ಶೋಕಸಾಗರದಲ್ಲಿ ಮುಳುಗಿದ ಅಂಬಾನಿ ಕುಟುಂಬ, ಮುದ್ದಿನ ಸಾಕು ನಾಯಿ ಹ್ಯಾಪಿ ಇನ್ನಿಲ್ಲ

Published : May 01, 2025, 11:38 AM ISTUpdated : May 01, 2025, 11:41 AM IST

ಮುಕೇಶ್ ಅಂಬಾನಿ ಕುಟುಂಬದ ಮುದ್ದಿನ ನಾಯಿ ಹ್ಯಾಪಿ ಮೃತಪಟ್ಟಿದೆ. ಪ್ರಾಣಿಗಳನ್ನು ಅತೀಯಾಗಿ ಪ್ರೀತಿಸುವ ಅನಂತ್ ಅಂಬಾನಿ ಈ ಮುದ್ದಿನ ನಾಯಿ ಸಾಕಿದ್ದರು. ಇದೀಗ ಹ್ಯಾಪಿ ಅಗಲಿಕೆಯಿಂದ ಅಂಬಾನಿ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

PREV
14
ಶೋಕಸಾಗರದಲ್ಲಿ ಮುಳುಗಿದ ಅಂಬಾನಿ ಕುಟುಂಬ, ಮುದ್ದಿನ ಸಾಕು ನಾಯಿ ಹ್ಯಾಪಿ ಇನ್ನಿಲ್ಲ

ಅಂಬಾನಿ ಕುಟುಂಬದಲ್ಲಿ ದುಃಖ

ಅಂಬಾನಿ ಕುಟುಂಬದ ಮುದ್ದಿನ ನಾಯಿ ಹ್ಯಾಪಿ ಮಮೃತಪಟ್ಟಿದೆ. ಗೋಲ್ಡನ್ ರಿಟ್ರೈವರ್ ಜಾತಿಯ ಈ ನಾಯಿ ಅಂಬಾನಿ ಕುಟುಂಬದಲ್ಲಿ ಮುದ್ದಿನ ಮಗುವಿನಂತೆ ಬೆಳೆದಿತ್ತು. ಕಳೆದ ವರ್ಷ ನಡೆದ ಆನಂದ್ ಅಂಬಾನಿಯವರ ವಿವಾಹದಲ್ಲಿಯೂ ಇದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪನ್ನು ಧರಿಸಿ ಓಡಾಡುತ್ತಿತ್ತು  ಅನಾರೋಗ್ಯದಿಂದ ಏಪ್ರಿಲ್ 30 ರಂದು ಹ್ಯಾಪಿ  ಮೃತಪಟ್ಟಿದೆ.. ಹ್ಯಾಪಿಯ ಸಾವಿನಿಂದ ಅಂಬಾನಿ ಕುಟುಂಬವೇ ದುಃಖದಲ್ಲಿದೆ. ನೀನು ಯಾವಾಗಲೂ ನಮ್ಮ ಹೃದಯಗಳಲ್ಲಿ ಜೀವಂತವಾಗಿರುತ್ತೀಯ ಎಂದು ಅಂಬಾನಿ ಕುಟುಂಬ ಶ್ರದ್ಧಾಂಜಲಿ ಸಂದೇಶದಲ್ಲಿ ತಿಳಿಸಿದೆ. ಅಂಬಾನಿ ಕುಟುಂಬ ಎಲ್ಲ ಪ್ರೀತಿಗೆ ಪಾತ್ರವಾಗಿದ್ದ ಹ್ಯಾಪಿ ಅಗಲಿಕೆ ಕುಟುಂಬಕ್ಕೆ ತೀವ್ರ ನೋವು ತರಿಸಿದೆ. ಅದರಲ್ಲೂ ಪ್ರೀತಿಯಿಂದ ಸಾಕಿ, ಆರೈಕೆ ಮಾಡಿದ್ದ ಅನಂತ್ ಅಂಬಾನಿ ತೀವ್ರ ದಃಖತಪ್ತರಾಗಿದ್ದಾರೆ. 

24

ಮುಖೇಶ್-ನೀತಾ ಅಂಬಾನಿ ಅವರ ಕಿರಿಯ ಮಗ ಆನಂತ್ ಅಂಬಾನಿ,  ಕಳೆದ ವರ್ಷ  ರಾಧಿಕಾ ಮರ್ಚೆಂಟ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.. ಆನಂತ್ ಅಂಬಾನಿ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಗುಜರಾತಿನ ಜಾಮ್‌ನಗರದಲ್ಲಿ 'ವನತಾರ' ಎಂಬ ಪ್ರಾಣಿಧಾಮವನ್ನು ಸ್ಥಾಪಿಸಿದ್ದಾರೆ. ಆನಂದ್ ಅಂಬಾನಿ 'ವನತಾರ'ಕ್ಕಾಗಿ ತಿಂಗಳಿಗೆ 5 ರಿಂದ 7 ಕೋಟಿ ರೂ. ಖರ್ಚು ಮಾಡುತ್ತಾರೆ. ಇದರ ವಾರ್ಷಿಕ ವೆಚ್ಚ 150 ರಿಂದ 200 ಕೋಟಿ ರೂ. ಈ ವಂತಾರದಲ್ಲಿ ಗಾಯಗೊಂಡ ಪ್ರಾಣಿಗಳ ಆರೈಕೆ, ಚಿಕಿತ್ಸೆ ನಡೆಯುತ್ತದೆ. 

ಆನಂತ್ ಅಂಬಾನಿಯವರ ವನತಾರ

ಇದರಲ್ಲಿ ಪ್ರಾಣಿಗಳಿಗೆ ವಿಶೇಷ ಆಹಾರ, ಅಂತರರಾಷ್ಟ್ರೀಯ ಪಶುವೈದ್ಯರ ತಂಡದ ವೆಚ್ಚ, ಹವಾನಿಯಂತ್ರಿತ ವೈದ್ಯಕೀಯ ವಿಭಾಗಗಳು ಮತ್ತು ಆಧುನಿಕ ಪುನರ್ವಸತಿ ಕೇಂದ್ರದ ವೆಚ್ಚವೂ ಸೇರಿದೆ. ಈ ಧಾಮವನ್ನು ಆನಂದ್ ಅಂಬಾನಿ ನೇರವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಇದು ಅವರ ಕನಸಿನ ಯೋಜನೆ. ಜಾಮ್‌ನಗರದಲ್ಲಿ ರಿಲಯನ್ಸ್ ಗ್ರೀನ್ಸ್ ಪಕ್ಕದಲ್ಲಿ 3000 ಎಕರೆ ವಿಸ್ತಾರದಲ್ಲಿರುವ ವನತಾರ ಒಂದು ಐಷಾರಾಮಿ ರೆಸಾರ್ಟ್‌ನಂತಿದೆ.

34
ವನತಾರ

ಕಾಡನ್ನೇ ಸೃಷ್ಟಿಸಿದ ಆನಂದ್ ಅಂಬಾನಿ

ಆನೆ, ಸಿಂಹ, ಚಿರತೆ, ಜಿಂಕೆ, ಆಮೆ, ಕುದುರೆ ಮತ್ತು 100ಕ್ಕೂ ಹೆಚ್ಚು ಅಪರೂಪದ ಪ್ರಾಣಿಗಳಿಗೆ ಇಲ್ಲಿ ನೈಸರ್ಗಿಕ ವಾತಾವರಣ ಕಲ್ಪಿಸಲಾಗಿದೆ. ಈ ಪ್ರಾಣಿಗಳೆಲ್ಲವೂ ಆಫ್ರಿಕಾ, ಥೈಲ್ಯಾಂಡ್, ಅಮೆರಿಕ ಮತ್ತು ಭಾರತದಿಂದ ರಕ್ಷಿಸಲ್ಪಟ್ಟಿವೆ. ಆನಂದ್ ಅಂಬಾನಿಯವರ ವನತಾರ ಯೋಜನೆಯಲ್ಲಿ ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಅವು ಕಾಡಿನಲ್ಲಿರುವಂತೆ ಸ್ವಾತಂತ್ರ್ಯ ಅನುಭವಿಸುವಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.

44
ನಾಯಿ ಸಾವು

ಅದಕ್ಕಾಗಿಯೇ ವನತಾರವನ್ನು 'ಪ್ರಾಣಿಗಳ ತಾಜ್‌ಮಹಲ್' ಎಂದು ಕರೆಯಲಾಗುತ್ತದೆ. ಪ್ರಸ್ತುತ ವನತಾರದಲ್ಲಿ 200 ಆನೆಗಳು, 300 ಚಿರತೆಗಳು, 300 ಜಿಂಕೆಗಳು ಮತ್ತು 1200ಕ್ಕೂ ಹೆಚ್ಚು ಮೊಸಳೆಗಳು, ಹಾವುಗಳು ಮತ್ತು ಆಮೆಗಳನ್ನು ಪಾಲನೆ ಮಾಡಲಾಗುತ್ತಿದೆ. ಹೀಗೆ ಪ್ರಾಣಿಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುವ ಆನಂದ್ ಅಂಬಾನಿ, ತಮ್ಮ ಮನೆಯಲ್ಲೂ ಸಾಕುಪ್ರಾಣಿಗಳನ್ನು ಸಾಕಿದ್ದಾರೆ. ಅದರಲ್ಲಿ ಅವರ ಮುದ್ದಿನ ನಾಯಿಮರಿ ಹ್ಯಾಪಿಯೂ ಒಂದು.

 

Read more Photos on
click me!

Recommended Stories