22 ವರ್ಷಕ್ಕೇ IPS, 7 ಸಮುದ್ರದಾಚೆ ಅವಿತಿದ್ದ ರೇಪಿಸ್ಟ್ ಎಳೆತಂದ ಗಟ್ಟಿಗಿತ್ತಿ!

Published : Feb 26, 2020, 03:41 PM ISTUpdated : Feb 26, 2020, 03:42 PM IST

ಮಹಿಳಾ ಶಕ್ತಿ ಅಲ್ಲಗಳೆಯುವಂತಿಲ್ಲ, ಅದೆಷ್ಟೇ ಕಷ್ಟದ ಕೆಲಸವಾದರೂ ಒಂದು ಬಾರಿ ಆಕೆ ನಿರ್ಧರಿಸಿದರೆ ಆಕೆಯನ್ನು ತಡೆಯುವವರೇ ಇಲ್ಲ. ಸಮಾಜದಲ್ಲಿ ಹೆಣ್ಮಕ್ಕಳನ್ನು ಕಣೆಗಣಿಸಿದರೂ, ವರು ಮಾತ್ರ ಹೆಜ್ಜೆ ಹೆಜ್ಜೆಗೂ ತಾವು ಯಾರಿಗೂ ಕಡಿಮೆ ಇಲ್ಲ ಎಂಬುವುದನ್ನು ಸಾಬೀತುಪಡಿಸುತ್ತಾ ಬಂದಿದ್ದಾರೆ. ಆದರೀಗ ಕಾಲ ಬದಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿಪುರುಷರಿಗೆ ಸವಾಲೊಡ್ಡುತ್ತಿದ್ದಾರೆ. ದೇಶದಲ್ಲಿ ಪ್ರತಿ ಬಾರಿಯೂ ಹೆಣ್ಮಕ್ಕಳೇ ಟಾಪರ್ಸ್. ವಿಜ್ಞಾನ, ವೈದ್ಯಕೀಯ, ಸಿವಿಲ್ ಸರ್ವಿಸ್ ಹೀಗೆ ಎಲ್ಲೆಡೆಯೂ ಅವರು ತಮ್ಮ ಪ್ರತಿಭೆಯಿಂದ ಮಿಂಚುತ್ತಿದ್ದಾರೆ. ಹೀಗಿರುವಾಗ ಕೇರಳದ ಯುವತಿಯೊಬ್ಬಳು ತಾನು ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸು ಕಂಡಿದ್ದಳು. ಕೊನೆಗೂ 22ನೇ ವಯಸ್ಸಿಗೇ IPS ಅಧಿಕಾರಿಯಾಗುವ ಮೂಲಕ ಆಕೆ ತನ್ನ ಕನಸು ನನಸಾಗಿಸಿಕೊಂಡಳು. ಈ ಸಿಂಹಿಣಿ ಯಾರು? ಇಲ್ಲಿದೆ ರೋಚಕ ಕಹಾನಿ

PREV
118
22 ವರ್ಷಕ್ಕೇ IPS, 7 ಸಮುದ್ರದಾಚೆ ಅವಿತಿದ್ದ ರೇಪಿಸ್ಟ್ ಎಳೆತಂದ ಗಟ್ಟಿಗಿತ್ತಿ!
ಪೊಲೀಸ್ ಸಮವಸ್ತ್ರದಲ್ಲಿ ಮಿಂಚುತ್ತಿರುವ ಈ ಅಧಿಕಾರಿ ಹಿಂಸೆ ಹಾಗೂ ಅಪರಾಧಕ್ಕೆ ಕಡಿವಾಣ ಹಾಕಿದರು. ಅತ್ಯಾಚಾರ ನಡೆಸಿ ವಿದೇಶಕ್ಕೆ ಪರಾರಿಯಾಗಿದ್ದ ರೇಪಿಸ್ಟ್ ನ್ನು ಬೆನ್ನತ್ತಿ, ಲ್ಲೇ ಬಂಧಿಸಿ ಕರೆ ತಂದು ಜೈಲಿಗಟ್ಟಿದರು. ಇಂತಹ ಗಟ್ಟಿಗಿತ್ತಿ ಬೇರಾರೂ ಅಲ್ಲ, ಕೇರಳದ ದಬಂಗ್ ಹಾಗೂ ಪಂಜಾಬ್ ಮಹಿಳಾ IPS ಆಫೀಸರ್ ಮೆರೀನ್ ಜೋಸೆಫ್.
ಪೊಲೀಸ್ ಸಮವಸ್ತ್ರದಲ್ಲಿ ಮಿಂಚುತ್ತಿರುವ ಈ ಅಧಿಕಾರಿ ಹಿಂಸೆ ಹಾಗೂ ಅಪರಾಧಕ್ಕೆ ಕಡಿವಾಣ ಹಾಕಿದರು. ಅತ್ಯಾಚಾರ ನಡೆಸಿ ವಿದೇಶಕ್ಕೆ ಪರಾರಿಯಾಗಿದ್ದ ರೇಪಿಸ್ಟ್ ನ್ನು ಬೆನ್ನತ್ತಿ, ಲ್ಲೇ ಬಂಧಿಸಿ ಕರೆ ತಂದು ಜೈಲಿಗಟ್ಟಿದರು. ಇಂತಹ ಗಟ್ಟಿಗಿತ್ತಿ ಬೇರಾರೂ ಅಲ್ಲ, ಕೇರಳದ ದಬಂಗ್ ಹಾಗೂ ಪಂಜಾಬ್ ಮಹಿಳಾ IPS ಆಫೀಸರ್ ಮೆರೀನ್ ಜೋಸೆಫ್.
218
ಮೆರೀನ್ ಜೋಸೆಫ್ 1990ರ ಏಪ್ರಿಲ್ 20ರಂದು ಕೇರಳದಲ್ಲಿ ಜನಿಸಿದರು.
ಮೆರೀನ್ ಜೋಸೆಫ್ 1990ರ ಏಪ್ರಿಲ್ 20ರಂದು ಕೇರಳದಲ್ಲಿ ಜನಿಸಿದರು.
318
ಇವರ ತಂದೆ ಕೃಷಿ ಸಚಿವಾಲಯದಲ್ಲಿ ಪ್ರಮುಖ ಸಲಹೆಗಾರರು ಹಾಗೂ ತಾಯಿ ಅರ್ಥಶಾಸ್ತ್ರ ಶಿಕ್ಷಕಿ.
ಇವರ ತಂದೆ ಕೃಷಿ ಸಚಿವಾಲಯದಲ್ಲಿ ಪ್ರಮುಖ ಸಲಹೆಗಾರರು ಹಾಗೂ ತಾಯಿ ಅರ್ಥಶಾಸ್ತ್ರ ಶಿಕ್ಷಕಿ.
418
ಮೆರೀನ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಹಾಗೂ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಮೆರೀನ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಹಾಗೂ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
518
6ನೇ ತರಗತಿಯಲ್ಲಿದ್ದಾಗಲೇ ಮೆರೀನ್ ಸಿವಿಲ್ ಸರ್ವೀಸ್ ಗೆ ಸೇರಬೇಕೆಂಬ ಕನಸು ಕಂಡಿದ್ದರು. ಇದಾದ ಕೆಲವೇ ತಿಂಗಳಲ್ಲಿ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ತಯಾರಿ ಆರಂಭಿಸಿದ್ದರು. ಸಾಮಾನ್ಯ ಜ್ಞಾನ ಮೊದಲಾದ ಪುಸ್ತಕಗಳನ್ನು ಓದಲಾರಂಭಿಸಿದ್ದರು.
6ನೇ ತರಗತಿಯಲ್ಲಿದ್ದಾಗಲೇ ಮೆರೀನ್ ಸಿವಿಲ್ ಸರ್ವೀಸ್ ಗೆ ಸೇರಬೇಕೆಂಬ ಕನಸು ಕಂಡಿದ್ದರು. ಇದಾದ ಕೆಲವೇ ತಿಂಗಳಲ್ಲಿ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ತಯಾರಿ ಆರಂಭಿಸಿದ್ದರು. ಸಾಮಾನ್ಯ ಜ್ಞಾನ ಮೊದಲಾದ ಪುಸ್ತಕಗಳನ್ನು ಓದಲಾರಂಭಿಸಿದ್ದರು.
618
ಚಿಕ್ಕ ವಯಸ್ಸಿನಲ್ಲೇ ಸಿವಿಲ್ ಸರ್ವಿಸ್ ಕುರಿತು ತಿಳಿದುಕೊಂಡಿದ್ದ ಮೆರೀನ್, ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಆರಂಭಿಸಿದ್ದರು. ಈ ಸಂಬಂಧ ನೋಟ್ಸ್ ತಯಾರಿಸಿ ಓದಲಾರಂಭಿಸಿದ್ದರು.
ಚಿಕ್ಕ ವಯಸ್ಸಿನಲ್ಲೇ ಸಿವಿಲ್ ಸರ್ವಿಸ್ ಕುರಿತು ತಿಳಿದುಕೊಂಡಿದ್ದ ಮೆರೀನ್, ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಆರಂಭಿಸಿದ್ದರು. ಈ ಸಂಬಂಧ ನೋಟ್ಸ್ ತಯಾರಿಸಿ ಓದಲಾರಂಭಿಸಿದ್ದರು.
718
ಇದರಂತೆ ಸ್ನಾತಕೋತ್ತರ ಪದವಿ ಬಳಿಕ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದರು. ದೆಹಲಿಯಲ್ಲಿ IAS ಕೋಚಿಂಗ್ ಪಡೆದ ಮೆರೀನ್ 2012ರಲ್ಲಿ 188 ರ್ಯಾಂಕ್ ಪಡೆದು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ತಮ್ಮ ಮೊದಲ ಪ್ರಯತ್ನದಲ್ಲೇ ಅವರು ಈ ಸಾಧನೆ ಮಾಡಿದ್ದರು.
ಇದರಂತೆ ಸ್ನಾತಕೋತ್ತರ ಪದವಿ ಬಳಿಕ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದರು. ದೆಹಲಿಯಲ್ಲಿ IAS ಕೋಚಿಂಗ್ ಪಡೆದ ಮೆರೀನ್ 2012ರಲ್ಲಿ 188 ರ್ಯಾಂಕ್ ಪಡೆದು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ತಮ್ಮ ಮೊದಲ ಪ್ರಯತ್ನದಲ್ಲೇ ಅವರು ಈ ಸಾಧನೆ ಮಾಡಿದ್ದರು.
818
UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇರಿನ್ IPS ಆಯ್ಕೆ ಮಾಡಿಕೊಂಡರು ಹಾಗೂ ಯೂನಿಫಾರ್ಮ್ ಕೂಡಾ ಧರಿಸಿದರು.
UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇರಿನ್ IPS ಆಯ್ಕೆ ಮಾಡಿಕೊಂಡರು ಹಾಗೂ ಯೂನಿಫಾರ್ಮ್ ಕೂಡಾ ಧರಿಸಿದರು.
918
ಹೈದರಾಬಾದ್ ನಿಂದ ಮೆರೀನ್ ತಮ್ಮ IPS ತರಬೇತಿ ಪೂರ್ಣಗೊಳಿಸಿದರು ಹಾಗೂ ಮೊದಲ ಪೋಸ್ಟಿಂಗ್ ಎರ್ನಾಕುಲಂನಲ್ಲಿ ಮಾಡಿದರು.
ಹೈದರಾಬಾದ್ ನಿಂದ ಮೆರೀನ್ ತಮ್ಮ IPS ತರಬೇತಿ ಪೂರ್ಣಗೊಳಿಸಿದರು ಹಾಗೂ ಮೊದಲ ಪೋಸ್ಟಿಂಗ್ ಎರ್ನಾಕುಲಂನಲ್ಲಿ ಮಾಡಿದರು.
1018
22ನೇ ವಯಸ್ಸಿಗೇ IPS ಅಧಿಕಾರಿಯಾದ ಮೆರೀನ್ ಅತ್ಯಂತ ಕಡಿಮೆ ವಯಸ್ಸಿಗೇ ಇಂತಹ ಸಾಧನೆ ಮಾಡಿದ ಕೇರಳದ ಮಹಿಳೆ ಎಂಬ ಈ ಖ್ಯಾತಿ ಗಳಿಸಿದರು. ಅಲ್ಲದೇ ಮೊದಲ ಪ್ರಯತ್ನದಲ್ಲೇ IPS ಫಾಸ್ ಮಾಡುವ ಮೂಲಕ ಮಾಧ್ಯಮದಲ್ಲೂ ಶೈನ್ ಆದರು.
22ನೇ ವಯಸ್ಸಿಗೇ IPS ಅಧಿಕಾರಿಯಾದ ಮೆರೀನ್ ಅತ್ಯಂತ ಕಡಿಮೆ ವಯಸ್ಸಿಗೇ ಇಂತಹ ಸಾಧನೆ ಮಾಡಿದ ಕೇರಳದ ಮಹಿಳೆ ಎಂಬ ಈ ಖ್ಯಾತಿ ಗಳಿಸಿದರು. ಅಲ್ಲದೇ ಮೊದಲ ಪ್ರಯತ್ನದಲ್ಲೇ IPS ಫಾಸ್ ಮಾಡುವ ಮೂಲಕ ಮಾಧ್ಯಮದಲ್ಲೂ ಶೈನ್ ಆದರು.
1118
ಬಳಿಕ ಪ್ರಮೋಷನ್ ಪಡೆದು SP ಆದ ಮೆರೀನ್ ಗೆ ಬಳಿಕ ಕಮಾಂಡೆಂಟ್ ಆಫ್ ಕೇರಳ ಆರ್ಮ್ಡ್ ಬೆಟಾಲಿಯನ್ 2 ಗೆ ಪೋಸ್ಟಿಂಗ್ ಮಾಡಲಾಯ್ತು.
ಬಳಿಕ ಪ್ರಮೋಷನ್ ಪಡೆದು SP ಆದ ಮೆರೀನ್ ಗೆ ಬಳಿಕ ಕಮಾಂಡೆಂಟ್ ಆಫ್ ಕೇರಳ ಆರ್ಮ್ಡ್ ಬೆಟಾಲಿಯನ್ 2 ಗೆ ಪೋಸ್ಟಿಂಗ್ ಮಾಡಲಾಯ್ತು.
1218
2016ರಲ್ಲಿ ಅವರು ಸ್ವಾತಂತ್ರ್ಯ ದಿನದ ರಾಜ್ಯ ಪರೇಡ್ ನ್ನು ಕಮಾಂಡ್ ಮಾಡಿದ ಅತ್ಯಂತ ಚಿಕ್ಕ ವಯಸ್ಸಿನ ಆಫೀಸರ್ ಎಂಬ ಕೀರ್ತಿಗೆ ಭಾಜನರಾದರು.
2016ರಲ್ಲಿ ಅವರು ಸ್ವಾತಂತ್ರ್ಯ ದಿನದ ರಾಜ್ಯ ಪರೇಡ್ ನ್ನು ಕಮಾಂಡ್ ಮಾಡಿದ ಅತ್ಯಂತ ಚಿಕ್ಕ ವಯಸ್ಸಿನ ಆಫೀಸರ್ ಎಂಬ ಕೀರ್ತಿಗೆ ಭಾಜನರಾದರು.
1318
ಮೆರೀನ್ ರನ್ನು ಲೇಡಿ ದಬಾಂಗ್ ಎಂದೂ ಕರೆಯಲಾಗುತ್ತದೆ. ಒಂದು ಕೇಸ್ ಅವರಿಗೆ ಚಾಲೆಂಜ್ ಮಾಡಿತ್ತು. ರೇಪ್ ಕೇಸ್ ತನಿಖೆ ಅವರಿಗೆ ನೀಡಲಾಗಿತ್ತು. ಈ ಕೇಸ್ ಅವರ ಬಳಿ ತಲುಪಿದಾಗ 4 ವರ್ಷದ ಮಗುವಿನ ರೇಪ್ ಮಾಡಿದ ವ್ಯಕ್ತಿ ವಿದೇಶಕ್ಕೆ ಹಾರಿ ಮಜಾ ಮಾಡಿಕೊಂಡಿದ್ದ.
ಮೆರೀನ್ ರನ್ನು ಲೇಡಿ ದಬಾಂಗ್ ಎಂದೂ ಕರೆಯಲಾಗುತ್ತದೆ. ಒಂದು ಕೇಸ್ ಅವರಿಗೆ ಚಾಲೆಂಜ್ ಮಾಡಿತ್ತು. ರೇಪ್ ಕೇಸ್ ತನಿಖೆ ಅವರಿಗೆ ನೀಡಲಾಗಿತ್ತು. ಈ ಕೇಸ್ ಅವರ ಬಳಿ ತಲುಪಿದಾಗ 4 ವರ್ಷದ ಮಗುವಿನ ರೇಪ್ ಮಾಡಿದ ವ್ಯಕ್ತಿ ವಿದೇಶಕ್ಕೆ ಹಾರಿ ಮಜಾ ಮಾಡಿಕೊಂಡಿದ್ದ.
1418
ಸುನಿಲ್ ಕುಮಾರ್ ಹೆಸರಿನ ಕಾಮುಕನನ್ನು ಹಿಡಿಯಲು ಖುದ್ದು ಮೆರೀನ್ ವಿದೇಶಕ್ಕೆ ತೆರಳಿದರು. ಸೌದಿ ಅರೇಬಿಯಾದಲ್ಲಿದ್ದ ಆ ರೇಪಿಸ್ಟ್ ಪತ್ತೆ ಹಚ್ಚಿ, ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಆತನನ್ನು ಭಾರತಕ್ಕೆ ಎಳೆದು ತಂದಿದ್ದರು. ಈ ಮೂಲಕ ನಾರಿ ಶಕ್ತಿ ಏನೆಂಬುವುದನ್ನು ತೋರಿಸಿಕೊಟ್ಟಿದ್ದರು.
ಸುನಿಲ್ ಕುಮಾರ್ ಹೆಸರಿನ ಕಾಮುಕನನ್ನು ಹಿಡಿಯಲು ಖುದ್ದು ಮೆರೀನ್ ವಿದೇಶಕ್ಕೆ ತೆರಳಿದರು. ಸೌದಿ ಅರೇಬಿಯಾದಲ್ಲಿದ್ದ ಆ ರೇಪಿಸ್ಟ್ ಪತ್ತೆ ಹಚ್ಚಿ, ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಆತನನ್ನು ಭಾರತಕ್ಕೆ ಎಳೆದು ತಂದಿದ್ದರು. ಈ ಮೂಲಕ ನಾರಿ ಶಕ್ತಿ ಏನೆಂಬುವುದನ್ನು ತೋರಿಸಿಕೊಟ್ಟಿದ್ದರು.
1518
2015ರ ಫೆಬ್ರವರಿ 2 ರಂದು IPS ಮೆರೀನ್, ಕೇರಳದ ಮನೋ ವೈದ್ಯ ಡಾ. ಕ್ರಿಸ್ ಅಬ್ರಹಾಂ ಜೊತೆ ಮದುವೆಯಾದರು.
2015ರ ಫೆಬ್ರವರಿ 2 ರಂದು IPS ಮೆರೀನ್, ಕೇರಳದ ಮನೋ ವೈದ್ಯ ಡಾ. ಕ್ರಿಸ್ ಅಬ್ರಹಾಂ ಜೊತೆ ಮದುವೆಯಾದರು.
1618
ಮೆರೀನ್ ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಒಂದು ಬಾರಿ ಅವರು ಬ್ಯೂಟಿ ವಿದ್ ಬ್ಯೂಟಿ ಕಾಂಟೆಸ್ಟ್ ಕುರಿತಾಗಿ ತಮ್ಮ ಅಭಿಪ್ರಾಯ ಹೊರ ಹಾಕುತ್ತಾ, ಸೌಂದರ್ಯವನ್ನು ಬಿಟ್ಟು ಅವರ ಪ್ರತಿಭೆಗೆ ಗೌರವ ನೀಡಿ ಎಂದಿದ್ದರು. ಬಳಿಕ ಅವರ ಈ ಅಭಿಪ್ರಾಯಕ್ಕೆ ಎಲ್ಲರೂ ಭೇಷ್ ಎಂದಿದ್ದರು.
ಮೆರೀನ್ ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಒಂದು ಬಾರಿ ಅವರು ಬ್ಯೂಟಿ ವಿದ್ ಬ್ಯೂಟಿ ಕಾಂಟೆಸ್ಟ್ ಕುರಿತಾಗಿ ತಮ್ಮ ಅಭಿಪ್ರಾಯ ಹೊರ ಹಾಕುತ್ತಾ, ಸೌಂದರ್ಯವನ್ನು ಬಿಟ್ಟು ಅವರ ಪ್ರತಿಭೆಗೆ ಗೌರವ ನೀಡಿ ಎಂದಿದ್ದರು. ಬಳಿಕ ಅವರ ಈ ಅಭಿಪ್ರಾಯಕ್ಕೆ ಎಲ್ಲರೂ ಭೇಷ್ ಎಂದಿದ್ದರು.
1718
ಹವ್ಯಾಸದ ಕುರಿತು ಹೇಳುವುದಾದರೆ ಈ ಬ್ಯೂಟಿಫುಲ್ ಕಂ ಖಡಕ್ ಪೊಲೀಸ್ ಅಧಿಕಾರಿಗೆ ಪುಸ್ತಕಗಳನ್ನು ಓದುವುದೆಂದರೆ ಬಲು ಇಷ್ಟ. ಎಲ್ಲೇ ಹೋದರೂ ಬ್ಯಾಗ್ ತುಂಬಾ ಪುಸ್ತಕಗಳನ್ನು ಖರೀದಿಸಿ ತರುತ್ತಾರಂತೆ.
ಹವ್ಯಾಸದ ಕುರಿತು ಹೇಳುವುದಾದರೆ ಈ ಬ್ಯೂಟಿಫುಲ್ ಕಂ ಖಡಕ್ ಪೊಲೀಸ್ ಅಧಿಕಾರಿಗೆ ಪುಸ್ತಕಗಳನ್ನು ಓದುವುದೆಂದರೆ ಬಲು ಇಷ್ಟ. ಎಲ್ಲೇ ಹೋದರೂ ಬ್ಯಾಗ್ ತುಂಬಾ ಪುಸ್ತಕಗಳನ್ನು ಖರೀದಿಸಿ ತರುತ್ತಾರಂತೆ.
1818
ಸಮಸ್ಯೆಯಲ್ಲಿರುವವ ಸಹಾಯಕ್ಕೆ ಸಮಯ ನೋಡದೇ ಧಾವಿಸುವ ಅವರು, ಜನ ಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ್ದಾರೆ.
ಸಮಸ್ಯೆಯಲ್ಲಿರುವವ ಸಹಾಯಕ್ಕೆ ಸಮಯ ನೋಡದೇ ಧಾವಿಸುವ ಅವರು, ಜನ ಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ್ದಾರೆ.
click me!

Recommended Stories