ಗುರು-ಚಂದ್ರನಿಂದ ಗಜಕೇಸರಿ ರಾಜಯೋಗ, ಈ ರಾಶಿಗೆ ಶುಭಕಾಲ ಆರಂಭ

First Published Oct 28, 2023, 10:32 AM IST

ದೇವಗುರು ಗುರು ಮತ್ತು ಚಂದ್ರರು ಒಟ್ಟಾಗಿ ಶರದ್‌ ಪೂರ್ಣಿಮೆಯ ದಿನದಂದು ಅಂದರೆ ಇಂದು ಗಜಕೇಸರಿ ರಾಜಯೋಗದ ಮಂಗಳಕರ ಸಂಯೋಜನೆ ಉಂಟಾಗುತ್ತೆ.

ವೈದಿಕ ಜ್ಯೋತಿಷ್ಯದ ಪ್ರಕಾರ,ಮಂಗಳಕರ ಯೋಗ ಮತ್ತು ರಾಜಯೋಗವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶರದ್‌ ಪೂರ್ಣಿಮೆಯ ದಿನವಾದ ಇಂದು ಈ ರಾಶಿಗೆ ಗಜಕೇಸರಿ ಯೋಗವು ಉಂಟಾಗುತ್ತಿದೆ.
 

ಈ ರಾಜಯೋಗವು ಮೇಷ ರಾಶಿಯವರಿಗೆ ವರದಾನಕ್ಕಿಂತ ಕಡಿಮೆಯಿಲ್ಲ.ವ್ಯವಹಾರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಹೂಡಿಕೆ ಮಾಡಲು ಇದು ಉತ್ತಮ ಸಮಯವಾಗಿದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚುತ್ತದೆ.ಹಣದ ಲಾಭವಿದೆ.
 

Latest Videos


ಗುರು- ಚಂದ್ರ ಮಿಥುನ ರಾಶಿಯ ಆದಾಯವನ್ನ ಹೆಚ್ಚಿಸಬಹುದು. ವ್ಯಾಪಾರಸ್ಥರ ಲಾಭದಲ್ಲಿ ಭಾರಿ ಹೆಚ್ಚಳವಾಗಲಿದೆ. ನಿಮ್ಮ ವ್ಯಾಪಾರ ವಿಸ್ತರಣೆ ಯಾಗಬಹುದು.ಆರೋಗ್ಯ ಉತ್ತಮವಾಗಿರುತ್ತದೆ.

ಕರ್ಕಾಟಕ ರಾಶಿಯವರಿಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ ಅದೃಷ್ಟವು ನಿಮ್ಮಕಡೆಯಿದೆ. ಸಂಗಾತಿಯೊಂದಿಗೆ ಸಂಬಂಧವು ಗಟ್ಟಿಯಾಗಿರುತ್ತದೆ. ಆದಾಯ ಹೆಚ್ಚಾಗಬಹುದು. ಹೊಸ ಉದ್ಯೋಗವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ.

click me!