ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ, ಭಾರತದ ದಿಗ್ಗಜ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೀಗ ಧೋನಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಒಲಿದು ಬಂದಿದೆ. ಇದರ ಬೆನ್ನಲ್ಲೇ ಧೋನಿ ಬಗ್ಗೆ ರವಿಶಾಸ್ತ್ರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇನ್ನು ಧೋನಿಯಷ್ಟು ಶಾಂತ ಸ್ವಭಾವದ ಮತ್ತೊಬ್ಬ ಕ್ರಿಕೆಟಿಗನನ್ನು ನಾನೆಲ್ಲಿಯೂ ನೋಡಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
57
ಧೋನಿ ಶೂನ್ಯಕ್ಕೆ ಔಟಾದರೂ, ಶತಕ ಬಾರಿಸಿದರೂ, ವಿಶ್ವಕಪ್ ಗೆದ್ದರೂ, ದ್ವಿಶತಕ ಬಾರಿಸಿದರೂ ಯಾವತ್ತೂ ಮೈಮರೆಯುವುದಿಲ್ಲ. ಶಾಂತ ಸ್ವಭಾವದಲ್ಲೇ ಇರುತ್ತಾರೆ ಎಂದು ಶಾಸ್ತ್ರಿ ಹೇಳಿದ್ದಾರೆ.
67
ಇನ್ನು ಇದೇ ವೇಳೆ ವಿಕೆಟ್ ಕೀಪಿಂಗ್ನಲ್ಲಿ ಧೋನಿಯ ಕೈಚಳಕದ ಬಗ್ಗೆ ರವಿಶಾಸ್ತ್ರಿ ಮನಬಿಚ್ಚಿ ಶ್ಲಾಘಿಸಿದ್ದಾರೆ. ವಿಕೆಟ್ ಹಿಂದೆ ಧೋನಿಯ ಕೈ, ಜೇಬುಗಳ್ಳತನ ಮಾಡುವವರಿಗಿಂತ ಚುರುಕಾಗಿರುತ್ತದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
77
ಜೂನ್ 9ರಂದು ನಡೆದ ಐಸಿಸಿ ಹಾಲ್ ಆಫ್ ಫೇಮ್ ಕಾರ್ಯಕ್ರಮದಲ್ಲಿ ಧೋನಿ ಸೇರಿದಂತೆ 7 ದಿಗ್ಗಜ ಕ್ರಿಕೆಟಿಗರಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ಹೆಡ್ಕೋಚ್ ರವಿಶಾಸ್ತ್ರಿ, ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.