ಟೀ ಮಾರುತ್ತಿದ್ದ ನರೇಂದ್ರ ದೇಶದ ಪ್ರಧಾನಿ ಮೋದಿಯಾದ(Narendra Modi) ಸಾಧನೆ, ಬೆಸ್ತರ ಮನೆ ಮಗ ಅಬ್ದುಲ್ ಕಲಾಂ ರಾಷ್ಟ್ರಪತಿ ಆದ ಘಟನೆ, ಬೆಂಗಳೂರಿನ ಪದ್ಮನಾಭ ನಗರದ ಸೊಪ್ಪು ಮಾರುವವನ ಮಗಳು ರಾರಯಂಕ್ ಪಡೆದ ಸಾಹಸಗಾಥೆಯ ಎಳೆಗಳನ್ನು ಬಿಚ್ಚಿಟ್ಟ ಸಚಿವರು ಮೊರಾರ್ಜಿ ದೇಸಾಯಿ ವಸತಿಶಾಲೆಯ ಮಕ್ಕಳಿಗೆ ಜೀವನೋತ್ಸಾಹ ತುಂಬಿದರು. ಈ ಶಾಲೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸಚಿವರು ಸನ್ಮಾನಿಸಿದರು. ಆ ವಿದ್ಯಾರ್ಥಿನಿ ಸಚಿವರ ಕಾಲಿಗೆ ಬಿದ್ದಾಗ, ಸಚಿವರೇ ತಿರುಗಿ ವಿದ್ಯಾರ್ಥಿನಿ ಕಾಲಿಗೆ ನಮಸ್ಕರಿಸಿದರು.