ನಂತರ, ಚಾಲಕ ₹500 ದಂಡವನ್ನು ಕಟ್ಟಿ ಜೀಪನ್ನು ಬಿಡಿಸಿಕೊಂಡು ಹೋಗಿದ್ದಾರೆ. ಈ ಘಟನೆ ಸ್ಥಳೀಯರ ಗಮನ ಸೆಳೆದಿದ್ದು, ಪಿಎಸ್ಐ ಬಸವರಾಜ್ ಅವರ ನಿಷ್ಪಕ್ಷಪಾತ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರಭಾವಕ್ಕೆ ಒಳಗಾಗದೆ, ತಮ್ಮ ಹಿರಿಯ ಅಧಿಕಾರಿಯ ವಾಹನಕ್ಕೂ ದಂಡ ವಿಧಿಸಿದ ಪಿಎಸ್ಐ ಕಾರ್ಯ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ರವಾನಿಸಿದೆ.