ಅಳುವ, ನರಳುವ, ಬೆಂಕಿ ಉರಿಯುವ ಸದ್ದು.. ದಿವ್ಯಾಂಗ ಮಗಳಿಗೆ ನರಕ ತೋರಿಸಿದ್ದ ಕುಟುಂಬಕ್ಕೆ ಆತ್ಮವಾಗಿ ಕಾಡುವ ಬೆಂಗಳೂರು ಬಂಗಲೆ!

Published : Jun 25, 2026, 04:44 PM IST

ಕರ್ನಾಟಕ ಬೆಂಗಳೂರು ಮಹಾಲಿಂಗಪುರದಲ್ಲಿ ನಡೆದ ಈ ಘಟನೆ ಕೇಳಿದರೆ ಮೈ ಜುಮ್ಮೆನಿಸುತ್ತದೆ. ವರ್ಷಗಳ ಕಾಲ ಮುಚ್ಚಿದ್ದ ಒಂದು ಬಂಗಲೆಯನ್ನು ಸ್ವಚ್ಛಗೊಳಿಸಲು ಹೋದ ಐವರು ಸ್ನೇಹಿತರ ಜೀವನವೇ ಒಂದೇ ರಾತ್ರಿ ಬದಲಾಗಿತ್ತು.

PREV
13
ರಹಸ್ಯಮಯ ಬಂಗಲೆ ಮತ್ತು ವೃದ್ಧನ ಎಚ್ಚರಿಕೆ

ಗಿರೀಶ್ ಎಂಬ ವ್ಯಾಪಾರಿಯೊಬ್ಬರು ತಮ್ಮ ಸಂಬಂಧಿಕರ ಖಾಲಿ ಬಂಗಲೆಯನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಆದರೆ ಬಂಗಲೆಯ ಹೊರಗೆ ಕುಳಿತಿದ್ದ ವೃದ್ಧನೊಬ್ಬ, "ಆ ಬಂಗಲೆಯೊಳಗೆ ಹೋಗಬೇಡಿ, ಅಲ್ಲಿಂದ ಬೇಗ ಹೊರಬನ್ನಿ" ಎಂದು ಎಚ್ಚರಿಕೆ ನೀಡಿದ್ದಾನೆ.

ಮಧ್ಯರಾತ್ರಿ ಆರಂಭವಾದ ವಿಚಿತ್ರ ಘಟನೆಗಳು

ರಾತ್ರಿ ತಡವಾಗಿದ್ದ ಕಾರಣ, ಗಿರೀಶ್ ಮತ್ತು ಅವರ ಸ್ನೇಹಿತರು ಬಂಗಲೆಯಲ್ಲೇ ಉಳಿಯಲು ನಿರ್ಧರಿಸುತ್ತಾರೆ. ರಾತ್ರಿ 2 ಗಂಟೆ ಸುಮಾರಿಗೆ ಒಂದು ಜರ್ಮನ್ ಶೆಫರ್ಡ್ ನಾಯಿ ಮೇಲ್ಮಹಡಿಯ ಕಿಟಕಿಯತ್ತ ನೋಡಿ ನಿರಂತರವಾಗಿ ಬೊಗಳಲು ಆರಂಭಿಸಿದೆ.

ಅಷ್ಟೇ ಅಲ್ಲ, ಮುಚ್ಚಿದ್ದ ಕಿಟಕಿ ಸ್ವತಃ ತೆರೆದಿರುವುದನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

23
"ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಬೇಡ..."

"ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಬೇಡ..."

ಕುತೂಹಲದಿಂದ ಮೇಲ್ಮಹಡಿಗೆ ಹೋದ ಸಂತೋಷ್ ಎಂಬ ವ್ಯಕ್ತಿಗೆ ಅಲ್ಲಿ ವಿಚಿತ್ರ ಅನುಭವವಾಗಿದೆ. ಕೋಣೆಯಲ್ಲಿ ಇದ್ದಾಗ ಏಕಾಏಕಿ ಮಹಿಳೆಯೊಬ್ಬಳ ಧ್ವನಿ ಕೇಳಿಸಿದ್ದು, "ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಬೇಡ" ಎಂದು ಕಣ್ಣೀರಿನ ಧ್ವನಿಯಲ್ಲಿ ಹೇಳುತ್ತಿದ್ದಳಂತೆ.

ಕೆಲವೇ ಕ್ಷಣಗಳಲ್ಲಿ ಸುಟ್ಟು ಕರಕಲಾದ ಮುಖದ ಮಹಿಳೆಯ ಆಕೃತಿ ಕಾಣಿಸಿಕೊಂಡಿದ್ದು, ಭಯದಿಂದ ಸಂತೋಷ್ ಹೆದರಿದ್ದನು.

33
ಬಂಗಲೆಯ ಹಿಂದಿರುವ ದುರಂತ ಕಥೆ

ಬಂಗಲೆಯ ಹಿಂದಿರುವ ದುರಂತ ಕಥೆ

ನಂತರ ನಡೆದ ತನಿಖೆಯಲ್ಲಿ, ಸುಮಾರು 40 ವರ್ಷಗಳ ಹಿಂದೆ ಆ ಬಂಗಲೆಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವತಿಯನ್ನು ಕುಟುಂಬವೇ ಬಿಟ್ಟು ವಿದೇಶಕ್ಕೆ ತೆರಳಿದ್ದರೆಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.

ಕುಟುಂಬ ಮರಳಿ ಬರುತ್ತದೆ ಎಂದು ವರ್ಷಗಳ ಕಾಲ ಕಾಯುತ್ತಿದ್ದ ಆಕೆ ಕೊನೆಗೆ ಮೇಲ್ಮಹಡಿಯ ಕೋಣೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಇಂದಿಗೂ ಉಳಿದಿರುವ ನಿಗೂಢ ಪ್ರಶ್ನೆ

ಆ ಯುವತಿಯ ಆತ್ಮ ಇಂದಿಗೂ ಆ ಬಂಗಲೆಯಲ್ಲಿ ಅಲೆದಾಡುತ್ತಿದೆಯೇ? ಅಥವಾ ಅದು ಕೇವಲ ಭಯದಿಂದ ಹುಟ್ಟಿದ ಭ್ರಮೆಯೇ? ಈ ಪ್ರಶ್ನೆಗೆ ಉತ್ತರ ಮಾತ್ರ ಇಂದಿಗೂ ಸಿಕ್ಕಿಲ್ಲ.

ಈ ಹಾಂಟೆಡ್ ಬಂಗಲೆಯ ಕಥೆ ಇಂದು ಕೂಡ ಮಹಾಲಿಂಗಪುರದ ಜನರ ಮಧ್ಯೆ ನಿಗೂಢ ರಹಸ್ಯವಾಗಿಯೇ ಉಳಿದಿದೆ.

Read more Photos on
click me!

Recommended Stories