ಮಗು ಓದಿನಲ್ಲಿ ಹಿಂದಿದೆಯೇ? ವಸಂತ ಪಂಚಮಿಯಂದು ಈ ಪರಿಹಾರ ಕೈಗೊಳ್ಳಿ..

By Suvarna NewsFirst Published Jan 24, 2023, 1:53 PM IST
Highlights

ಮಕ್ಕಳು ಓದಿನಲ್ಲಿ ಹಿಂದಿದ್ದರೆ, ಮಾತು ತೊದಲುತ್ತಿದ್ದರೆ, ಕಲಿಕೆಯಲ್ಲಿ ಆಸಕ್ತಿಯನ್ನೇ ತೋರದಿದ್ದರೆ ವಸಂತ ಪಂಚಮಿಯ ವಿಶೇಷ ದಿನ ಕೈಗೊಳ್ಳುವ ಕೆಲ ಪರಿಹಾರಗಳು ಅವರ ಭವಿಷ್ಯವನ್ನು ಬದಲಾಯಿಸಬಹುದು. 

ಕಾಕಚೇಷ್ಠಾ ವಕೋಧ್ಯಾನಾಂ ಸ್ವಾನ್ ನಿದ್ರಾ ತತೀವ್ ಚ ।
ಅಲ್ಪಾಹಾರೀ ಗೃಹತ್ಯಾಗಿ ವಿದ್ಯಾರ್ಥಿ ಪಂಚ ಲಕ್ಷಣಂ ||

ಅರ್ಥ: ಕಾಗೆಯಂತೆ ತಿಳಿಯಲು ಹುಡುಕುವುದು, ಬೆಳ್ಳಕ್ಕಿಯಂತೆ ಧ್ಯಾನಿಸುವುದು, ನಾಯಿಯಂತೆ ಮಲಗುವುದು, ಸ್ವಲ್ಪವೇ ಆಹಾರ ಸೇವಿಸುವುದು, ವಿದ್ಯೆಗಾಗಿ ಮನೆಯಿಂದ ದೂರವಿರುವುದು ಇವು ಆದರ್ಶ ವಿದ್ಯಾರ್ಥಿಯ ಐದು ಲಕ್ಷಣಗಳು. ವಿದ್ಯಾರ್ಥಿಯು ಈ ಗುಣಗಳನ್ನು ಹೊಂದಿದ್ದರೆ ಅವನು ಯಾವಾಗಲೂ ಯಶಸ್ವಿಯಾಗುತ್ತಾನೆ ಮತ್ತು ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತಾನೆ.

ವಿದ್ಯಾರ್ಥಿಯು ಈ ಕೆಳಗಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ:
ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ,
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗದಿರುವುದು,
ಕಠಿಣ ಪರಿಶ್ರಮದ ನಂತರವೂ ಅಪೇಕ್ಷಿತ ಫಲಿತಾಂಶವನ್ನು ಪಡೆಯದಿರುವುದ,
ಅಪೇಕ್ಷಿತ ಕೆಲಸ ಮತ್ತು ಸ್ಥಾನವನ್ನು ಪಡೆಯದಿರುವುದು, ಇತ್ಯಾದಿ.
 
ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ನೀವು ವಸಂತ ಪಂಚಮಿಯಂದು ತಾಯಿ ಸರಸ್ವತಿ ಪೂಜೆಯನ್ನು ಮಾಡಬಹುದು ಮತ್ತು ಆಕೆಯನ್ನು ಮೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದು.

Vastu Tips: ಈ ಗಿಡಗಳು ಮನೆಯಲ್ಲಿದ್ರೆ ದಾರಿದ್ರ್ಯನ್ನ ಕೈ ಬೀಸಿ ಕರೆಯುತ್ತವೆ!

ವಸಂತ ಪಂಚಮಿಯ ಈ ಪರಿಹಾರಗಳು ಮಕ್ಕಳ ಶಿಕ್ಷಣದಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತವೆ..
ತಾಯಿ ಸರಸ್ವತಿಯ ಜನನದ ನಂತರವೇ ಜಗತ್ತಿಗೆ ಮಾತು ಸಿಕ್ಕಿದ್ದು. ವಸಂತ ಪಂಚಮಿಯಂದು ತಾಯಿ ಸರಸ್ವತಿಗೆ ಸಂಬಂಧಿಸಿದ ಕೆಲವು ಕ್ರಮಗಳನ್ನು ಮಾಡುವುದರಿಂದ ಮಕ್ಕಳಿಂದ ಹಿರಿಯರವರೆಗೆ ವಾಕ್ ದೋಷಗಳನ್ನು ಹೋಗಲಾಡಿಸಬಹುದು ಎಂದು ಹೇಳಲಾಗುತ್ತದೆ. ಮಾ ಸರಸ್ವತಿಯ ಕೃಪೆಯಿಂದ ವಿದ್ಯಾಭ್ಯಾಸ ಮತ್ತು ಕಲೆಗೆ ಸಂಬಂಧಿಸಿದ ಜನರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವಸಂತ ಪಂಚಮಿಯು ಸರಸ್ವತಿ ದೇವಿಯ ಆಶೀರ್ವಾದವನ್ನು ಪಡೆಯಲು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ.

  • ಮಕ್ಕಳು ಮಾತನಾಡುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ವಸಂತ ಪಂಚಮಿಯ ದಿನದಂದು ಬೆಳ್ಳಿಯ ಸೂಜಿಯಿಂದ ಅವರ ನಾಲಿಗೆಯ ಮೇಲೆ 'ಓಂ ಹ್ರೀ ಶ್ರೀ ಸರಸ್ವತ್ಯೈ ನಮಃ' ಎಂಬ ಮಂತ್ರವನ್ನು ಬರೆಯಿರಿ. ಇದರಿಂದ ಅವರ ಭಾಷೆ ಸ್ಪಷ್ಟವಾಗುತ್ತದೆ ಎಂದು ನಂಬಲಾಗಿದೆ. ಅವರು ಯಾವಾಗಲೂ ಅಧ್ಯಯನಕ್ಕೆ ಮೀಸಲಾಗಿರುತ್ತಾರೆ.
  • ಮಾತಿನಲ್ಲಿ ದೋಷವಿದ್ದರೆ, ವ್ಯಕ್ತಿಯು ಗೌರವವನ್ನು ಕಳೆದುಕೊಳ್ಳುತ್ತಾನೆ, ಅದು ಜೀವನದಲ್ಲಿ ದುರದೃಷ್ಟವನ್ನು ತರುತ್ತದೆ. ವಸಂತ ಪಂಚಮಿ ವಾಣಿ ದೋಷವನ್ನು ಹೋಗಲಾಡಿಸಲು, ಗಣಪತಿಯನ್ನು 21 ಗಂಟುಗಳಿಂದ ಪೂಜಿಸಿ ನಂತರ ಸರಸ್ವತಿ ದೇವಿಯನ್ನು ಪೂಜಿಸಿ.

    February Financial Horoscope: ಈ 5 ರಾಶಿಗಳಿಗೆ ಫೆಬ್ರವರಿಯಲ್ಲಿ ಕಾದಿದೆ ದೊಡ್ಡ ಆರ್ಥಿಕ ನಷ್ಟ!
     
  • ಗುರುವು ದುರ್ಬಲವಾಗಿದ್ದರೆ, ವ್ಯಕ್ತಿಯು ತನ್ನ ಮಾತಿನಲ್ಲಿ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ, ವಸಂತ ಪಂಚಮಿಯಂದು ತಾಯಿ ಸರಸ್ವತಿಗೆ ಕುಂಕುಮ ತಿಲಕವನ್ನು ಹಚ್ಚಿ ನಂತರ ನೀವೇ ತಿಲಕವನ್ನು ಇಟ್ಟುಕೊಳ್ಳಿ. ಇದರೊಂದಿಗೆ ಪೂಜೆಯಲ್ಲಿ ನೀಡಲಾಗುವ ನೈವೇದ್ಯವನ್ನು ಸೇವಿಸಿ.
  • ಮಗುವು ಓದಲು, ಬರೆಯಲು ಕಳ್ಳ ತಪ್ಪಿಸುತ್ತಿದ್ದರೆ, ವಸಂತ ಪಂಚಮಿಯ ದಿನದಂದು ಅವರ ಅಧ್ಯಯನ ಕೊಠಡಿಯಲ್ಲಿ ಪೂರ್ವ ದಿಕ್ಕಿನಲ್ಲಿ ಮಾ ಸರಸ್ವತಿಯ ಚಿತ್ರವನ್ನು ಇರಿಸಿ. ಇದರ ಪರಿಣಾಮದಿಂದ ಮಗುವಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚುತ್ತದೆ.
  • ವಸಂತ ಪಂಚಮಿಯ ದಿನದಂದು, ಹಳದಿ ಬಣ್ಣದ ಬಟ್ಟೆಗಳನ್ನು ಅಗತ್ಯ ಇರುವವರಿಗೆ ದಾನ ಮಾಡುವುದರಿಂದ ಸರಸ್ವತಿಗೆ ತುಂಬಾ ಸಂತೋಷವಾಗುತ್ತದೆ.
  • ವಸಂತ ಪಂಚಮಿಯಂದು ತಾಯಿ ಸರಸ್ವತಿಗೆ ಹೊಸ ಪುಸ್ತಕ ಮತ್ತು ಪೆನ್ನನ್ನು ಅರ್ಪಿಸಿ ಮತ್ತು ನಂತರ ಮಗುವಿಗೆ 'ಓಂ' ಬರೆಯುವಂತೆ ಮಾಡಿ. ಇದರಿಂದ ಮಗು ಶಿಕ್ಷಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತದೆ.
  • ವಸಂತ ಪಂಚಮಿಯ ದಿನ ಮಕ್ಕಳ ಕೈಯಿಂದ ಸರಸ್ವತಿ ಪೂಜೆ ಮಾಡಿಸಿ.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!