Published : Apr 26, 2019, 09:03 AM ISTUpdated : Apr 26, 2019, 09:23 AM IST
ಕಾಂಗ್ರೆಸ್ಸಿನ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೇಗುಲ ನಗರಿ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಬಹುದು, ತನ್ಮೂಲಕ ಕಾಶಿಯಲ್ಲಿ ರೋಚಕ ಹಣಾಹಣಿ ನಡೆಯಬಹುದು ಎಂಬ ಎಲ್ಲ ಕುತೂಹಲಗಳಿಗೆ ಕಾಂಗ್ರೆಸ್ ತೆರೆ ಎಳೆದಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಎದುರು ಹೀನಾಯವಾಗಿ ಸೋತು, ಮೂರನೇ ಸ್ಥಾನಕ್ಕೆ ಜಾರಿದ್ದ ಅಜಯ್ ರಾಯ್ ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಈ ಹೆಜ್ಜೆ ಯಾಕೆ ಇಟ್ಟಿತು? ಪ್ರಿಯಾಂಕಾ ಕಣದಿಂದ ಹಿಂದೆ ಸರಿಯಲು ಕಾರಣವೇನು? ಇಲ್ಲಿದೆ 5 ಕಾರಣಗಳು