ತನ್ನ ಫೇವರೇಟ್‌ ಕ್ಯಾಪ್ಟನ್ ಆರಿಸಿದ ಯುವರಾಜ್ ಸಿಂಗ್! ಆದ್ರೆ ಕೊಹ್ಲಿ, ಧೋನಿ, ರೋಹಿತ್ ಇವರ್ಯಾರು ಅಲ್ಲ!

First Published Sep 14, 2024, 2:48 PM IST

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತಕ್ಕೆ ಏಕಾಂಗಿಯಾಗಿ ಹಲವು ಅದ್ಭುತ ಗೆಲುವುಗಳನ್ನು ತಂದುಕೊಟ್ಟ ಯುವರಾಜ್ ಸಿಂಗ್, ತಮ್ಮ ನೆಚ್ಚಿನ ನಾಯಕನ ಬಗ್ಗೆ ಬಹಿರಂಗಪಡಿಸಿದ್ದಾರೆ. ಧೋನಿ, ದ್ರಾವಿಡ್, ಗಂಗೂಲಿ ಇವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲೆಡೆ ಇತ್ತು.

ಭಾರತ ಕ್ರಿಕೆಟ್ ಕಂಡ ಅದ್ಭುತ ಆಲ್ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕಾಂಗಿಯಾಗಿ ಭಾರತಕ್ಕೆ ಹಲವು ಅದ್ಭುತ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.  ಯುವಿ ಹಲವು ಯುವ ಕ್ರಿಕೆಟಿಗರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ 

ಕ್ರಿಕೆಟ್ ತಾರೆಯಾಗಿ ಬೆಳೆದದ್ದು ಮಾತ್ರವಲ್ಲದೆ, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯ ವಿರುದ್ಧ ಹೋರಾಡಿ ಜಯ ಸಾಧಿಸಿದವರು ಯುವಿ. ಈ ಮೂಲಕ ಅನೇಕರಿಗೆ ಸ್ಫೂರ್ತಿಯಾದರು.

Latest Videos


ಕ್ಯಾನ್ಸರ್ ಬಾಧಿಸುತ್ತಿದ್ದರೂ, ಟೀಂ ಇಂಡಿಯಾಗೆ 2011ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಯುವಿ ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಭಾರತ ತಂಡ ಹಲವು ಬಾರಿ ಐಸಿಸಿ ಟ್ರೋಫಿಗಳನ್ನು ಗೆಲ್ಲುವಲ್ಲಿ ಯುವರಾಜ್ ಸಿಂಗ್ ಅವರ ಪಾತ್ರವನ್ನು ಭಾರತೀಯ ಕ್ರಿಕೆಟ್ ಎಂದಿಗೂ ಮರೆಯುವುದಿಲ್ಲ. ಇದೀಗ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ತಮ್ಮ ನೆಚ್ಚಿನ, ಅತ್ಯುತ್ತಮ ನಾಯಕನನ್ನು ಹೆಸರಿಸಿದ್ದಾರೆ  ಭಾರತ ಕ್ರಿಕೆಟ್ ತಂಡಕ್ಕಾಗಿ ತಮ್ಮ ವರ್ಣರಂಜಿತ ವೃತ್ತಿಜೀವನದಲ್ಲಿ ಯುವರಾಜ್ ಸಿಂಗ್ ಹಲವಾರು ಶ್ರೇಷ್ಠ ನಾಯಕರೊಂದಿಗೆ ಆಡಿದ್ದಾರೆ.

ಅವರಲ್ಲಿ ಮೂರು ಸ್ವರೂಪಗಳಲ್ಲಿ ಭಾರತ ಕ್ರಿಕೆಟ್ ತಂಡವನ್ನು ನಂ. 1 ಸ್ಥಾನಕ್ಕೆ ಕೊಂಡೊಯ್ದ ಮಹೇಂದ್ರ ಸಿಂಗ್ ಧೋನಿ ಮತ್ತು ದಿಗ್ಗಜ ಆಟಗಾರರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಸೇರಿದ್ದಾರೆ. ರನ್ ಮೆಷಿನ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ ಭಾರತಕ್ಕಾಗಿ ಕ್ರಿಕೆಟ್ ಆಡಿದ್ದಾರೆ.

ಆದಾಗ್ಯೂ, ಅವರು ವಿರಾಟ್ ಕೊಹ್ಲಿ ಅಥವಾ ಎಂ ಎಸ್ ಧೋನಿಯನ್ನು ತಮ್ಮ ಅತ್ಯುತ್ತಮ ನಾಯಕ ಎಂದು ಪರಿಗಣಿಸಿಲ್ಲ. ಅದೇ ರೀತಿ ರಾಹುಲ್ ದ್ರಾವಿಡ್ ಅವರನ್ನೂ ಅವರು ತಮ್ಮ ನೆಚ್ಚಿನ ನಾಯಕ ಎಂದು ಗುರುತಿಸಿಲ್ಲ. ಹಾಗಾದರೆ ಯುವರಾಜ್ ಸಿಂಗ್ ಅವರ ಅತ್ಯುತ್ತಮ ನಾಯಕ ಯಾರು?

ಒಂದು ಸಂದರ್ಶನದಲ್ಲಿ, ಯುವರಾಜ್ ಸಿಂಗ್ ತಮ್ಮ ನೆಚ್ಚಿನ ನಾಯಕನ ಬಗ್ಗೆ ಬಹಿರಂಗಪಡಿಸಿದ್ದಾರೆ. ಆ ಸಂದರ್ಶನದಲ್ಲಿ, ಗಂಗೂಲಿ, ಧೋನಿ, ದ್ರಾವಿಡ್ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡು ಅವರಲ್ಲಿ 'ಅತ್ಯುತ್ತಮ ನಾಯಕ' ಎಂದು ಹೆಸರಿಸುವಂತೆ ಕೇಳಲಾಯಿತು.

2011 ರ ವಿಶ್ವಕಪ್ ವಿಜೇತ ಯುವರಾಜ್, ಧೋನಿ ನಾಯಕತ್ವದಲ್ಲಿ ಹಲವು ವರ್ಷಗಳ ಕಾಲ ಆಡಿದ್ದಾಗಿ ಹೇಳಿದರು. ಧೋನಿ ಒಬ್ಬ ಉತ್ತಮ ನಾಯಕ ಎಂದು ಹೇಳಿದರು. ಆದರೆ, ಬಂಗಾಳ ಹುಲಿ, ದಾದಾ ಎಂದು ಪ್ರೀತಿಯಿಂದ ಕರೆಯಲ್ಪಡುವ ಗಂಗೂಲಿಯನ್ನು ತಮ್ಮ ನೆಚ್ಚಿನ ನಾಯಕನಾಗಿ ಆಯ್ಕೆ ಮಾಡಿಕೊಳ್ಳುವುದಾಗಿ ಯುವಿ ಹೇಳಿದರು.

ಯುವರಾಜ್ ಮುಂದೆ ಮಾತನಾಡಿ, 'ಅವರೆಲ್ಲರೂ ನಾಯಕರಾಗಿದ್ದರು. ಧೋನಿ, ಗಂಗೂಲಿ ನಾಯಕತ್ವದಲ್ಲಿ ದೀರ್ಘಕಾಲ ಆಡಿದ್ದೇನೆ. ಗಂಗೂಲಿ ನಾಯಕತ್ವದಲ್ಲಿ ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದೆ, ಅದಕ್ಕಾಗಿಯೇ ನಾನು ಸೌರವ್ ಗಂಗೂಲಿ ನನ್ನ ಪಾಲಿನ ನೆಚ್ಚಿನ ನಾಯಕರಾಗಿದ್ದಾರೆ ಎಂದು ಯುವಿ ಹೇಳಿದ್ದಾರೆ.

ಭಾರತ ಅಂಡರ್-19 ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು ಇದರ ಜತೆಗೆ  ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು. ಇನ್ನು  ಭಾರತೀಯ ಸೀನಿಯರ್ ತಂಡಕ್ಕೆ ಸ್ಥಾನ ಪಡೆದ ಯುವಿ. 2000 ರ ಐಸಿಸಿ ನಾಕೌಟ್ ಟ್ರೋಫಿಗೆ (ನಂತರ ಚಾಂಪಿಯನ್ಸ್ ಟ್ರೋಫಿ ಎಂದು ಮರುನಾಮಕರಣ ಮಾಡಲಾಯಿತು) ಭಾರತ ತಂಡದಲ್ಲಿ ಯುವರಾಜ್ ಸ್ಥಾನ ಪಡೆದರು.

ಗಂಗೂಲಿ ನಾಯಕತ್ವದಲ್ಲಿ ಕೀನ್ಯಾ ವಿರುದ್ಧದ 16ನೇ ಸುತ್ತಿನ ಪಂದ್ಯದಲ್ಲಿ ಯುವರಾಜ್ ಪಾದಾರ್ಪಣೆ ಮಾಡಿದರು. ಆದರೆ ಆ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಯುವರಾಜ್ ಬ್ಯಾಟ್ಸ್‌ಮನ್ ಆಗಿ ಮಿಂಚಿದರು. 80 ಎಸೆತಗಳಲ್ಲಿ 84 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿ ತಂಡಕ್ಕೆ ಎಷ್ಟು ಮುಖ್ಯ ಆಟಗಾರ ಎಂಬುದನ್ನು ಸಾಬೀತುಪಡಿಸಿದರು.

ಅಂದಿನಿಂದ ಹಿಂದೆ ತಿರುಗಿ ನೋಡಲಿಲ್ಲ. ಭಾರತ ತಂಡಕ್ಕೆ ಹಲವು ಅದ್ಭುತ ಗೆಲುವುಗಳನ್ನು ತಂದುಕೊಟ್ಟಿದ್ದಲ್ಲದೆ, ಐಸಿಸಿ ಟ್ರೋಫಿಗಳನ್ನು ಗೆಲ್ಲುವಲ್ಲಿ ಯುವರಾಜ್ ಸಿಂಗ್ ಅವರ ಬ್ಯಾಟ್ ಮತ್ತು ಬಾಲ್ ಪ್ರಮುಖ ಪಾತ್ರ ವಹಿಸಿದೆ. ಎಂ ಎಸ್ ಧೋನಿ ನಾಯಕತ್ವದಲ್ಲಿ 2007 ರ ಟಿ20 ವಿಶ್ವಕಪ್ ಅನ್ನು ಭಾರತ ಅದ್ಭುತವಾಗಿ ಗೆಲ್ಲಲು ಯುವರಾಜ್ ಪ್ರಮುಖ ಪಾತ್ರ ವಹಿಸಿದ್ದರು.

ಇಂಗ್ಲೆಂಡ್‌ನ ಸ್ಟಾರ್ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌ನ ಆರು ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಈ ಪಂದ್ಯದಲ್ಲಿ 30 ಎಸೆತಗಳಲ್ಲಿ 70 ರನ್ ಗಳಿಸಿ ಮರೆಯಲಾಗದ ಇನ್ನಿಂಗ್ಸ್ ಆಡಿದರು. ಇಂಗ್ಲೆಂಡ್ ವಿರುದ್ಧದ ಅವರ ಅದ್ಭುತ ಆಟದ ಮೂಲಕ 2007 ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಯುವಿ ಭಾರತದ ತಾರೆಯಾಗಿ ಹೊರಹೊಮ್ಮಿದರು.

2011 ರ ವಿಶ್ವಕಪ್‌ನಲ್ಲಿಯೂ ಯುವರಾಜ್ ಅದ್ಭುತ ಪ್ರದರ್ಶನ ನೀಡಿ 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು. ಟೂರ್ನಿಯಲ್ಲಿ ಬ್ಯಾಟ್ ಮೂಲಕ 362 ರನ್ ಗಳಿಸಿದರು. ಅಲ್ಲದೆ, 15 ವಿಕೆಟ್‌ಗಳನ್ನು ಪಡೆದರು. ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

click me!