುಂದಾಗಿದೆ.ಒಟ್ಟಾರೆ ಕಾಫಿ ನಾಡಿನ ಕುಗ್ರಾಮ ಅಭಯಾರಣ್ಯದ ಸುತ್ತಮುತ್ತಲಿನಲ್ಲಿರೋ ಜನ್ರು ಭಯ, ಮುಕ್ತವಾಗಿ ಮತದಾನಕ್ಕೆ ಬರ್ಲಿ ಅಂತಾ ಉಚಿತ ವಾಹನದ ಸೌಕರ್ಯ ಕಲ್ಪಿಸಿದೆ. ಅನಿವಾರ್ಯದಿಂದ ಅಮಿಷೆಗೆ ಒಳಗಾಗಿ ಬೇರೆ ಪಕ್ಷದ ವಾಹನ ಬಳಸದೇ ಉಚಿತ ವಾಹನದಲ್ಲಿಯೇ ಬಂದು ಮತದಾನ ಮಾಡ್ಲಿ. ಈ ಬಾರಿಯಾದ್ರೂ ಮಲೆನಾಡಿನ ಕುಗ್ರಾಮದಲ್ಲಿ ಮತ ಪ್ರಕ್ರಿಯೆ ಹೆಚ್ಚಾಗಲಿ ಎನ್ನುವುದು ಜಿಲ್ಲಾಡಳಿತದ ಪ್ಲಾನ್ .
- ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು