ಈ ಹಿಂದೆ, ವಿಜಯವಾಡದಲ್ಲಿ ಆಡಳಿತಾತ್ಮಕ ಕಾರ್ಯಗಳಿಗಾಗಿ ನೀರಾವರಿ ಇಲಾಖೆಯ ಕಟ್ಟಡ ನೀಡಲಾಗಿತ್ತು. ಪವನ್ ಕಲ್ಯಾಣಗಾಗಿ ವಿಶೇಷವಾಗಿ ಬದಲಾವಣೆ ಮಾಡಲಾಗಿತ್ತು. ಆದರೆ ಸ್ವಲ್ಪ ಸಮಯ ಆಲೋಚಿಸಿ ಕಟ್ಟಡ ಮತ್ತು ಅದರೊಂದಿಗೆ ಬಂದಿರುವ ಪೀಠೋಪಕರಣಗಳನ್ನು ಆಂಧ್ರಪ್ರದೇಶ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ, ಹುದ್ದೆಯಲ್ಲಿ ನಮಗೆ ಮಂಜೂರಾಗಿದ್ದ ಕಚೇರಿ, ಅದರ ಪೀಠೋಪಕರಣಗಳನ್ನು ಸರ್ಕಾರಕ್ಕೆ ಹಿಂದಿರುಗಿಸುತ್ತಿದ್ದೇನೆ ಅದರ ಬದಲಾಗಿ ಮಂಗಳಗಿರಿಯಲ್ಲಿ ಕಚೇರಿಯನ್ನು ಬಳಸುತ್ತೇನೆ. ವಿಜಯವಾಡದ ಕಚೇರಿ ಅಗತ್ಯವಿಲ್ಲ ಎಂದು ಬರೆದಿದ್ದಾರೆ. ಅಲ್ಲದೆ ಕಚೇರಿ ಮಂಜೂರು ಮಾಡಿದ್ದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಧನ್ಯವಾದ ತಿಳಿಸಿದ್ದಾರೆ.