ಸನಾತನ ಹಿಂದೂ ಸಂಪ್ರದಾಯದ ಹಿಂದೆ ಅಡಗಿದೆ ವಿಜ್ಞಾನದ ರಹಸ್ಯ

First Published Oct 23, 2020, 6:39 PM IST

ಹಿಂದೂ ಧರ್ಮದಲ್ಲಿ ಸಂಪ್ರದಾಯ ಆಚರಣೆಗಳಿಗೆ ಬಹು ಮುಖ್ಯವಾದ ಸ್ಥಾನವಿದೆ.  ಹಿಂದೂ ಧರ್ಮದಲ್ಲಿ ಅನೇಕ ಧಾರ್ಮಿಕ ಆಚರಣೆಗಳನ್ನು ನಾವು ನೋಡಬಹುದು. ಈ ಆಚರಣೆಗಳಿಗೆ ಅವುಗಳದೇ ಆದ ಪೌರಾಣಿಕ ಕತೆ ಒಂದೆಡೆ ಇದ್ದರೆ, ಮತ್ತೊಂದೆಡೆ ವೈಜ್ಞಾನಿಕ ಕಾರಣವೂ ಇದೆ. ನಾವು ಇಲ್ಲಿವರೆಗೆ ನಂಬಿಕೊಂಡು ಬಂದಿರುವ ಪ್ರತಿಯೊಂದು ಆಚರಣೆಯ ಹಿಂದೆ ಇರುವಂತಹ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳಿ....
 

ನಮಸ್ತೆ: ಎರಡೂ ಕೈ ಜೋಡಿಸಿ ನಮಸ್ಕರಿಸಿದಾಗ ನಮ್ಮ ಇಂದ್ರಿಯಾಗಳು ಆಕ್ಟೀವ್‌ ಆಗುತ್ತದೆ. ಇದರಿಂದ ನಮ್ಮ ಮುಂದೆ ಇದ್ದ ವ್ಯಕ್ತಿ ಬಹುಕಾಲ ನೆನಪಿನಲ್ಲಿರುತ್ತಾರೆ.
undefined
ಘಂಟೆ:ಘಂಟೆ ಸದ್ದಿಗೆ ದುಷ್ಟಶಕ್ತಿಗಳು ದೇವಸ್ಥಾನ ಒಳಗೆ ಸುಳಿಯಲ್ಲ ಎಂಬುದು ನಂಬಿಕೆ. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಘಂಟೆ ಸದ್ದು ಕೇಳಿದೊಡನೆ ನಮ್ಮ ಮನಸ್ಸುಗಳು ಏಕಾಗ್ರತೆ ಹೊಂದುತ್ತವೆ.
undefined
ದೇವರ ಮೂರ್ತಿ: ಹಿಂದೂ ಧರ್ಮದಲ್ಲಿ ಮೂರ್ತಿಯೇ ದೇವರು. ವೈಜ್ಞಾನಿಕ ಕಾರಣವೇನೆಂದ್ರೆ ಮೂರ್ತಿ ಪೂಜೆ ವೇಳೆ ಭಕ್ತರಲ್ಲಿ ಏಕಾಗ್ರತೆ, ಹಾಗೂ ಧ್ಯಾನ ಮನೋಭಾವ ಮೂಡುತ್ತದೆ.
undefined
ಸಿಂಧೂರ: ಸಿಂಧೂರ ವಿವಾಹಿತೆ ಮಹಿಳೆ ಲಕ್ಷಣ. ಸಿಂಧೂರ ಹಚ್ಚುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಲ್ಲದೇ ಮನಸ್ಸಿನ ಒತ್ತಡ ಮತ್ತು ಆಯಾಸ ನಿವಾರಣೆಯಾಗುತ್ತದೆ. ಕುಂಕುಮ ಮಹಿಳೆಯ ಅದೃಷ್ಟ ಎಂಬುವುದು ನಂಬಿಕೆ. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಎರಡು ಹುಬ್ಬುಗಳ ಮಧ್ಯೆ ಕುಂಕುಮ ಹಚ್ಚುವುದರಿಂದ ಮುಖದ ಸ್ನಾಯುಗಳಿಗೆ ರಕ್ತ ಸಂಚಾರವಾಗುತ್ತದೆ.
undefined
ಮೆಹಂದಿ: ಇದು ಆರ್ಯುವೇದಿಕ್‌ ಔಷಧಿ ಇದ್ದಂತೆ. ಮೆಹಂದಿ ಸ್ಟ್ರೆಸ್‌ ಕಡಿಮೆ ಮಾಡುವುದಲ್ಲದೇ ದೇಹವನ್ನು ತಂಪಾಗಿಸುತ್ತದೆ.
undefined
ಕಾಲುಂಗರ: ಹಿಂದೂ ಮಹಿಳೆಯರು ಕಾಲಿನ ಎರಡನೇ ಬೆರಳಿಗೆ ಕಾಲುಂಗುರ ತೊಡುವುದು ಸಂಪ್ರದಾಯ. ವೈಜ್ಞಾನಿಕ ಕಾರಣ ಇದರಿಂದ ಮಹಿಳೆಯರ ಋತು ಚಕ್ರ ಸರಾಗವಾಗಿ ಆಗುತ್ತದೆ.
undefined
ಸೂರ್ಯ ನಮಸ್ಕಾರ: ಹಿಂದೂಗಳು ಸೂರ್ಯನನ್ನು ದೇವರೆಂದು ಪೂಜಿಸುತ್ತಾರೆ. ಆದ್ರೆ ವೈಜ್ಞಾನಿಕ ಕಾರಣ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳನ್ನು ನೋಡಿದ್ರೆ ಕಣ್ಣುಗಳಿಗೆ ಉತ್ತಮ.
undefined
ಕಾಲಿಗೆ ನಮಸ್ಕಾರ:ಕಾಲು ಮುಟ್ಟಿ ನಮಸ್ಕರಿಸುವುದು ಒಂದು ಪದ್ಧತಿ. ಆದ್ರೆ ವೈಜ್ಞಾನಿಕವಾಗಿ ಇದರಿಂದ ನಮ್ಮೊಳಗಿನ ಅಹಂ ಕಡಿಮೆಯಾಗುತ್ತದೆ. ನಮ್ಮಲ್ಲಿ ಸಕಾರಾತ್ಮಕ ಆಲೋಚನೆಗಳು ಮೂಡುತ್ತವೆ
undefined
ಬಳೆಗಳು: ಬಳೆಗಳು ಮುತ್ತೈದೆಯ ಸಂಪತ್ತು ಎಂಬುದು ಹಿರಿಯರ ಮಾತು. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಕೈ ಮಣಿಕಟ್ಟಿನ ಪಲ್ಸ್ ಬಡಿತವನ್ನು ಆಕ್ಟೀವ್ ಆಗಿಡಲು ಬಳೆಗಳು ಸಹಕಾರಿ.
undefined
ಗೆಜ್ಜೆ:ಹೆಣ್ಣು ಮಕ್ಕಳ ಕಾಲಿನ ಅಂದ ಹೆಚ್ಚಿಸುವ ಗೆಜ್ಜೆ. ಇದನ್ನು ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿ ಹಾಕಲಾಗುತ್ತದೆ. ಗೆಜ್ಜೆಯ ಸದ್ದಿನಿಂದ ಮನೆಯಲ್ಲಿ ದುಷ್ಟ ಶಕ್ತಿಗಳ ಸುಳಿವಿರುವುದಿಲ್ಲ. ಜೊತೆಗೆ ಕಾಲಿಗೆ ಬೆಳ್ಳಿ ಧರಿಸುವುದರಿಂದ ದೇಹಾರೋಗ್ಯ ಉತ್ತಮವಾಗಿರುತ್ತದೆ ಎನ್ನಲಾಗುತ್ತದೆ.
undefined
click me!