ನೀಟ್ ಮರುಪರೀಕ್ಷೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳನ್ನು ಅಣ್ಣಾಮಲೈ ಟೀಕಿಸಿದ್ದಾರೆ. ಈ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡವನ್ನು ಹೆಚ್ಚಿಸುವುದಲ್ಲದೆ, ಸಮಸ್ಯೆಯನ್ನು ಬಗೆಹರಿಸುವ ಬದಲು ಹೊಸ ತೊಂದರೆಗಳನ್ನು ತಂದೊಡ್ಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಹಲವು ಭದ್ರತೆಯೊಂದಿಗೆ ನೀಟ್ ಮರುಪರೀಕ್ಷೆಯನ್ನು ನಡೆಸುತ್ತಿದೆ. ಜೂನ್ 21ರ ಪರೀಕ್ಷೆಗೆ ಮುಂಚಿತವಾಗಿ ಭಾರತದಲ್ಲಿ ಟೆಲಿಗ್ರಾಂ ಆಪ್ ಮೇಲೆ ತಾತ್ಕಾಲಿಕ ನಿರ್ಬಂಧ ಹಾಕಿದೆ. ಈ ಹಿಂದೆ ಟೆಲಿಗ್ರಾಂ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಪರೀಕ್ಷೆ ಸಂಬಂಧ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಅಣ್ಣಾಮಲೈ ಟೀಕಿಸಿದ್ದಾರೆ. ಈ ಸಂಬಂಧ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅಣ್ಣಾಮಲೈ, ಇದು ಹೊಸ ತೊಂದರೆಗಳನ್ನು ತಂದೊಡ್ಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
25
ಅಣ್ಣಾಮಲೈ ವ್ಯಂಗ್ಯ
ಎರಡು ಹಂತದ ಸಿಆರ್ಪಿಎಫ್ ಮತ್ತು ಸಿಐಎಸ್ಎಫ್ ಬೆಂಗಾವಲಿನ ಜೊತೆ ವಾಯುಸೇನೆಯಿಂದ ಏರ್ಲಿಫ್ಟ್, ನಾಲ್ಕು ಹಂತದಲ್ಲಿ ಎಐ ಆಧಾರಿತ ಬಯೋಮೆಟ್ರಿಕ್ ತಪಾಸಣೆ. ಇಷ್ಟು ಮಾತ್ರವಲ್ಲ ಪ್ರಧಾನ ಮಂತ್ರಿ ಕಚೇರಿಯಿಂದ ನೇರ ಮೇಲ್ವಿಚಾರಣೆ ನಡೆಯಲಿದೆ. ಇಷ್ಟು ಉನ್ನತಮಟ್ಟದ ಭದ್ರತೆಯನ್ನು ನೀಡುತ್ತಿರೋದು ಯಾವುದೋ ಮಿಲಿಟರಿ ದರ್ಜೆಯ ಸಾಫ್ಟ್ವೇರ್ ಖರೀದಿಗೆ ಅಲ್ಲ. ಜೂನ್ 21, 2026 ರಂದು ನಿಗದಿಯಾಗಿರುವ NEET ಮರುಪರೀಕ್ಷೆಗಾಗಿ ಶಿಕ್ಷಣ ಸಚಿವಾಲಯ ಇಷ್ಟೆಲ್ಲಾ ಭದ್ರತೆ ಮಾಡಿಕೊಂಡಿದೆ.
35
ಪರೀಕ್ಷೆ ಒತ್ತಡ ಹೆಚ್ಚಳ
ಈ ಬಾರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ಮಾಡಿಕೊಂಡಿರುವ ವ್ಯವಸ್ಥೆಗೆ ವಿದ್ಯಾರ್ಥಿಗಳು ಮೆಚ್ಚುಗೆ ಸೂಚಿಸುತ್ತಾರೆ. ಪರೀಕ್ಷಾಕೇಂದ್ರ ಪ್ರವೇಶಕ್ಕೂ ಮುನ್ನ ನಡೆಯುವ ಪರಿಶೀಲನೆ, ವಿಸ್ತೃತ ತಪಾಸಣೆ ಪರೀಕ್ಷಾ ಸಮಯವನ್ನು 180 ರಿಂದ 190 ನಿಮಿಷಕ್ಕೆ ಹೆಚ್ಚಳ ಮಾಡುತ್ತದೆ. ಇಷ್ಟೊಂದು ವಿವರ ಮತ್ತು ಸೂಕ್ಷ್ಮವಾದ ತಪಾಸಣೆಗಳು ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಒತ್ತಡವನ್ನು ಹೆಚ್ಚಳ ಮಾಡುತ್ತದೆ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ತಿಂಗಳುಗಟ್ಟಲೆ ಕಷ್ಟಪಟ್ಟು ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳ ಮೇಲೆ ತಾವು ಹಾಕಿರುವ ಹೆಚ್ಚುವರಿ ಒತ್ತಡವನ್ನು ಸರ್ಕಾರ ಮರೆತಿದೆ. ಇದು ನಮ್ಮ ಪರೀಕ್ಷಾ ಪದ್ಧತಿಯ ಉದ್ದೇಶ ಮತ್ತು 'ಪರೀಕ್ಷೆಯ ಒತ್ತಡ'ವನ್ನು ಕಡಿಮೆ ಮಾಡಬೇಕೆಂಬ ಎನ್ಇಪಿ 2020ರ ಗುರಿಯನ್ನೇ ಹಾಳುಮಾಡುತ್ತದೆ ಎಂದು ಅಣ್ಣಾಮಲೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಪರೀಕ್ಷೆಗೆ ಇಷ್ಟೆಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡರೂ ಇನ್ನು ಪ್ರವೇಶ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎನ್ಟಿಎ ಈ ಸಮಸ್ಯೆಯನ್ನು ಪರಿಹರಿಸುವ ಭರವಸೆಯನ್ನು ನೀಡಿದೆ.
55
ಹೊಸ ಸಮಸ್ಯೆಯ ಅಪಾಯ
ಹಲವು ಸವಾಲುಗಳಿದ್ದು, ಅವುಗಳಿಗೆ ಸೂಕ್ತ ಪರಿಹಾರಗಳ ಅಗತ್ಯವಿದೆ. ಆದರೆ ನೀಟ್ (NEET) ಮರುಪರೀಕ್ಷೆಗಾಗಿ ಮಾಡಿಕೊಂಡಿರುವ ಈ ಯೋಜನೆಯು ಸಮಸ್ಯೆಯನ್ನು ಬಗೆಹರಿಸುತ್ತದೆ ಎಂದು ನನಗನಿಸುತ್ತಿಲ್ಲ. ಬದಲಾಗಿ ಇದು ಹೊಸ ತೊಂದರೆಗಳನ್ನು ತಂದೊಡ್ಡುವ ಅಪಾಯವಿದೆ ಎಂದು ಅಣ್ಣಾಮಲೈ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ