ಸಾವಿನ ನಂತರ ಆತ್ಮಕ್ಕೆ ತನ್ನವರ ಧ್ವನಿ ಕೇಳಿಸುತ್ತದೆಯೇ ಎಂಬ ಪ್ರಶ್ನೆಗೆ ಗರುಡ ಪುರಾಣ ಮತ್ತು ವಿಜ್ಞಾನ ವಿಭಿನ್ನ ಉತ್ತರಗಳನ್ನು ನೀಡುತ್ತವೆ. ಪುರಾಣಗಳ ಪ್ರಕಾರ ಆತ್ಮವು ತನ್ನವರ ದುಃಖವನ್ನು ಅನುಭವಿಸಿದರೆ, ಮೆದುಳಿನ ಕಾರ್ಯ ಸ್ಥಗಿತಗೊಳ್ಳುವುದರಿಂದ ಇದು ಅಸಾಧ್ಯವೆಂದು ವಿಜ್ಞಾನ ಹೇಳುತ್ತದೆ.
ಸಾವಿನ ನಂತರವೂ ಸತ್ತವರು ತಮ್ಮ ಸಂಬಂಧಿಕರ ಧ್ವನಿಯನ್ನು ಕೇಳುತ್ತಾರೆ ಎಂಬ ಮಾತಿದೆ. ಈ ಮಾತುಗಳು ಕುರಿತು ಮನೆಯಲ್ಲಿನ ಹಿರಿಯರು ಹಲವು ಕಥೆಗಳನ್ನು ಹೇಳುತ್ತಿರುತ್ತಾರೆ. ಸತ್ತ ನಂತರ ಆತ್ಮ ಹೇಗೆ ದೇಹದಿಂದ ಬೇರೆಯಾಗುತ್ತೆ ಎಂಬುದರ ಬಗ್ಗೆ ಹಿಂದೂ ಪುರಾಣಗಳಲ್ಲಿ ವಿವರಣೆ ಇದೆ. ಗರಡು ಪುರಾಣದಲ್ಲಿಯೂ ಈ ಅಂಶಗಳ ಬಗ್ಗೆ ಉಲ್ಲೇಖವಿದೆ
25
ಗರುಡ ಪುರಾಣದಲ್ಲಿ ಏನಿದೆ?
ಗರುಡ ಪುರಾಣದ ಪ್ರಕಾರ, ಮರಣದ ನಂತ್ರ ದೇಹದಿಂದ ಹೊರಬರುವ ಆತ್ಮ ಸ್ವಲ್ಪ ಸಮಯದವರೆಗೆ ಕುಟುಂಬ ಮತ್ತು ಮನೆ ಸುತ್ತಲೂ ಸುತ್ತಾಡುತ್ತದೆ. ಆತ್ಮ ತನ್ನ ದೇಹದ ಅಂತ್ಯಸಂಸ್ಕಾರದ ವಿಧಾನಗಳನ್ನು ವೀಕ್ಷಣೆ ಮಾಡುತ್ತದೆ. ತನ್ನ ಪ್ರೀತಿಪಾತ್ರರ ಕಣ್ಣೀರು ನೋಡಿ ದುಃಖ ಅನುಭವಿಸುತ್ತದೆ.
35
ಆತ್ಮಕ್ಕೆ ಶಕ್ತಿ
ಆದ್ರೆ ಇಂತಹ ಅನುಭವಗಳು ಆತ್ಮದ ಆಧ್ಯಾತ್ಮದ ಮೇಲೆ ನಿರ್ಧರಿತವಾಗತ್ತವೆ ಎಂದು ಗರುಡ ಪುರಾಣ ಹೇಳುತ್ತದೆ. ಮೃತ ದೇಹ ಭೌತಿಕ ಕಿವಿಗಳ ಮೂಲಕ ಧ್ವನಿಯನ್ನ ಅಲ್ಲ ಎಂದು ನಂಬಲಾಗಿದೆ. ಆತ್ಮ ಅಗಾಧ ಶಕ್ತಿಯನ್ನು ಹೊಂದಿರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ದೇಹದಿಂದ ಆತ್ಮ ಬೇರ್ಪಟ್ಟ ನಂತರ ಭೌತಿಕ ದೇಹ ಎಲ್ಲಾ ಪ್ರಜ್ಞೆಯನ್ನು ಕಳೆದುಕೊಳ್ಳುತ್ತದೆ.
ಆಧುನಿಕ ವಿಜ್ಞಾನದ ಪ್ರಕಾರ, ಸತ್ತ ಬಳಿಕ ಮೆದುಳಿಗೆ ಆಮ್ಲಜನಕದ ಪೂರೈಕೆ ಸ್ಥಗಿತಗೊಳ್ಳುತ್ತದೆ. ಹಾಗಾಗಿ ಯಾವುದೇ ಶಬ್ದವನ್ನು ಕೇಳಲು ಸಾಧ್ಯವಿಲ್ಲ. ಹೃದಯ ಬಡಿತ ನಿಂತ ನಂತರವೂ ಮೆದುಳಿನ ಚಟುವಟಿಕೆ ಸ್ವಲ್ಪ ಸಮಯದವರೆಗೆ ಮುಂದುವರಿಯಬಹುದು ಎಂದು ಸಂಶೋಧಕರು ಅಂದಾಜಿಸುತ್ತಾರೆ. ಆದ್ರೆ ಇದು ಬಹಳ ಕಡಿಮೆ ಅವಧಿಯಲ್ಲಿ ಸಂಭವಿಸುತ್ತದೆ, ಕೆಲವೇ ಕ್ಷಣಗಳವರೆ ಮೆದುಳಿನ ಚಟುವಟಿಕೆ ಕಾರ್ಯ ನಿರ್ವಹಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ.
55
ಧ್ವನಿ ಪ್ರಕ್ರಿಯೆ
ಕಿವಿಗಳು ಧ್ವನಿ ತರಂಗಗಳನ್ನು ಸ್ವೀಕರಿಸಬೇಕು. ನಂತರ ನರಗಳು ಮೆದುಳಿಗೆ ಸಂಕೇತಗಳನ್ನು ರವಾನಿಸಬೇಕು. ಮೆದುಳು ಆ ಸಂಕೇತಗಳನ್ನು ಸಂಸ್ಕರಿಸಿ ಅರ್ಥೈಸಿಕೊಳ್ಳಬೇಕು. ಈ ಇಡೀ ವ್ಯವಸ್ಥೆಯು ಸಾವಿನ ನಂತರ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಆಮ್ಮಜನಕ ಪೂರೈಕೆ ಸ್ಥಗಿತಗೊಳ್ಳುತ್ತಿದ್ದಂತೆ ಈ ಎಲ್ಲಾ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ.