ವೈಷ್ಣವರು ಏಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ ಗೊತ್ತಾ?

First Published Mar 21, 2024, 4:50 PM IST

ಹಿಂದೂ ಆಹಾರ ತತ್ವಶಾಸ್ತ್ರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು 'ತಾಮಸಿಕ' ಆಹಾರಗಳೆಂದು ವರ್ಗೀಕರಿಸಲಾಗಿದೆ. ಇಂತಹ ಆಹಾರಗಳು ಅಜ್ಞಾನವನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ.

ಕೆಲವು ಹಿಂದೂಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ. ಬ್ರಾಹ್ಮಣರು ಮತ್ತು ವೈಷ್ಣವರು ಜೀವನಪರ್ಯಂತ ಅದರಿಂದ ದೂರವಿರುತ್ತಾರೆ. ಭಗವದ್ಗೀತೆ ಮತ್ತು ಇತರ ಹಿಂದೂ ಧರ್ಮಗ್ರಂಥಗಳು ಈ ಆಹಾರಗಳನ್ನು ತಿನ್ನಬಾರದು ಎಂದು ಹೇಳುತ್ತವೆ. ಈ ಆಹಾರಗಳು ಯೋಗಿಗಳು, ಸಿದ್ಧರು ಮತ್ತು ಗುರುಗಳಿಗೆ ಒಳ್ಳೆಯದಲ್ಲ ಎಂದು ಸೂಚಿಸುತ್ತದೆ.
 

ಈರುಳ್ಳಿ ಮತ್ತು ಬೆಳ್ಳುಳ್ಳಿ ತಾಮಸಿಕ ಆಹಾರಗಳು. ಇವು ಮನಸ್ಸಿನಲ್ಲಿ ಅಜ್ಞಾನ ಮತ್ತು ಅಂಧಕಾರವನ್ನು ಹೆಚ್ಚಿಸುತ್ತವೆ. ಅವು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. 

ಭಗವದ್ಗೀತೆಯಲ್ಲಿ (17.9) ಶ್ರೀಕೃಷ್ಣನು ತುಂಬಾ ಕಹಿ, ಹುಳಿ, ಉಪ್ಪು, ಬಿಸಿ, ಕಟುವಾದ, ಒಣ ಮತ್ತು ಸುಡುವ ಆಹಾರವನ್ನು ತಿನ್ನುವುದರ ವಿರುದ್ಧ ಎಚ್ಚರಿಸುತ್ತಾನೆ. ಅತಿಯಾದ ಆಸೆಗಳಿಂದ ಬದುಕುವವರಿಗೆ ಮಾತ್ರ ಇವು ಆಕರ್ಷಣೀಯವಾಗಿದ್ದು, ಈ ಬಯಕೆಗಳಿಂದಾಗಿ ಸಂಕಟ, ಕಷ್ಟ, ಅನಾರೋಗ್ಯ ಉಂಟಾಗುತ್ತದೆ ಎಂದು ಶ್ರೀಕೃಷ್ಣ ವಿವರಿಸಿದ್ದಾನೆ. 

ಹಿಂದೂ ಆಹಾರ ತತ್ವಶಾಸ್ತ್ರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು 'ತಾಮಸಿಕ' ಆಹಾರಗಳೆಂದು ವರ್ಗೀಕರಿಸಲಾಗಿದೆ. ಇಂತಹ ಆಹಾರಗಳು ಅಜ್ಞಾನವನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ಆಲಸ್ಯ, ಕೋಪ, ಕಿರಿಕಿರಿಯಂತಹ ನಕಾರಾತ್ಮಕ ಭಾವನೆಗಳು ಹೆಚ್ಚಾಗಬಹುದು. ಆದ್ದರಿಂದಲೇ ಇವುಗಳನ್ನು ‘ರಜೋಗುಣಿ’ ಎಂದೂ ಪರಿಗಣಿಸಲಾಗುತ್ತದೆ, ಅಂದರೆ ಅವು ವಿಪರೀತವಾದ ಆಸೆಗಳನ್ನು ಉಂಟುಮಾಡಬಹುದು. 

ವೇದಗಳು ಮತ್ತು ಪುರಾತನ ಹಿಂದೂ ಧರ್ಮಗ್ರಂಥಗಳು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವವರು ಬಲವಾದ ಭೌತಿಕ ದೇಹವನ್ನು ಹೊಂದಿರುತ್ತಾರೆ ಎಂದು ಸೂಚಿಸುತ್ತದೆ. ಅವರಿಗೆ ದೈಹಿಕ ಸಹಿಷ್ಣುತೆ ಇದ್ದರೂ ಉತ್ತಮ ಬುದ್ಧಿವಂತಿಕೆ ಇರುವುದಿಲ್ಲ. ಅವರು ರಾಕ್ಷಸರಂತೆ ಲೌಕಿಕ ಮತ್ತು ಅಶುದ್ಧ ಬುದ್ಧಿಗಳನ್ನು ಹೊಂದಿದ್ದಾರೆಂದು ಶಾಸ್ತ್ರಗಳು ಹೇಳುತ್ತವೆ.

click me!