Naga Sadhu Facts: ನಾಗಾಸಾಧುಗಳು ಬೂದಿ ಬಳಿದುಕೊಂಡು ಬೆತ್ತಲೆ ತಿರುಗಲು ಕಾರಣವೇನು?

By Suvarna NewsFirst Published Jan 11, 2023, 3:42 PM IST
Highlights

ನಾಗಾ ಸಾಧುಗಳು ಯಾವಾಗಲೂ ಬೆತ್ತಲೆ ಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮಳೆಯಿರಲಿ, ಚಳಿ ಇರಲಿ, ಯಾವ ಸೀಸನ್ ಬಂದರೂ ಅವರ ಮೈಮೇಲೆ ಬಟ್ಟೆಯೇ ಇರುವುದಿಲ್ಲ. ತಮ್ಮ ಮೈಮೇಲೆ ಬೂದಿಯನ್ನು ಬಳಿದುಕೊಂಡು ತಿರುಗಾಡುತ್ತಾರೆ. ಇದರ ಹಿಂದಿನ ಕಾರಣವೇನು?

ಸನಾತನ ಧರ್ಮದಲ್ಲಿ, ಋಷಿಗಳು ಮತ್ತು ಸಂತರನ್ನು ದೇವರ ಹತ್ತಿರದ ಆರಾಧಕರಾಗಿ,ವಿಶೇಷ ಸಾಧಕರೆಂದು ಪರಿಗಣಿಸಲಾಗುತ್ತದೆ. ಸಂತರು ಮತ್ತು ಋಷಿಗಳ ವೇಷಭೂಷಣಗಳು ವಿಭಿನ್ನವಾಗಿರುತ್ತವೆ ಮತ್ತು ಅವರು ಭೌತಿಕ ಸುಖಗಳನ್ನು ತ್ಯಜಿಸಿ ಸತ್ಯ ಮತ್ತು ಧರ್ಮದ ಹಾದಿಯಲ್ಲಿ ಸಾಗುತ್ತಾರೆ. ಸಾಮಾನ್ಯವಾಗಿ ಸಂತರು ಮತ್ತು ಋಷಿಗಳು ಕೆಂಪು, ಹಳದಿ ಅಥವಾ ಕೇಸರಿ ಬಣ್ಣಗಳ ಬಟ್ಟೆಗಳಲ್ಲಿ ಕಾಣುತ್ತಾರೆ. ಆದರೆ ನಾಗಾ ಸಾಧುಗಳು ಎಂದಿಗೂ ಬಟ್ಟೆಯನ್ನೇ ಧರಿಸುವುದಿಲ್ಲ. 

ಕೊರೆಯುವ ಚಳಿಯಲ್ಲೂ, ಸುರಿವ ಮಳೆಯಲ್ಲೂ ಅವರು ಯಾವಾಗಲೂ ಬೆತ್ತಲೆಯಾಗಿಯೇ ಇರುತ್ತಾರೆ. ತಮ್ಮ ಮೈ ಮೇಲೆ ಬೂದಿಯನ್ನು ಬಳಿದುಕೊಂಡು ತಿರುಗಾಡುತ್ತಾರೆ. ನಾಗಾ ಎಂದರೆ 'ಬೆತ್ತಲೆ' ಎಂದರ್ಥ. ನಾಗಾ ಸಾಧುಗಳು ಜೀವನ ಪರ್ಯಂತ ಬೆತ್ತಲೆಯಾಗಿಯೇ ಇರುತ್ತಾರೆ ಮತ್ತು ಅವರು ತಮ್ಮನ್ನು ದೇವರ ಸಂದೇಶವಾಹಕರೆಂದು ಪರಿಗಣಿಸುತ್ತಾರೆ. ನಾಗಾ ಸಾಧುಗಳ ಬೆತ್ತಲೆಯ ಹಿಂದಿನ ಕಾರಣ ಮತ್ತು ನಾಗಾ ಸಾಧುಗಳ ಜೀವನಕ್ಕೆ ಸಂಬಂಧಿಸಿದ ಕುತೂಹಲಕಾರಿ ಸಂಗತಿಗಳ ಬಗ್ಗೆ ತಿಳಿಯೋಣ.

ಯಾವ ಕಾರಣಗಳಿಗಾಗಿ ನಾಗಾ ಸಾಧುಗಳು ಬಟ್ಟೆ ಧರಿಸುವುದಿಲ್ಲ?
ನಾಗಾ ಸಾಧುಗಳು ಪ್ರಕೃತಿ ಮತ್ತು ನೈಸರ್ಗಿಕ ಸ್ಥಿತಿಗೆ ಪ್ರಾಮುಖ್ಯತೆ ನೀಡುತ್ತಾರೆ. ಅದಕ್ಕಾಗಿಯೇ ಅವರು ಬಟ್ಟೆ ಧರಿಸುವುದಿಲ್ಲ. ಮನುಷ್ಯ ಬೆತ್ತಲೆಯಾಗಿ ಹುಟ್ಟುತ್ತಾನೆ ಎಂದರೆ ಈ ಸ್ಥಿತಿ ಸಹಜ ಎಂದು ನಾಗಾ ಸಾಧುಗಳು ನಂಬುತ್ತಾರೆ. ಈ ಭಾವನೆಯನ್ನು ಮೈಗೂಡಿಸಿಕೊಂಡು ನಾಗಾ ಸಾಧುಗಳು ಯಾವಾಗಲೂ ಬೆತ್ತಲೆಯಾಗಿಯೇ ಇರುತ್ತಾರೆ. ನಾಗಾ ಸಾಧುಗಳು ಸಹ ಬಾಹ್ಯ ವಿಷಯಗಳನ್ನು ಆಡಂಬರವೆಂದು ಪರಿಗಣಿಸುತ್ತಾರೆ. ಬೆತ್ತಲೆ ಸ್ಥಿತಿ ಮಾತ್ರವಲ್ಲದೇ ದೇಹದ ಮೇಲಿರುವ ಬೂದಿ ಮತ್ತು ಸೆಣಬು ಕೂಡ ನಾಗಾ ಸಾಧುಗಳ ಗುರುತಾಗಿದೆ.

Makar Sankranti 2023: ಹಬ್ಬದ ದಿನ ಹೀಗೆ ಮಾಡಿದರೆ ಸಮಸ್ಯೆಗಳಿಗೆ ಸಿಗಲಿದೆ ಮುಕ್ತಿ..

ನಾಗಾ ಸಾಧುಗಳಿಗೆ ಚಳಿ ಇಲ್ಲವೇ?
ಕೈ ನಡುಗುವಿಕೆ ಮತ್ತು ಕೊರೆಯುವ ಚಳಿಯಿಂದ ಜನರ ಸ್ಥಿತಿ ಹದಗೆಟ್ಟರೆ, ನಾಗಾ ಸಾಧುಗಳು ಪ್ರತಿ ಋತುವಿನಲ್ಲಿ ಬಟ್ಟೆ ಇಲ್ಲದೆ ಬದುಕುತ್ತಾರೆ. ಹೀಗಿರುವಾಗ ನಾಗಾ ಸಾಧುಗಳಿಗೆ ಚಳಿಯಾಗುವುದಿಲ್ಲವೇ ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡುತ್ತದೆ. ವಾಸ್ತವವಾಗಿ ಇದರ ಹಿಂದಿದೆ ರಹಸ್ಯ ಯೋಗ.

ನಾಗಾ ಸಾಧುಗಳು ಮೂರು ವಿಧದ ಯೋಗವನ್ನು ಮಾಡುತ್ತಾರೆ, ಇದು ಶೀತವನ್ನು ಎದುರಿಸಲು ಅವರಿಗೆ ಸಹಾಯಕವಾಗಿದೆ. ಅವರು ತಮ್ಮ ಆಲೋಚನೆಗಳು ಮತ್ತು ಆಹಾರದ ಮೇಲೆ ಸಂಯಮವನ್ನು ಇಟ್ಟುಕೊಳ್ಳುತ್ತಾರೆ. ನೀವು ದೇಹವನ್ನು ರೂಪಿಸುವ ವಾತಾವರಣಕ್ಕೆ ಅನುಗುಣವಾಗಿ ಮಾನವ ದೇಹ ಸಜ್ಜಾಗುತ್ತದೆ ಎಂಬ ಅಂಶವನ್ನು ಸಹ ಇದರ ಹಿಂದೆ ನೀಡಲಾಗಿದೆ. ಇದಕ್ಕೆ ಬೇಕಾಗಿರುವುದು ಅಭ್ಯಾಸ. ನಾಗಾ ಸಾಧುಗಳೂ ತಮ್ಮ ದೇಹವನ್ನು ಅಭ್ಯಾಸದ ಮೂಲಕ ಚಳಿಯಾಗದಂತೆ ಕಾಯ್ದುಕೊಳ್ಳುತ್ತಾರೆ.

ನಾಗಾ ಸಾಧುಗಳ ಜೀವನಕ್ಕೆ ಸಂಬಂಧಿಸಿದ ಕುತೂಹಲಕಾರಿ ಸಂಗತಿಗಳು

  • ನಾಗಾ ಸಾಧು ಆಗುವ ಪ್ರಕ್ರಿಯೆಯು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿ 6 ವರ್ಷಗಳನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ, ಅವರು ನಾಗಾ ಆರಾಧನೆಗೆ ಸೇರಲು ಅಗತ್ಯವಾದ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಈ ಸಮಯದಲ್ಲಿ ಅವರು ಕೌಪೀನ ಹೊರತುಪಡಿಸಿ ಬೇರೇನನ್ನೂ ಧರಿಸುವುದಿಲ್ಲ. ಕುಂಭಮೇಳದಲ್ಲಿ ಪ್ರತಿಜ್ಞೆ ಮಾಡಿದ ನಂತರ, ಅವರು ಈ ಕೌಪೀನವನ್ನೂ ತ್ಯಜಿಸುತ್ತಾರೆ ಮತ್ತು ತಮ್ಮ ಜೀವನದುದ್ದಕ್ಕೂ ಬೆತ್ತಲೆಯಾಗಿರುತ್ತಾರೆ.

    ದ್ವಾರಕೆಯಿಂದ ಕೃಷ್ಣ ಉಡುಪಿಗೆ ಬಂದ ಆಸಕ್ತಿದಾಯಕ ಕತೆ ಕೇಳಿದ್ದೀರಾ?
     
  • ನಾಗಾ ಸಾಧುಗಳಾಗುವ ಪ್ರಕ್ರಿಯೆಯಲ್ಲಿ ಮೊದಲು ಬ್ರಹ್ಮಚರ್ಯದ ಶಿಕ್ಷಣವನ್ನು ಪಡೆಯಬೇಕು. ಇದರಲ್ಲಿ ಯಶಸ್ವಿಯಾದ ನಂತರ, ಅವನಿಗೆ ಮಹಾಪುರುಷನ ದೀಕ್ಷೆಯನ್ನು ನೀಡಲಾಗುತ್ತದೆ ಮತ್ತು ನಂತರ ಯಜ್ಞೋಪವೀತವನ್ನು ಮಾಡಲಾಗುತ್ತದೆ. ಇದರ ನಂತರ, ಅವರು ತಮ್ಮ ಕುಟುಂಬ ಮತ್ತು ತಮ್ಮ ಹೆಸರಿನಲ್ಲೇ ತಾವೇ ಪಿಂಡದಾನ ಮಾಡುತ್ತಾರೆ. ಈ ಪ್ರಕ್ರಿಯೆಯನ್ನು 'ಬಿಜ್ವಾನ್' ಎಂದು ಕರೆಯಲಾಗುತ್ತದೆ. ಅಲ್ಲಿಂದ ಲೌಕಿಕ ಸಂಸಾರ ತ್ಯಾಗ ಮಾಡುತ್ತಾರೆ.
  • ನಾಗಾ ಸಾಧುಗಳಿಗೆ ಯಾವುದೇ ವಿಶೇಷ ಸ್ಥಳ ಅಥವಾ ಮನೆ ಇಲ್ಲ. ಗುಡಿಸಲು ಹಾಕಿಕೊಂಡು ಜೀವನ ಕಳೆಯುತ್ತಾರೆ. ಅವರು ಮಲಗಲು ಸಹ ಯಾವುದೇ ಹಾಸಿಗೆಯನ್ನು ಬಳಸುವುದಿಲ್ಲ. ನೆಲದ ಮೇಲೆ ಮಾತ್ರ ಮಲಗುತ್ತಾರೆ.
  • ನಾಗಾ ಸಾಧುಗಳು ದಿನಕ್ಕೆ 7 ಮನೆಗಳಲ್ಲಿ ಭಿಕ್ಷೆ ಬೇಡಬಹುದು. ಈ ಮನೆಗಳಿಂದ ಭಿಕ್ಷೆ ಪಡೆದರೆ ಪರವಾಗಿಲ್ಲ, ಇಲ್ಲದಿದ್ದರೆ ಹಸಿವಿನಿಂದ ಇರಬೇಕಾಗುತ್ತದೆ. ಅವರು ಇಡೀ ದಿನದಲ್ಲಿ ಒಮ್ಮೆ ಮಾತ್ರ ಆಹಾರವನ್ನು ತೆಗೆದುಕೊಳ್ಳುತ್ತಾರೆ.
  • ನಾಗಾ ಸಾಧುಗಳು ಹಿಂದೂ ಧಾರ್ಮಿಕ ಸಾಧುಗಳಾಗಿದ್ದು, ಅವರು ಯಾವಾಗಲೂ ಬೆತ್ತಲೆಯಾಗಿರುತ್ತಾರೆ ಮತ್ತು ಸಮರ ಕಲೆಗಳಲ್ಲಿ ಪ್ರವೀಣರಾಗಿದ್ದಾರೆ. ಅವರು ವಿವಿಧ ಅಖಾಡಾಗಳಲ್ಲಿ ತಮ್ಮ ವಾಸಸ್ಥಾನವನ್ನು ಹೊಂದಿದ್ದಾರೆ. ಹೆಚ್ಚಿನ ನಾಗಾ ಸಾಧುಗಳು ಜುನಾ ಅಖಾರಾದಲ್ಲಿದ್ದಾರೆ. ನಾಗಾ ಸಾಧುಗಳು ಅಖಾಡದಲ್ಲಿ ವಾಸಿಸುವ ಸಂಪ್ರದಾಯವನ್ನು ಆದಿಗುರು ಶಂಕರಾಚಾರ್ಯರು ಪ್ರಾರಂಭಿಸಿದರು.
click me!