ಪೊಲ್ಲಾರ್ಡ್ ನಮ್ಮ ತಂಡದ ಪ್ರಮುಖ ಆಟಗಾರ. ಕಳೆದ ಹಲವು ವರ್ಷಗಳಿಂದ ಅವರು ನಮ್ಮ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಅದು ಬ್ಯಾಟಿಂಗ್ನಲ್ಲೇ ಇರಲಿ, ಬೌಲಿಂಗ್ನಲ್ಲೇ ಇರಲಿ, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಪೊಲ್ಲಾರ್ಡ್ ಪಂಜಾಬ್ ರಾಹುಲ್ ಹಾಗೂ ಗೇಲ್ ಅವರನ್ನು ಒಂದೇ ಓವರ್ನಲ್ಲಿ ಬಲಿ ಪಡೆದದ್ದು ಮಹತ್ವವೆನಿಸಿತು. ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಖುಷಿ ಕೊಟ್ಟಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.