ಕಾರವಾರ ಕಡಲ ತೀರದಲ್ಲಿ ಅಳಿವಿನಂಚಿನಲ್ಲಿರುವ ಬಲೀನ್‌ ತಿಮಿಂಗಲ ಪತ್ತೆ

First Published Sep 10, 2023, 12:23 PM IST

ಉತ್ತರಕನ್ನಡ (ಸೆ.10): ಜಾಗತಿಕ ಮಟ್ಟದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ಪ್ರಾಣಿಗಳಲ್ಲಿ ಬಲೀನ್‌ ಜಾತಿಯ ಭಾರಿ ಗಾತ್ರದ ತಿಮಿಂಗಲ, ಹೊನ್ನಾವರ ತಾಲೂಕಿನ ಮುಗಳಿ ಕಡಲತೀರಕ್ಕೆ ಕೊಚ್ಚಿಕೊಂಡು ಬಂದಿದೆ.
 

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರದಲ್ಲಿ ಪತ್ತೆಯಾಗಿರುವುದು ಬಲೀನ್‌ ತಿಮಿಂಗಲದ ಮೃತದೇಹವಾಗಿದೆ. ಬಲೀನ್ ವೇಲ್ ಎಂದು ಗುರುತಿಸಲ್ಪಡುವ ಈ ತಿಮಿಂಗಲ ಸುಮಾರು 46 ಫೀಟ್ ಉದ್ದ, 9 ಫೀಟ್ ಎತ್ತರವಿದೆ. 

ಸಾಮಾನ್ಯವಾಗಿ 10ಮೀಟರ್‌ನಿಂದ 102ಮೀಟರ್‌ವರೆಗೆ ಈ ಬಲೀನ್ ಜಾತಿಯ ತಿಮಿಂಗಿಲ ಬೆಳೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಅತೀ ವಿರಳವಾಗಿ ಕಾಣುವ ಹಾಗೂ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ತಿಮಿಂಗಿಲವಾಗಿದೆ.

ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರರು ಬೃಹತ್‌ ಗಾತ್ರದ ತಿಮಿಂಗಲ ಮೃತದೇಹವನ್ನು ನೋಡಿದ್ದಾರೆ. ನಂತರ ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಇನ್ನು ತಿಮಿಂಗಲವು ಮೃತಪಟ್ಟು ಹಲವು ದಿನ ಕಳೆದ ಬಳಿಕ ದಡಕ್ಕೆ ಬಂದು ಬಿದ್ದಿರುವ ಶಂಕೆಯಿದೆ. ತಿಮಿಂಗಿಲದ‌ ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸ್ಪಷ್ಟವಾಗಿ ತಿಳಿಯಲಿದೆ.

click me!