Chanakya niti : ಸಂತೋಷವನ್ನೇ ನಾಶ ಮಾಡುವ ಜೀವನದ 3 ದುಃಖಗಳು

First Published Sep 19, 2022, 5:58 PM IST

ಚಾಣಕ್ಯನು ಸಂತೋಷದ ಜೀವನದ ಬಗ್ಗೆ ತನ್ನ ಆಲೋಚನೆಗಳನ್ನು ವಿವರವಾಗಿ ಹಂಚಿಕೊಂಡಿದ್ದಾನೆ.  ಚಾಣಕ್ಯ ನೀತಿಯಲ್ಲಿ ನೀವು ಅಂತಹ ಉತ್ತಮವಾದ ವಿಷಯಗಳನ್ನು ಕಾಣಬಹುದು. ಇಲ್ಲಿನ ಜೀವನ ಪಾಠ ಇದೆ, ನಾವು ಕಲಿಯಬೇಕಾದ ಅಂಶಗಳನ್ನು ಸಹ ನೀಡಲಾಗುತ್ತದೆ. ಇಂದು ಚಾಣಕ್ಯ ತಿಳಿಸಿದಂತಹ ದುಃಖದ ವಿಷಯಗಳ ಬಗ್ಗೆ ಮಾತನಾಡೋಣ. ಇವರು ಹೇಳುವಂತೆ 3 ದುಃಖಗಳು ಒಬ್ಬ ವ್ಯಕ್ತಿಯನ್ನು ಟೊಳ್ಳಾಗಿಸುತ್ತದೆ. ನೀವು ಈ ದುಃಖ ಎದುರಿಸಿದರೆ, ಮನೆ ಸ್ಮಶಾನವಾಗುತ್ತದೆ. 

ಸಂತೋಷ ಮತ್ತು ದುಃಖ ಜೀವನದ ಒಂದು ಭಾಗ. ದುಃಖವಿದ್ದರೆ, ಸಂತೋಷವೂ ಬರುತ್ತದೆ. ಚಾಣಕ್ಯನು ಸಂತೋಷದ ಜೀವನದ ಬಗ್ಗೆ ತನ್ನ ಅಭಿಪ್ರಾಯಗಳನ್ನು ವಿವರವಾಗಿ ಹಂಚಿಕೊಂಡಿದ್ದಾನೆ, ಆದರೆ 3 ದುಃಖಗಳು ಒಬ್ಬ ವ್ಯಕ್ತಿಯನ್ನು ಟೊಳ್ಳಾಗಿಸುತ್ತದೆ. ನೀವು ಈ ದುಃಖಗಳನ್ನು ಎದುರಿಸಿದರೆ, ಮನೆಯ ಆನಂದ (Happiness) ಕೊನೆಗೊಳ್ಳುತ್ತದೆ, ದುಃಖಗಳ ಪರ್ವತವು ವ್ಯಕ್ತಿಯ ಮೇಲೆ ಬಂದೆರಗುತ್ತವೆ. ಚಾಣಕ್ಯನ ಪ್ರಕಾರ, ಮೂರು ಘಟನೆಗಳು ದುರಾದೃಷ್ಟದ (Bad Luck) ಸಂಕೇತವಾಗಿದೆ. ಮಾನವ ಜೀವನದ ಅತಿದೊಡ್ಡ ದುಃಖವನ್ನು ತಿಳಿಯೋಣ.

ಅನುಮಾನಾಸ್ಪದ ಸಂಗಾತಿ

ಸಂದೇಹಕ್ಕೆ (doubt) ಯಾವುದೇ ಪರಿಹಾರವಿಲ್ಲ. ಅಂದರೆ ಸಂಶಯಕ್ಕೆ ಮದ್ದಿಲ್ಲ ಅನ್ನೋದನ್ನು ನಾವು ಹಿಂದಿನಿಂದಲೂ ಕೇಳಿದ್ದೇವೆ. ಒಮ್ಮೆ ಮನಸ್ಸಿನಲ್ಲಿ ಸಂದೇಹದ ಆಲೋಚನೆಗಳು ಉದ್ಭವಿಸಿದರೆ, ಜೀವನ ಹಾಳಾಗುತ್ತದೆ. ಸಂದೇಹವು ವೈವಾಹಿಕ ಜೀವನವನ್ನು ವಿಷಪೂರಿತಗೊಳಿಸುತ್ತದೆ. ಅಷ್ಟೇ ಅಲ್ಲ ಮ್ಯಾರೀಡ್ ಲೈಫ್ ಅನ್ನೆ ಕೊನೆಗೊಳಿಸುತ್ತೆ.

ವೈವಾಹಿಕ ಜೀವನವು (married life) ಕಾರಿನ ಎರಡು ಚಕ್ರಗಳಿದ್ದಂತೆ, ಒಂದರಲ್ಲಿ ದೋಷವಿದ್ದರೆ, ಮುಂದೆ ನಡೆಯುವುದು ಕಷ್ಟ. ಅದೇ ರೀತಿಯಲ್ಲಿ, ಸಂಗಾತಿಯು, ಮಹಿಳೆ ಅಥವಾ ಪುರುಷನು, ಪರಸ್ಪರರ ಬಗ್ಗೆ ಸಂದೇಹದ ಭಾವನೆಯನ್ನು ಹೊಂದಿದ್ದರೆ, ಅನೇಕ ಜೀವನಗಳು ನರಕವಾಗುತ್ತವೆ. ಅನೇಕ ಬಾರಿ ವಿಚ್ಛೇದನದಲ್ಲಿ ಸಂಬಂಧ ಕೊನೆಗೊಳ್ಳುತ್ತೆ.

ವಿಧವೆ ಮಗಳು

ಸೂಕ್ತ ವರ ಮತ್ತು ಉತ್ತಮ ಮನೆ ನೋಡಿ ಮಗಳನ್ನು ಮದುವೆ ಮಾಡಿ ಕೊಡೋದು ಪ್ರತಿಯೊಬ್ಬ ತಂದೆಯ ಕನಸು. ಮಗಳ ನಿರ್ಗಮನವು ತಂದೆಗೆ ತುಂಬಾ ನೋವಿನ ಸಮಯವಾಗಿದೆ, ಆದರೆ ಬದುಕಿರುವಾಗ ಅವಳನ್ನು ವಿಧವೆಯಾಗಿ (widow) ನೋಡುವುದು ಇನ್ನೂ ಹೆಚ್ಚು ದುಃಖಕರವಾಗಿದೆ. ಇದು ಎಂತಹ ದುಃಖವೆಂದರೆ, ಮಗಳ ಸಂತೋಷವನ್ನು ಕಿತ್ತುಕೊಳ್ಳುವುದಲ್ಲದೆ, ಅತ್ತೆ-ಮಾವಂದಿರು ಮತ್ತು ತಾಯಂದಿರ ಮನೆಗಳನ್ನು ದುಃಖದಿಂದ ತುಂಬುವಂತೆ ಮಾಡುತ್ತೆ.

ಕುಡಿಯುವ ಮಗ

ಪ್ರತಿಯೊಬ್ಬ ಪೋಷಕರು ತಮ್ಮ ಮಗ ಆದರ್ಶವಾದಿಯಾಗಬೇಕೆಂದು, ಸಾಕಷ್ಟು ಪ್ರಗತಿ ಸಾಧಿಸಬೇಕೆಂದು ಬಯಸುತ್ತಾರೆ. ವೃದ್ಧಾಪ್ಯದಲ್ಲಿ, ಹೆತ್ತವರ ಬೆಂಬಲವನ್ನು ನೀಡಬೇಕು, ಆದರೆ ಮಗ ನಿಷ್ಪ್ರಯೋಜಕವಾಗಿ ಬೆಳೆದರೆ, ಹೆತ್ತವರಿಗೆ ಇದಕ್ಕಿಂತ ದೊಡ್ಡ ದುಃಖ ಬೇರೊಂದಿಲ್ಲ. 
 

ಚಾಣಕ್ಯನ ಪ್ರಕಾರ, ಮಗು ಒಂದಾಗಿರಬಹುದು, ಎರಡಾಗಿರಬಹುದು ಆದರೆ ಆ ಮಗು ಉತ್ತಮ ಗುಣ ಮತ್ತು ಬುದ್ಧಿವಂತಿಕೆ ಹೊಂದಿದ್ದರೆ, ಪೋಷಕರು ಎಂದಿಗೂ ವೃದ್ಧಾಶ್ರಮದಲ್ಲಿ ವಾಸಿಸಬೇಕಾಗಿಲ್ಲ. ಅಲ್ಲದೇ ಮಗ ಕುಡುಕನಾಗಿ ಬೆಳೆದರೆ ತಂದೆ -ತಾಯಿಗೆ ಅದಕ್ಕಿಂತ ದುಃಖದ ವಿಷಯ ಮತ್ತೊಂದಿಲ್ಲ.
 

click me!