ಬಂಧಿತ ಆರೋಪಿಯನ್ನು ವನಜಾಕ್ಷಿ ಎಂದು ಗುರುತಿಸಲಾಗಿದೆ. ಈಕೆ ಈ ಆಸ್ಪತ್ರೆಗೆ ಹೌಸ್ ಕೀಪಿಂಗ್ ಕೆಲಸಕ್ಕೆ ಸೇರಿ ಕೇವಲ ಒಂದು ದಿನವಷ್ಟೇ ಆಗಿತ್ತು. ಕೆಲಸ ಸಿಕ್ಕ ಮರುದಿನವೇ ಈಕೆ ತನ್ನ ನೈಜ ಗುಣವನ್ನು ಪ್ರದರ್ಶಿಸಿದ್ದಾಳೆ. ರೋಗಿ ಶಸ್ತ್ರಚಿಕಿತ್ಸೆಗೆ ಹೋದ ಸಮಯ ನೋಡಿ, ನೆಲ ವರೆಸುವ ನೆಪದಲ್ಲಿ ರೂಮ್ ಒಳಗೆ ನುಗ್ಗಿದ ವನಜಾಕ್ಷಿ, ಕ್ಷಣಾರ್ಧದಲ್ಲಿ ಬೆಲೆಬಾಳುವ ಚಿನ್ನಾಭರಣಗಳನ್ನು ಗುಳುಂ ಮಾಡಿದ್ದಾಳೆ.
ಸಿಸಿಟಿವಿಯಲ್ಲಿ ಬಯಲಾದ ಖತರ್ನಾಕ್ ಕಳ್ಳಾಟ:
ಶಸ್ತ್ರಚಿಕಿತ್ಸೆ ಮುಗಿಸಿ ಬಂದ ಸ್ವಪ್ನ ಅವರಿಗೆ ತಮ್ಮ ಒಡವೆಗಳು ಕಾಣದಿದ್ದಾಗ ಆತಂಕಕ್ಕೊಳಗಾಗಿ ಆಸ್ಪತ್ರೆ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಕೂಡಲೇ ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ವನಜಾಕ್ಷಿ ನೆಲ ವರೆಸುತ್ತಾ ರೂಮ್ ಒಳಗೆ ಹೋಗಿ, ಯಾರಿಗೂ ಅನುಮಾನ ಬರದಂತೆ ಒಡವೆಗಳನ್ನು ಕದ್ದು ತನ್ನ ಜೇಬಿಗೆ ಹಾಕಿಕೊಳ್ಳುವುದು ಸ್ಪಷ್ಟವಾಗಿ ಸೆರೆಯಾಗಿದೆ.