ಸಚಿವರು ಕಾಪಾಡ್ತಾರೆ ಎಂದು ಸರೆಂಡರ್ ಆಗಿದ್ದ ದುಬೆ: ಲಾಯರ್, ಉದ್ಯಮಿ ಮಾಡಿದ್ರು ಸಹಾಯ!

Published : Jul 11, 2020, 05:10 PM IST

ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಶುಕ್ರವಾರ ಎನ್‌ಕೌಂಟರ್‌ಗೆ ಬಲಲಿಯಾಗಿದ್ದಾರೆ. ಎನ್‌ಕೌಂಟರ್‌ಗೂ ಮುನ್ನ ಅವರು ಎಂಟು ದಿನಗಳವರೆಗೆ ಪೊಲೀಸರಿಂದ ತಲೆ ಮರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಾಜಕೀಯ ನಾಯಕರೊಬ್ಬರು ಅವರಿಗೆ ರಕ್ಷಣೆ ನೀಡಿದ್ದರು. ಪೊಲೀಸ್ ಅಧಿಕಾರಿಗಳನ್ವಯ ಉತ್ತರ ಪ್ರದೇಶ,, ಮಧ್ಯಪ್ರದೇಶ ಸೇರಿ ಅನೇಕ ರಾಜ್ಯಗಳ ರಾಜಕೀಯ ನಾಯಕರೊಂದಿಗೆ ಅವರಿಗೆ ಸಂಪರ್ಕವಿತ್ತು. ಇದನ್ನು ಆತ ಅಪರಾಧ ಕೃತ್ಯಗಳಿಗೆ ಬಳಸಿಕೊಂಡಿದ್ದ. ಇನ್ನು ಜುಲೈ 2ರಂದೇ ಪೊಲೀಸರ ಕಾರ್ಯಾಚರಣೆಗೂ ಮೊದಲೇ ವಿಕಾಸ್ ದುಬಬೆಗೆ ಈ ಮಾಹಿತಿ ಲಭಿಸಿತ್ತು. ಇದಕ್ಕಾಗಿ ಆತ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಪೊಲೀಸರ ಮೇಲೆ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಎಂಟು ಪೊಲೀಸರು ಸಾವನ್ನಪ್ಪಿದ್ದರು.

PREV
16
ಸಚಿವರು ಕಾಪಾಡ್ತಾರೆ ಎಂದು ಸರೆಂಡರ್ ಆಗಿದ್ದ ದುಬೆ: ಲಾಯರ್, ಉದ್ಯಮಿ ಮಾಡಿದ್ರು ಸಹಾಯ!

ಅಮರ್ ಉಜಾಲಾ ವರದಿಯನ್ವಯ ವಿಕಾಸ್ ದುಬೆ ವಿಚಾರಣೆ ವೇಳೆ ರಾಜಕೀಯ  ನಾಯಕರೊಂದಿಗಿನ ಸಂಬಂಧದ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಅನ್ವಯ ಜುಲೈ 2 ರಂದು ನಡೆದ ಘಟನೆಗೆ ಸಚಿವರೊಬ್ಬರು ಆತನಿಗೆ ಸಾಥ್ ನೀಡಿದ್ದರು. ಇವರು ವಿಕಾಸ್ ದುವೆಗೆ ಕಾಪಾಡುವುದಾಗಿ ಮಾತು ಕೊಟ್ಟಿದ್ದರು. 

ಅಮರ್ ಉಜಾಲಾ ವರದಿಯನ್ವಯ ವಿಕಾಸ್ ದುಬೆ ವಿಚಾರಣೆ ವೇಳೆ ರಾಜಕೀಯ  ನಾಯಕರೊಂದಿಗಿನ ಸಂಬಂಧದ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಅನ್ವಯ ಜುಲೈ 2 ರಂದು ನಡೆದ ಘಟನೆಗೆ ಸಚಿವರೊಬ್ಬರು ಆತನಿಗೆ ಸಾಥ್ ನೀಡಿದ್ದರು. ಇವರು ವಿಕಾಸ್ ದುವೆಗೆ ಕಾಪಾಡುವುದಾಗಿ ಮಾತು ಕೊಟ್ಟಿದ್ದರು. 

26

ಈ ವಿಚಾರದಲ್ಲಿ ಓರ್ವ ವಕೀಲ ಕೂಡಾ ದುಬೆ ಸಾಥ್ ನೀಡಿದ್ದ. ಹೀಗಾಗೇ ಅವರ ನಿರ್ದೇಶನದಂತೆ ದುಬೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಇವೆಲ್ಲದರೊಂದಿಗೆ ಮಧ್ಯಪ್ರದೇಶದ ಓರ್ವ ಮದ್ಯ ಉದ್ಯಮಿಯೂ ರಕ್ಷಣೆ ನೀಡುವ ಭರವಸೆ ಕೊಟ್ಟಿದ್ದರು.

ಈ ವಿಚಾರದಲ್ಲಿ ಓರ್ವ ವಕೀಲ ಕೂಡಾ ದುಬೆ ಸಾಥ್ ನೀಡಿದ್ದ. ಹೀಗಾಗೇ ಅವರ ನಿರ್ದೇಶನದಂತೆ ದುಬೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಇವೆಲ್ಲದರೊಂದಿಗೆ ಮಧ್ಯಪ್ರದೇಶದ ಓರ್ವ ಮದ್ಯ ಉದ್ಯಮಿಯೂ ರಕ್ಷಣೆ ನೀಡುವ ಭರವಸೆ ಕೊಟ್ಟಿದ್ದರು.

36

ಎನ್‌ಕೌಂಟರ್‌ನಿಂದ ರಕ್ಷಿಸುವುದಾಗಿ ಮಾತು ಕೊಟ್ಟಿದ್ದ ಸಚಿವ: ಪೊಲೀಸರ ಮಾಹಿತಿ ಅನ್ವಯ ಮಂತ್ರಿ ದುಬೆಗೆ ಎನ್‌ಕೌಂಟರ್‌ನಿಂದ ರಕ್ಷಿಸುವುದಾಗಿ ಮಾತು ಕೊಟ್ಟಿದ್ದರು. ಇದಕ್ಕಾಗೇ ನ್ಯಾಯಾಲಯ ಅಥವಾ ಸಾರ್ವಜನಿಕವಾಗಿ ಶರಣಾಗತಿಯಾಗಲು ಸೂಚಿಸಲಾಗಿತ್ತು. ಈ ಮೂಲಕ ಮಾಧ್ಯಮದೆದುರು ಕಾಣಿಸಿಕೊಳ್ಳಲು ಸೂಚಿಸಲಾಗಿತ್ತು.

ಎನ್‌ಕೌಂಟರ್‌ನಿಂದ ರಕ್ಷಿಸುವುದಾಗಿ ಮಾತು ಕೊಟ್ಟಿದ್ದ ಸಚಿವ: ಪೊಲೀಸರ ಮಾಹಿತಿ ಅನ್ವಯ ಮಂತ್ರಿ ದುಬೆಗೆ ಎನ್‌ಕೌಂಟರ್‌ನಿಂದ ರಕ್ಷಿಸುವುದಾಗಿ ಮಾತು ಕೊಟ್ಟಿದ್ದರು. ಇದಕ್ಕಾಗೇ ನ್ಯಾಯಾಲಯ ಅಥವಾ ಸಾರ್ವಜನಿಕವಾಗಿ ಶರಣಾಗತಿಯಾಗಲು ಸೂಚಿಸಲಾಗಿತ್ತು. ಈ ಮೂಲಕ ಮಾಧ್ಯಮದೆದುರು ಕಾಣಿಸಿಕೊಳ್ಳಲು ಸೂಚಿಸಲಾಗಿತ್ತು.

46

ಉತ್ತರ ಪ್ರದೇಶ ಬಿಟ್ಟು ಬೇರೆ ರಾಜ್ಯದಲ್ಲಿ ಸೆರೆಂಡರ್: ವಿಕಾಸ್‌ ದುಬೆಗೆ ಸಚಿವ, ವಕೀಲ ಹಾಗೂ ಮದ್ಯ ಉದ್ಯಮಿ ಶರಣಾಗಲು ಉತ್ತರ ಪ್ರದೇಶ ಬಿಟ್ಟು ಬೇರೆ ರಾಜ್ಯದಲ್ಲಿ ಆಗಲು ಸೂಚಿಸಿದ್ದರು. ಇದೇ ಕಾರಣಕ್ಕಾಗಿ ಆತ ಮಧ್ಯಪ್ರದೇಶ ಆಯ್ಕೆ ಮಾಡಿಕೊಂಡಿದ್ದ. ಮಧ್ಯಪ್ರದೇಶದಲ್ಲಿ ಈ ಸಚಿವರ ಪ್ರಾಬಲ್ಯ ಇದೆ ಎನ್ನಲಾಗಿದೆ. ಹೀಗಾಗೇ ಯೋಜನೆಯನ್ವಯ ದುಬೆ ಸಿಸಿಟಿವಿಯಿಂದ ಸುತ್ತುವರೆದಿದ್ದ ಮಂದಿರದ ಆವರಣದಲ್ಲಿ ಶರಣಾಗಿದ್ದ.

ಉತ್ತರ ಪ್ರದೇಶ ಬಿಟ್ಟು ಬೇರೆ ರಾಜ್ಯದಲ್ಲಿ ಸೆರೆಂಡರ್: ವಿಕಾಸ್‌ ದುಬೆಗೆ ಸಚಿವ, ವಕೀಲ ಹಾಗೂ ಮದ್ಯ ಉದ್ಯಮಿ ಶರಣಾಗಲು ಉತ್ತರ ಪ್ರದೇಶ ಬಿಟ್ಟು ಬೇರೆ ರಾಜ್ಯದಲ್ಲಿ ಆಗಲು ಸೂಚಿಸಿದ್ದರು. ಇದೇ ಕಾರಣಕ್ಕಾಗಿ ಆತ ಮಧ್ಯಪ್ರದೇಶ ಆಯ್ಕೆ ಮಾಡಿಕೊಂಡಿದ್ದ. ಮಧ್ಯಪ್ರದೇಶದಲ್ಲಿ ಈ ಸಚಿವರ ಪ್ರಾಬಲ್ಯ ಇದೆ ಎನ್ನಲಾಗಿದೆ. ಹೀಗಾಗೇ ಯೋಜನೆಯನ್ವಯ ದುಬೆ ಸಿಸಿಟಿವಿಯಿಂದ ಸುತ್ತುವರೆದಿದ್ದ ಮಂದಿರದ ಆವರಣದಲ್ಲಿ ಶರಣಾಗಿದ್ದ.

56

ಒಂದು ದಿನ ಹಿಂದಷ್ಟೇ ಬದಲಾಗಿದ್ರು ಠಾಣಾಧಿಕಾರಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್: ಇನ್ನು ವರದಿಗಳನ್ವಯ ದುಬೆ ಯಾವ ಠಾಣೆ ವ್ಯಾಪ್ತಿಯಲ್ಲಿ ಸರೆಂಡರ್ ಆಗಿದ್ದನೋ ಅಲ್ಲಿನ ಠಾಣಾಧಿಕಾರಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಒಂದು ದಿನದ ಹಿಂದಷ್ಟೇ ಬದಲಾಗಿದ್ದರು. ಇವೆಲ್ಲವೂ ಯೋಜನೆಯನ್ವಯ ನಡೆದಿದೆ ಎಂಬುವುದು ಪೊಲೀಸರಿಂದ ಲಭ್ಯವಾದ ಮಾಹಿತಿ.

ಒಂದು ದಿನ ಹಿಂದಷ್ಟೇ ಬದಲಾಗಿದ್ರು ಠಾಣಾಧಿಕಾರಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್: ಇನ್ನು ವರದಿಗಳನ್ವಯ ದುಬೆ ಯಾವ ಠಾಣೆ ವ್ಯಾಪ್ತಿಯಲ್ಲಿ ಸರೆಂಡರ್ ಆಗಿದ್ದನೋ ಅಲ್ಲಿನ ಠಾಣಾಧಿಕಾರಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಒಂದು ದಿನದ ಹಿಂದಷ್ಟೇ ಬದಲಾಗಿದ್ದರು. ಇವೆಲ್ಲವೂ ಯೋಜನೆಯನ್ವಯ ನಡೆದಿದೆ ಎಂಬುವುದು ಪೊಲೀಸರಿಂದ ಲಭ್ಯವಾದ ಮಾಹಿತಿ.

66


ಉಜ್ಜಯನಿಯಲ್ಲಿ ಅರೆಸ್ಟ್, ಕಾನ್ಪುರದಲ್ಲಿ ಎನ್‌ಕೌಂಟರ್: ವಿಕಾಸ್‌ನನ್ನು ಗುರುವಾರ ಉಜ್ಜಯನಿಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಈಗಾಗಿ ರಸ್ತೆ ಮೂಲಕ ಆತನನ್ನು ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆದರೆ ಗಡಿ ದಾಟಿದ ಕೆಲವೇ ಕ್ಷಣದಲ್ಲಿ ವಾಹನ ಪಲ್ಟಿಯಾಗಿ ವಿಕಾಸ್ ತಪ್ಪಿಸಿಕೊಳ್ಳಲು ಯತ್ಬಿಸಿದ್ದು, ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.


ಉಜ್ಜಯನಿಯಲ್ಲಿ ಅರೆಸ್ಟ್, ಕಾನ್ಪುರದಲ್ಲಿ ಎನ್‌ಕೌಂಟರ್: ವಿಕಾಸ್‌ನನ್ನು ಗುರುವಾರ ಉಜ್ಜಯನಿಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಈಗಾಗಿ ರಸ್ತೆ ಮೂಲಕ ಆತನನ್ನು ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆದರೆ ಗಡಿ ದಾಟಿದ ಕೆಲವೇ ಕ್ಷಣದಲ್ಲಿ ವಾಹನ ಪಲ್ಟಿಯಾಗಿ ವಿಕಾಸ್ ತಪ್ಪಿಸಿಕೊಳ್ಳಲು ಯತ್ಬಿಸಿದ್ದು, ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

click me!

Recommended Stories