ಮಾರಿ ಕಣ್ಣು… ಹೋರಿ ಕಣ್ಣು… ಯಾವ ಕೆಟ್ಟ ಕಣ್ಣು ಬೀಳದಿರಲು ಇದನ್ನ ಮಾಡಿ

First Published May 22, 2023, 5:50 PM IST

ಒಬ್ಬ ವ್ಯಕ್ತಿ ಕೆಟ್ಟ ದೃಷ್ಟಿ ಬಿದ್ದರೆ, ಅವನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ವ್ಯಕ್ತಿ ದೈಹಿಕ ಸಮಸ್ಯೆಗಳನ್ನು ಮತ್ತು ಹಣದ ನಷ್ಟವನ್ನು ಎದುರಿಸಬೇಕಾಗುತ್ತೆ. ಹಾಗೆಯೇ, ವ್ಯಕ್ತಿ ಮಾಡಿದ ಕೆಲಸವೂ ಹದಗೆಡಲು ಪ್ರಾರಂಭಿಸುತ್ತೆ.
 

ಕೆಟ್ಟ ದೃಷ್ಟಿಯನ್ನು(Evil eye) ತೆಗೆದುಹಾಕಲು ಉಪ್ಪು, ನಿಂಬೆ ಅಥವಾ ಮೆಣಸನ್ನು ಬಳಸಲಾಗುತ್ತೆ. ಮನೆಗಳಲ್ಲಿ ಪ್ರತಿದಿನ ತಯಾರಿಸಿದ ರೊಟ್ಟಿಯೊಂದಿಗೆ ಸಹ ಕೆಟ್ಟ ದೃಷ್ಟಿಯನ್ನು ದೂರ ಮಾಡಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ, ಕೆಟ್ಟ ದೃಷ್ಟಿಯನ್ನು ತೊಡೆದುಹಾಕಲು ರೊಟ್ಟಿಯ ಕೆಲವು ಪರಿಹಾರಗಳಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ. 

ದೃಷ್ಟಿ ಬಿದ್ದಿದೆ ಅನ್ನೋದು ಹೇಗೆ ತಿಳಿಯುತ್ತೆ?: ಒಬ್ಬ ವ್ಯಕ್ತಿಗೆ ಕೆಟ್ಟ ದೃಷ್ಟಿ ಬಿದ್ದರೆ, ಅವನು ಮತ್ತೆ ಮತ್ತೆ ಅನಾರೋಗ್ಯಕ್ಕೆ(Unhealthy) ಒಳಗಾಗಲು ಪ್ರಾರಂಭಿಸುತ್ತಾನೆ ಮತ್ತು ರೋಗದ ಕಾರಣ ತಿಳಿಯೋದಿಲ್ಲ. ಹಾಗೆಯೇ, ವ್ಯಕ್ತಿಯ ಮನಸ್ಸು ಅನಗತ್ಯವಾಗಿ ತೊಂದರೆಗೀಡಾಗಲು ಪ್ರಾರಂಭಿಸುತ್ತೆ.
 

failure

ಅದೇ ಸಮಯದಲ್ಲಿ, ವ್ಯಕ್ತಿಯು ವೃತ್ತಿಜೀವನದಲ್ಲಿ ವೈಫಲ್ಯಗಳನ್ನು(Failure) ಎದುರಿಸಬೇಕಾಗುತ್ತೆ. ಪರಸ್ಪರ ಸಂಬಂಧಗಳಲ್ಲಿ ಅನಗತ್ಯ ಜಗಳಗಳಿದ್ದರೆ, ಅದು ದೃಷ್ಟಿ ದೋಷಗಳಿಂದಾಗಿ ನಡೆಯುತ್ತಿದೆ ಎಂದು ಅರ್ಥಮಾಡಿಕೊಳ್ಳಬೇಕು.

ರೊಟ್ಟಿಯಿಂದ (Roti) ಕೆಟ್ಟ ದೃಷ್ಟಿ ನಿವಾರಣೆ: ದೃಷ್ಟಿ ದೋಷಗಳನ್ನು ತೊಡೆದುಹಾಕಲು, ರೊಟ್ಟಿಯನ್ನು ತಯಾರಿಸಿ. ಈಗ ಬೇಯಿಸಿದ ಭಾಗಕ್ಕೆ ಎಣ್ಣೆ ಹಾಕಿ ಮತ್ತು ಅದರಲ್ಲಿ ಕೆಂಪು ಮೆಣಸಿನಕಾಯಿ ಮತ್ತು ಉಪ್ಪನ್ನು ಹಾಕಿ. ನಂತರ ಯಾರ ಮೇಲೆ ದೃಷ್ಟಿ ಬಿದ್ದಿದೆಯೋ, ಆ ವ್ಯಕ್ತಿಯ ಸುತ್ತಲೂ ರೊಟ್ಟಿಯನ್ನು ಮೇಲೆ ಏಳು ಬಾರಿ ಸುತ್ತಿಸಬೇಕು. ಇದರ ನಂತರ, ಆ ರೊಟ್ಟಿಯನ್ನು ನಾಲ್ಕು ದಾರಿ ಸೇರುವಲ್ಲಿ ಬಿಡಿ. ಈ ಕೆಲಸವನ್ನು ಮಾಡುವಾಗ ನಿಮಗೆ ಯಾವುದೇ ಅಡೆತಡೆಗಳಿರಬಾರದು. ಇಲ್ಲದಿದ್ದರೆ, ಈ ಪರಿಹಾರವು ನಿಷ್ಪ್ರಯೋಜಕವಾಗುತ್ತೆ.
 

ಈ ರೊಟ್ಟಿಯ ಪರಿಹಾರವು ಪರಿಣಾಮಕಾರಿಯಾಗಿದೆ: ಮೊದಲು ರೊಟ್ಟಿಯನ್ನು ತಯಾರಿಸಿ ಅದನ್ನು ನಾಲ್ಕು ಭಾಗಗಳಾಗಿ ವಿಭಜಿಸಿ ಮತ್ತು ಅದರ ಮೇಲೆ ತುಪ್ಪವನ್ನು ಹಾಕಿ. ರೊಟ್ಟಿಯ ಎಲ್ಲಾ ನಾಲ್ಕು ಭಾಗಗಳಲ್ಲಿ ಸಕ್ಕರೆ(Sugar), ಬೆಲ್ಲದ ಪಾಯಸ  ದಂತಹ ಸಿಹಿಯನ್ನು ಇರಿಸಿ. 

ಈ ರೊಟ್ಟಿಯ ಮೊದಲ ತುಂಡನ್ನು ಹಸುವಿಗೆ(Cow) ತಿನ್ನಿಸಿ. ಎರಡನೇ ತುಂಡನ್ನು ನಾಯಿಗೆ ತಿನ್ನಿಸಿ. ರೊಟ್ಟಿಯ ಮೂರನೇ ಭಾಗವನ್ನು ಕಾಗೆಗೆ ತಿನ್ನಿಸಿ. ರೊಟ್ಟಿಯ ನಾಲ್ಕನೇ ಭಾಗವನ್ನು ಭಿಕ್ಷುಕನಿಗೆ ದಾನ ಮಾಡಿ. ಸಮಯಕ್ಕೆ ಸರಿಯಾಗಿ ಭಿಕ್ಷುಕರು ಸಿಗದಿದ್ದರೆ, ಇರುವೆಗಳಿಗೆ ಒಂದು ತುಂಡು ರೊಟ್ಟಿಯನ್ನು ಹಾಕಿ, ಇದು ನಿಮ್ಮ ಮನೆಯಲ್ಲಿನ ಸಮಸ್ಯೆಗಳನ್ನು ತೆಗೆದುಹಾಕುತ್ತೆ.

click me!