ಕಾನ್ಪುರದ ಬಿಕ್ರೂ ಹಳ್ಳಿಯಲ್ಲಿ ಜುಲೈ 2 ರಂದು ರಾತ್ರಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಇಂದು, ಶುಕ್ರವಾರ ಎನ್ಕೌಂಟರ್ನಲ್ಲಿ ಹತ್ಯಗೀಡಾಗಿದ್ದಾರೆ. ಈ ಎನ್ಕೌಂಟರ್ನಲ್ಲಿ ನಾಲ್ವರು ಪೊಲೀಸರಿಗೂ ಗಾಯಗಳಾಗಿವೆ. ಎಸ್ಎಸ್ಪಿ ದಿನೇಶ್ ಕುಮಾರ್ ಈ ಎನ್ಕೌಂಟರ್ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಕಾಸ್ ದುಬೆಯನ್ನು ಕೊಂಡೊಯ್ಯುತ್ತಿರುವ ವೇಳೆ ಬೆಂಗಾವಲು ವಾಹನ ಇದ್ದಕ್ಕಿದ್ದಂತೆಯೇ ಅಪಘಾತಕ್ಕೀಡಾಗಿದೆ. ಈ ವೇಳೆ ವಿಕಾಸ್ ಪೊಲೀಸರ ಕೈಯ್ಯಲ್ಲಿದ್ದ ಗನ್ ತೆಗೆದುಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ. ಆತನಿಗೆ ಸರೆಂಡರ್ ಆಗಲು ಅವಕಾಶ ನೀಡಲಾಗಿತ್ತಾದರೂ, ಆತ ಪರಾರಿಯಾಗಲು ತಯತ್ನಿಸಿದ್ದ. ಹೀಗಾಗಿ ಆತನನ್ನು ಶೂಟ್ ಮಾಡಲಾಯ್ತು ಎಂದಿದ್ದಾರೆ. ಆದರೀಗ ಎನ್ಕೌಂಟರ್ ಸಂಬಂಧ ಹಲವಾರು ಅನುಮಾನ ಹಾಗೂ ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಉತ್ತರಿಸಬೇಕಿದೆ. #WATCH Media persons, who were following the convoy bringing back gangster Vikas Dubey, were stopped by police in Sachendi area of Kanpur before the encounter around 6.30 am in which the criminal was killed. (Earlier visuals) pic.twitter.com/K1B56NGV5p
— ANI UP (@ANINewsUP) July 10, 2020
ಕಾನ್ಪುರ ಗಡಿಗೆ ಬಂದ ಬಳಿಕ ಎಸ್ಟಿಎಫ್ ವಾಹನ ಹೇಗೆ ಉರುಳಿತು? ಯಾವ ಪರಿಸ್ಥಿತಿಯಲ್ಲಿ ಅಪಘಾತ ನಡೆಯಿತು?
ಕಾನ್ಪುರ ಗಡಿಗೆ ಬಂದ ಬಳಿಕ ಎಸ್ಟಿಎಫ್ ವಾಹನ ಹೇಗೆ ಉರುಳಿತು? ಯಾವ ಪರಿಸ್ಥಿತಿಯಲ್ಲಿ ಅಪಘಾತ ನಡೆಯಿತು?
211
ನಿರಂತರವಾಗಿ ತಲೆ ಮರೆಸಿಕೊಂಡಿದ್ದ ವಿಕಾಸ್ ದುಬೆ ಪೊಲೀಸರ ಕೈಯ್ಯಲ್ಲಿದ್ದ ಗನ್ ಕಸಿದು ಓಡಿ ಹೋಗುವಷ್ಟು ಸಮರ್ಥನಾಗಿದ್ದನೇ?
ನಿರಂತರವಾಗಿ ತಲೆ ಮರೆಸಿಕೊಂಡಿದ್ದ ವಿಕಾಸ್ ದುಬೆ ಪೊಲೀಸರ ಕೈಯ್ಯಲ್ಲಿದ್ದ ಗನ್ ಕಸಿದು ಓಡಿ ಹೋಗುವಷ್ಟು ಸಮರ್ಥನಾಗಿದ್ದನೇ?
311
ಇನ್ನು ದೆಹಲಿಯ ಉಜ್ಜಯನಿಯಲ್ಲಿ ಮಾಧ್ಯಮಗಳೆದುರು ಜೋರಾಗಿ ಕೂಗುತ್ತಾ ಪೊಲೀಸರಿಗೆ ಶರಣಾಗಿದ್ದ ವಿಕಾಸ್ ಮನಸ್ಸು ಅಷ್ಟು ಬೇಗ ಬದಲಾಯ್ತಾ?
ಇನ್ನು ದೆಹಲಿಯ ಉಜ್ಜಯನಿಯಲ್ಲಿ ಮಾಧ್ಯಮಗಳೆದುರು ಜೋರಾಗಿ ಕೂಗುತ್ತಾ ಪೊಲೀಸರಿಗೆ ಶರಣಾಗಿದ್ದ ವಿಕಾಸ್ ಮನಸ್ಸು ಅಷ್ಟು ಬೇಗ ಬದಲಾಯ್ತಾ?
411
ಖುದ್ದು ಸರೆಂಡರ್ ಆದ ವಿಕಾಸ್ ಯಾಕಾಗಿ ಗನ್ ಹಿಡಿದು ಓಡಿ ಹೋದ?
ಖುದ್ದು ಸರೆಂಡರ್ ಆದ ವಿಕಾಸ್ ಯಾಕಾಗಿ ಗನ್ ಹಿಡಿದು ಓಡಿ ಹೋದ?
511
ವಿಕಾಸ್ ದುಬೆ ಮೊದಲು ಫೈರಿಂಗ್ ನಡೆಸಿದನೋ ಅಥವಾ ಆತನನ್ನು ಓಡಿ ಹೋಗದಂತೆ ತಡೆಯಲು ಪೊಲೀಸರು ಫೈರಿಂಗ್ ನಡೆಸಿದ್ರೋ?
ವಿಕಾಸ್ ದುಬೆ ಮೊದಲು ಫೈರಿಂಗ್ ನಡೆಸಿದನೋ ಅಥವಾ ಆತನನ್ನು ಓಡಿ ಹೋಗದಂತೆ ತಡೆಯಲು ಪೊಲೀಸರು ಫೈರಿಂಗ್ ನಡೆಸಿದ್ರೋ?
611
ಎರಡೂ ಕಡೆಯಿಂದ ಈ ಎನ್ಕೌಂಟರ್ ವೇಳೆ ಎಷ್ಟು ಗುಂಡು ಹಾರಿಸಲಾಯ್ತು?
ಎರಡೂ ಕಡೆಯಿಂದ ಈ ಎನ್ಕೌಂಟರ್ ವೇಳೆ ಎಷ್ಟು ಗುಂಡು ಹಾರಿಸಲಾಯ್ತು?
711
ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಪೊಲೀಸರ ಒಂದು ವಾಹನ ಪಂಕ್ಚರ್ ಆದರೆ ಮತ್ತೊಂದು ಪಲ್ಟಿ ಹೊಡೆಯಿತು.
ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಪೊಲೀಸರ ಒಂದು ವಾಹನ ಪಂಕ್ಚರ್ ಆದರೆ ಮತ್ತೊಂದು ಪಲ್ಟಿ ಹೊಡೆಯಿತು.
811
ವಿಕಾಸ್ ಕೈಗೆ ಕೋಳ ಹಾಕಿರಲಿಲ್ಲವೇ? ಅಷ್ಟು ನಿರ್ಲಕ್ಷ್ಯ ವಹಿಸಲಾಗಿತ್ತಾ?
ವಿಕಾಸ್ ಕೈಗೆ ಕೋಳ ಹಾಕಿರಲಿಲ್ಲವೇ? ಅಷ್ಟು ನಿರ್ಲಕ್ಷ್ಯ ವಹಿಸಲಾಗಿತ್ತಾ?
911
ಗುಂಡಿನ ಕಾಳಗದಲ್ಲಿ ತಲೆಗೆ ಗುಂಡು ಹೊಡೆಯುತ್ತಾರಾ?
ಗುಂಡಿನ ಕಾಳಗದಲ್ಲಿ ತಲೆಗೆ ಗುಂಡು ಹೊಡೆಯುತ್ತಾರಾ?
1011
ಕಾನ್ಪುರಕ್ಕೆ ಎಂಟ್ರಿ ಆದ ಬಳಿಕವೇ ಆತ ಯಾಕೆ ಓಡಿದ?
ಕಾನ್ಪುರಕ್ಕೆ ಎಂಟ್ರಿ ಆದ ಬಳಿಕವೇ ಆತ ಯಾಕೆ ಓಡಿದ?
1111
ಇನ್ನು ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ವಿಕಾಸ್ ಕರೆದೊಯ್ಯುತ್ತಿದ್ದ ವಾಹನವನ್ನು ಹಿಂಬಾಲಿಸುತ್ತಿದ್ದ ಮಾಧ್ಯಮ ಸೇರಿದಂತೆ ಎಲ್ಲಾ ವಾಹನಗಳನ್ನು ಮೊದಲೇ ನಿಲ್ಲಿಸಲಾಗಿತ್ತು. ಬಳಿಕ ಈ ಎನ್ಕವಂಟರ್ ನಡೆದಿದೆ. ಹೀಗಿರುವಾಗ ಈ ವಾಹನಗಳನ್ನೆಲ್ಲಾ ಪೊಲೀಸರಿ ಯಾಕೆ ತಡೆದಿದ್ದರು? ಇದು ಪೂರ್ವ ನಿಯೋಜಿತವೇ ಎಂಬ ಪ್ರಶ್ನೆಗಗಳು ಸೋಶಿಯ್ ಮಿಡಿಯಾದಲ್ಲಿ ಸೌಂಡ್ ಮಾಡುತ್ತಿವೆ.
ಇನ್ನು ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ವಿಕಾಸ್ ಕರೆದೊಯ್ಯುತ್ತಿದ್ದ ವಾಹನವನ್ನು ಹಿಂಬಾಲಿಸುತ್ತಿದ್ದ ಮಾಧ್ಯಮ ಸೇರಿದಂತೆ ಎಲ್ಲಾ ವಾಹನಗಳನ್ನು ಮೊದಲೇ ನಿಲ್ಲಿಸಲಾಗಿತ್ತು. ಬಳಿಕ ಈ ಎನ್ಕವಂಟರ್ ನಡೆದಿದೆ. ಹೀಗಿರುವಾಗ ಈ ವಾಹನಗಳನ್ನೆಲ್ಲಾ ಪೊಲೀಸರಿ ಯಾಕೆ ತಡೆದಿದ್ದರು? ಇದು ಪೂರ್ವ ನಿಯೋಜಿತವೇ ಎಂಬ ಪ್ರಶ್ನೆಗಗಳು ಸೋಶಿಯ್ ಮಿಡಿಯಾದಲ್ಲಿ ಸೌಂಡ್ ಮಾಡುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ