ಶಬರೀಶ್ ಚಿಕ್ಕಪ್ಪ ದಿಲೀಪ್ ಕುಮಾರ್ ದೇವಸ್ಥಾನವೊಂದರ ಅರ್ಚಕರಾಗಿದ್ದು, ಜೆಎಂ ಪಾಳ್ಯದ ನಿವಾಸಿಯಾಗಿದ್ದಾರೆ. ಇಂದು ದಿಲೀಪ್ ಕುಟುಂಬ ಸಮೇತ ಕೆ.ಆರ್.ಮಾರ್ಕೆಟ್ಗೆ ಆಗಮಿಸಿದ್ದರು. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಸ್ ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟಿಯಿಂದ ಬಲಕ್ಕೆ ಶಬರೀಶ್ ಕೆಳಗೆ ಬಿದ್ದಿದ್ದಾನೆ. ಬಿಎಂಟಿಸಿ ಬಸ್ ನಿಂದ ಒಂದೇ ತಿಂಗಳಲ್ಲಿ ಹಲವು ಅಪಘಾತ ಆಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ. ಹಲಸೂರು ಗೇಟ್ ಸಂಚಾರಿ ಪೋಲಿಸ್ ಠಾಣೆ ಮುಂಭಾಗ ಸೇರಿರುವ ಜನರು ನ್ಯಾಯ ಬೇಕೆಂದು ಆಗ್ರಹಿಸುತ್ತಿದ್ದಾರೆ.