ಕ್ಯಾನ್ಬೆರ್ರಾ: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 66 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತ ತಂಡ ಸಂಕಷ್ಟದ ಸಮಯದಲ್ಲಿದ್ದಾಗ ಹಾರ್ದಿಕ್ ಪಾಂಡ್ಯ ಜತೆ ಉಪಯುಕ್ತ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ತಮ್ಮ ಈ ಜತೆಯಾಟ ಶ್ರೇಯಸ್ಸನ್ನು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನೀಡಿದ್ದಾರೆ. ಅಲ್ಲದೇ ಧೋನಿ ಹೇಳಿದ ಮಾತೊಂದನ್ನು ನೆನಪಿಸಿಕೊಂಡಿದ್ದಾರೆ.
ಅಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ 50 ಎಸೆತಗಳಲ್ಲಿ ಅಜೇಯ 66 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಅಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ 50 ಎಸೆತಗಳಲ್ಲಿ ಅಜೇಯ 66 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು.
210
ಒಂದು ಹಂತದಲ್ಲಿ 152 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಟೀಂ ಇಂಡಿಯಾಗೆ ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಆಸರೆಯಾದರು.
ಒಂದು ಹಂತದಲ್ಲಿ 152 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಟೀಂ ಇಂಡಿಯಾಗೆ ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಆಸರೆಯಾದರು.
310
6ನೇ ವಿಕೆಟ್ಗೆ ಈ ಜೋಡಿ ಮುರಿಯದ 150 ರನ್ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
6ನೇ ವಿಕೆಟ್ಗೆ ಈ ಜೋಡಿ ಮುರಿಯದ 150 ರನ್ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
410
ಮತ್ತೊಂದು ತುದಿಯಲ್ಲಿ ಜಡೇಜಾಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ಕೇವಲ 76 ಎಸೆತಗಳಲ್ಲಿ ಅಜೇಯ 92 ರನ್ ಚಚ್ಚಿದರು. ಅಂದಹಾಗೆ ಇದು ಪಾಂಡ್ಯ ಏಕದಿನ ಕ್ರಿಕೆಟ್ನಲ್ಲಿ ಬಾರಿಸಿದ ಗರಿಷ್ಠ ವಯುಕ್ತಿಕ ಮೊತ್ತ ಕೂಡಾ ಹೌದು.
ಮತ್ತೊಂದು ತುದಿಯಲ್ಲಿ ಜಡೇಜಾಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ಕೇವಲ 76 ಎಸೆತಗಳಲ್ಲಿ ಅಜೇಯ 92 ರನ್ ಚಚ್ಚಿದರು. ಅಂದಹಾಗೆ ಇದು ಪಾಂಡ್ಯ ಏಕದಿನ ಕ್ರಿಕೆಟ್ನಲ್ಲಿ ಬಾರಿಸಿದ ಗರಿಷ್ಠ ವಯುಕ್ತಿಕ ಮೊತ್ತ ಕೂಡಾ ಹೌದು.
510
ಪಂದ್ಯ ಮುಕ್ತಾಯದ ಬಳಿಕ ಈ ಮ್ಯಾರಥಾನ್ ಜೊತೆಯಾಟದ ಸೀಕ್ರೇಟ್ ಬಗ್ಗೆ ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾ ತುಟಿಬಿಚ್ಚಿದ್ದು, ಜತೆಯಾಟದ ಕ್ರೆಡಿಟ್ ಧೋನಿಗೆ ಅರ್ಪಿಸಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಈ ಮ್ಯಾರಥಾನ್ ಜೊತೆಯಾಟದ ಸೀಕ್ರೇಟ್ ಬಗ್ಗೆ ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾ ತುಟಿಬಿಚ್ಚಿದ್ದು, ಜತೆಯಾಟದ ಕ್ರೆಡಿಟ್ ಧೋನಿಗೆ ಅರ್ಪಿಸಿದ್ದಾರೆ.
610
ಧೋನಿ ಬಹಳ ಕಾಲದಿಂದ ಟೀಂ ಇಂಡಿಯಾ ಹಾಗೂ ಚೆನ್ನೈ ತಂಡದ ಪರ ಆಡಿದ್ದಾರೆ. ಅವರು ಹೇಳಿಕೊಟ್ಟ ಯಶಸ್ಸಿನ ಮಂತ್ರವನ್ನು ಜಡೇಜಾ ರಿವೀಲ್ ಮಾಡಿದ್ದಾರೆ.
ಧೋನಿ ಬಹಳ ಕಾಲದಿಂದ ಟೀಂ ಇಂಡಿಯಾ ಹಾಗೂ ಚೆನ್ನೈ ತಂಡದ ಪರ ಆಡಿದ್ದಾರೆ. ಅವರು ಹೇಳಿಕೊಟ್ಟ ಯಶಸ್ಸಿನ ಮಂತ್ರವನ್ನು ಜಡೇಜಾ ರಿವೀಲ್ ಮಾಡಿದ್ದಾರೆ.
710
ಉತ್ತಮ ಜತೆಯಾಟ ನಿಭಾಯಿಸಿದರೆ ಕೊನೆಯಲ್ಲಿ ದೊಡ್ಡ ಹೊಡೆತವನ್ನು ಆಡಬಹುದು ಎಂದು ಧೋನಿ ಹೇಳಿದ್ದರು. ಅದರಂತೆ ನಾವು ಜತೆಯಾಟ ನಿಭಾಯಿಸಿದೆವು ಎಂದು ಹೇಳಿದ್ದಾರೆ.
ಉತ್ತಮ ಜತೆಯಾಟ ನಿಭಾಯಿಸಿದರೆ ಕೊನೆಯಲ್ಲಿ ದೊಡ್ಡ ಹೊಡೆತವನ್ನು ಆಡಬಹುದು ಎಂದು ಧೋನಿ ಹೇಳಿದ್ದರು. ಅದರಂತೆ ನಾವು ಜತೆಯಾಟ ನಿಭಾಯಿಸಿದೆವು ಎಂದು ಹೇಳಿದ್ದಾರೆ.
810
ಕೊನೆಯವರೆಗೆ ಬ್ಯಾಟಿಂಗ್ ನಡೆಸಿದರೆ ಕೊನೆಯ 5 ಓವರ್ಗಳಲ್ಲಿ ಸಾಕಷ್ಟು ರನ್ ಕಲೆಹಾಕಬಹುದು ಎನ್ನುವುದು ಈ ಪಂದ್ಯದಲ್ಲಿ ಸಾಭೀತಾಯಿತು.
ಕೊನೆಯವರೆಗೆ ಬ್ಯಾಟಿಂಗ್ ನಡೆಸಿದರೆ ಕೊನೆಯ 5 ಓವರ್ಗಳಲ್ಲಿ ಸಾಕಷ್ಟು ರನ್ ಕಲೆಹಾಕಬಹುದು ಎನ್ನುವುದು ಈ ಪಂದ್ಯದಲ್ಲಿ ಸಾಭೀತಾಯಿತು.
910
ಒಂದು ಹಂತದಲ್ಲಿ ಟೀಂ ಇಂಡಿಯಾ 260 ರನ್ ಗಳಿಸುವುದು ಕಷ್ಟ ಎನ್ನುವಂತಿತ್ತು. ಕೊನೆಗೆ ಪಾಂಡ್ಯ-ಜಡೇಜಾ ಜೋಡಿ 302 ಬಾರಿಸಿ ಸೈ ಎನಿಸಿಕೊಂಡಿತು.
ಒಂದು ಹಂತದಲ್ಲಿ ಟೀಂ ಇಂಡಿಯಾ 260 ರನ್ ಗಳಿಸುವುದು ಕಷ್ಟ ಎನ್ನುವಂತಿತ್ತು. ಕೊನೆಗೆ ಪಾಂಡ್ಯ-ಜಡೇಜಾ ಜೋಡಿ 302 ಬಾರಿಸಿ ಸೈ ಎನಿಸಿಕೊಂಡಿತು.
1010
ಕ್ಯಾನ್ಬೆರ್ರಾದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 13 ರನ್ಗಳ ಜಯ ಸಾಧಿಸಿತು.
ಕ್ಯಾನ್ಬೆರ್ರಾದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 13 ರನ್ಗಳ ಜಯ ಸಾಧಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.