ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ ರಿಷಭ್ ಪಂತ್ ಗಾಯಗೊಂಡು ಐದನೇ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಕ್ರಿಸ್ ವೋಕ್ಸ್ ಎಸೆತವನ್ನು ರಿವರ್ಸ್ ಸ್ವೀಪ್ ಆಡಲು ಯತ್ನಿಸಿದಾಗ ಪಂತ್ರ ಬಲಗಾಲಿಗೆ ಪೆಟ್ಟಾಯಿತು. ತಕ್ಷಣ ಶೂ ತೆಗೆದು ನೋಡಿದಾಗ ಕಾಲು ತೀವ್ರವಾಗಿ ಊದಿಕೊಂಡಿತ್ತು ಮತ್ತು ರಕ್ತಸ್ರಾವವಾಗುತ್ತಿತ್ತು.
24
ಗಾಯಗೊಂಡ ಪಂತ್ರನ್ನು ಗಾಲ್ಫ್ ಕಾರ್ಟ್ನಲ್ಲಿ ಕರೆದೊಯ್ಯಲಾಯಿತು. ಮತ್ತೆ ಬ್ಯಾಟಿಂಗ್ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿತ್ತು. ಆದರೆ ಎರಡನೇ ದಿನ ಪಂತ್ ಅಚ್ಚರಿ ಮೂಡಿಸುವಂತೆ ಬ್ಯಾಟಿಂಗ್ಗೆ ಇಳಿದರು. ಕಾಲು ಮುರಿತದ ನಡುವೆಯೂ ಅರ್ಧಶತಕ (54 ರನ್) ಗಳಿಸಿದರು.
34
"ಕಾಲು ಮುರಿತದ ನಡುವೆಯೂ ಹೋರಾಡಿ, ದಾಖಲೆ ಮುರಿದರು, ತಂಡಕ್ಕೆ ಆಸರೆಯಾದರು. ಈ ಹೋರಾಟ ಸ್ಮರಣೀಯ. ಶೀಘ್ರ ಗುಣಮುಖರಾಗಲಿ ಚಾಂಪಿಯನ್" ಎಂದು LSG ಮಾಲೀಕ ಸಂಜೀವ್ ಗೊಯೆಂಕಾ ಪಂತ್ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
ಗೊಯೆಂಕಾ ಅವರ ಈ ಟ್ವೀಟ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಐಪಿಎಲ್ನಲ್ಲಿ ಪಂತ್ ಕಳಪೆ ಪ್ರದರ್ಶನ ನೀಡಿದಾಗ ಗೊಯೆಂಕಾ ಅಸಮಾಧಾನ ವ್ಯಕ್ತಪಡಿಸಿದ್ದರು. ಲಖನೌ ಸೋತಾಗ ಮೈದಾನದಲ್ಲೇ ಪಂತ್ರನ್ನು ಗದರಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.