ಮಂತ್ರಾಲಯದಲ್ಲಿ ಸಂಭ್ರಮ ಶ್ರೀಕೃಷ್ಣ ಜನ್ಮಾಷ್ಠಮಿ: ಮಕ್ಕಳಂತೆ ಮಡಿಕೆ ಒಡೆದ ಶ್ರೀ ಸುಬುಧೇಂದ್ರ ಶ್ರೀಗಳು

By Girish GoudarFirst Published Aug 27, 2024, 7:54 PM IST
Highlights

ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಿಗಾಗಿ ಮಡಿಕೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳಂತೆ ಶ್ರೀ ಮಡಿಕೆ ಒಡೆದು ಶ್ರೀಕೃಷ್ಣ ಜನ್ಮಾಷ್ಠಮಿಗೆ ಚಾಲನೆ ನೀಡಿದ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು 

ರಾಯಚೂರು(ಆ.27): ಮಂತ್ರಾಲಯದಲ್ಲಿ ಸಡಗರ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಠಮಿಯನ್ನ ಆಚರಣೆ ಮಾಡಲಾಗಿದೆ. ಶ್ರೀಮಠದ ಹೊರಭಾಗದಲ್ಲಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಮಡಿಕೆ ಒಡೆಯುವ ಕಾರ್ಯಕ್ರಮ ನಡೆದಿದೆ. 

ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಿಗಾಗಿ ಮಡಿಕೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳಂತೆ ಶ್ರೀ ಸುಬುಧೇಂದ್ರ ತೀರ್ಥರ ಮಡಿಕೆ ಒಡೆದು ಶ್ರೀಕೃಷ್ಣ ಜನ್ಮಾಷ್ಠಮಿಗೆ ಚಾಲನೆ ನೀಡಿದ್ದಾರೆ. 

Latest Videos

ಮುಂದಿನ 2 ತಿಂಗಳಲ್ಲಿ ಈ 3 ರಾಶಿಗೆ ಸಂಪತ್ತಿನ ಮಳೆ, ಶನಿಯಿಂದ ಪವಾಡ ಶ್ರೀಮಂತಿಕೆ ಭಾಗ್ಯ

ಆ ಬಳಿಕ ವಿದ್ಯಾಪೀಠದ ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ‌ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.  

click me!