ರಾಹುವಿನ ಆರ್ದ್ರಾ ನಕ್ಷತ್ರಕ್ಕೆ ಮಂಗಳನಿಂದ ಅಂಗಾರಕ ಯೋಗ; ಯಾರಿಗೆಲ್ಲಾ ಅಶುಭ ಯೋಗ ಶುರು

Published : Aug 18, 2026, 08:23 AM IST

ಮಂಗಳ ಗ್ರಹವು ರಾಹುವಿನ ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸುವುದರಿಂದ 'ಅಂಗಾರಕ ಯೋಗ' ಎಂಬ ಅಶುಭ ಯೋಗ ಉಂಟಾಗಿದೆ. ಈ ಯೋಗದ ಪ್ರಭಾವದಿಂದಾಗಿ ಸೆಪ್ಟೆಂಬರ್ 2ರವರೆಗೆ 4 ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಕೆಲವು ಪರಿಹಾರಗಳನ್ನು ಪಾಲಿಸಬೇಕು.

PREV
16
ಶುಭ ಮತ್ತು ಅಶುಭ ಯೋಗ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿ ಮತ್ತು ನಕ್ಷತ್ರಗಳನ್ನು ಬದಲಾಯಿಸುವುದು ಸಾಮಾನ್ಯ. ಈ ಗ್ರಹ ಸಂಚಾರದ ಸಮಯದಲ್ಲಿ ಉಂಟಾಗುವ ಶುಭ ಮತ್ತು ಅಶುಭ ಯೋಗಗಳ ಪ್ರಭಾವವು 12 ರಾಶಿಗಳ ಮೇಲೂ ಇರುತ್ತದೆ.

ಅದರಂತೆ, ನವಗ್ರಹಗಳ ಸೇನಾಧಿಪತಿ, ಧೈರ್ಯ, ಶೌರ್ಯ, ಕೋಪ ಮತ್ತು ಶಕ್ತಿಯ ಅಧಿಪತಿಯಾದ ಮಂಗಳ ಗ್ರಹವು ಸುಮಾರು 45 ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಜೊತೆಗೆ, ನಿರ್ದಿಷ್ಟ ಅಂತರದಲ್ಲಿ ನಕ್ಷತ್ರ ಸಂಚಾರವನ್ನೂ ಮಾಡುತ್ತಾನೆ. ಇತ್ತೀಚೆಗೆ (ಆಗಸ್ಟ್ 12) ಮಂಗಳ ಗ್ರಹವು ರಾಹುವಿನ ಆಧಿಪತ್ಯವಿರುವ ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ.

26
ಅಂಗಾರಕ ಯೋಗ ಎಂದರೇನು?

ಮಂಗಳ ಮತ್ತು ರಾಹುವಿನ ಈ ಸಂಯೋಗವು ಜ್ಯೋತಿಷ್ಯದಲ್ಲಿ 'ಅಂಗಾರಕ ಯೋಗ' ಎಂಬ ಅಶುಭ ಯೋಗವನ್ನು ಸೃಷ್ಟಿಸುತ್ತದೆ. ಈ ಯೋಗದ ಪ್ರಭಾವದಿಂದ ಮಾನಸಿಕ ಒತ್ತಡ, ಹಠಾತ್ ಆರೋಗ್ಯ ಸಮಸ್ಯೆ ಮತ್ತು ವೃತ್ತಿಪರ ಅಡೆತಡೆಗಳು ಉಂಟಾಗಬಹುದು.

ಮಂಗಳ ಗ್ರಹವು ಸೆಪ್ಟೆಂಬರ್ 2ರವರೆಗೆ ಇದೇ ನಕ್ಷತ್ರದಲ್ಲಿ ಸಂಚರಿಸುವುದರಿಂದ, ಈ ಅಶುಭ ಯೋಗದ ಪ್ರಭಾವ ಅಲ್ಲಿಯವರೆಗೂ ಇರಲಿದೆ. ವಿಶೇಷವಾಗಿ, ಈ ಕೆಳಗಿನ 3 ರಾಶಿಯವರು ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

36
ಕನ್ಯಾ ರಾಶಿ

ಕನ್ಯಾ ರಾಶಿಯವರು ತಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಂಯಮ ಪಾಲಿಸಬೇಕು. ಹೊಸ ವ್ಯಕ್ತಿಗಳ ಪರಿಚಯ ಮತ್ತು ಸ್ನೇಹವು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸಬಹುದು. ದೈನಂದಿನ ಚಟುವಟಿಕೆಗಳಲ್ಲಿ ಗಮನವಿರಲಿ. ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆಯಿರುವುದರಿಂದ, ಯಾವುದೇ ಸಮಸ್ಯೆಯನ್ನು ತಾಳ್ಮೆಯಿಂದ ಮಾತನಾಡಿ ಬಗೆಹರಿಸುವುದು ಶಾಂತಿಯನ್ನು ನೀಡುತ್ತದೆ.

ಪರಿಹಾರ: ಬಡವರಿಗೆ ಅಥವಾ ಸ್ವಚ್ಛತಾ ಕಾರ್ಮಿಕರಿಗೆ ಆಹಾರ ದಾನ ಮಾಡುವುದರಿಂದ ಶುಭ ಯೋಗ ಉಂಟಾಗುತ್ತದೆ.

46
ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ಸಮಯದಲ್ಲಿ ಅನಗತ್ಯ ಅಲೆದಾಟ ಮತ್ತು ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಮನಸ್ತಾಪ ಉಂಟಾಗಬಹುದು. ವಾಹನ ಚಲಾಯಿಸುವಾಗ ಹೆಚ್ಚಿನ ಜಾಗರೂಕತೆ ಬೇಕು. ಕಾನೂನು ಅಥವಾ ಸಾಲ ಸಂಬಂಧಿತ ವಿಷಯಗಳಲ್ಲಿ ಅವಸರಪಟ್ಟು ಯಾವುದೇ ಭರವಸೆ ನೀಡಬೇಡಿ.

ಪರಿಹಾರ: ರಾಹುವಿನ ಪ್ರಭಾವವನ್ನು ಕಡಿಮೆ ಮಾಡಲು, ಹತ್ತಿರದ ದುರ್ಗಾದೇವಿ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಿ ಪೂಜಿಸಿ.

56
ಮೇಷ ರಾಶಿ

ಮೇಷ ರಾಶಿಯವರಿಗೆ ಈ ಸಮಯದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಬೇಕು. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗಿ, ಮಾನಸಿಕ ಒತ್ತಡ ಉಂಟಾಗಬಹುದು. ವ್ಯಾಪಾರ ಮತ್ತು ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಸವಾಲುಗಳು ಎದುರಾಗಬಹುದು. ಹಣಕಾಸಿನ ವಿಷಯಗಳಲ್ಲಿ ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು, ತಾಳ್ಮೆಯಿಂದ ಇರುವುದು ಉತ್ತಮ.

ಪರಿಹಾರ: ಪ್ರತಿ ಮಂಗಳವಾರ ತೊಗರಿಬೇಳೆ ದಾನ ಮಾಡುವುದರಿಂದ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

66
ಮಕರ ರಾಶಿ

ಮಕರ ರಾಶಿಯವರಿಗೆ ವೃತ್ತಿಯಲ್ಲಿ ಮಂದಗತಿಯ ವಾತಾವರಣ ಇರಬಹುದು. ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳಲ್ಲಿ ತೊಡಗುವುದನ್ನು ತಪ್ಪಿಸುವುದು ಉತ್ತಮ. ಹೊಸ ಪ್ರಯತ್ನಗಳು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ದೊಡ್ಡ ನಿರ್ಧಾರಗಳನ್ನು ಮುಂದೂಡುವುದು ಒಳ್ಳೆಯದು. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಪದಗಳಲ್ಲಿ ಎಚ್ಚರಿಕೆ ಇರಲಿ.

ಪರಿಹಾರ: ಮಂಗಳವಾರ ಅಥವಾ ಶನಿವಾರದಂದು ಹಸುವಿಗೆ ಸೊಪ್ಪು ಅಥವಾ ಬಾಳೆಹಣ್ಣು ನೀಡುವುದರಿಂದ ಕಾರ್ಯದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories