ಈ 4 ರಾಶಿಯವರಿಗೆ ಇದೆ ಕೃಷ್ಣ ಕೃಪೆ, ಶ್ರೀಕೃಷ್ಣನಿಂದ ಇವರಿಗೆ ಸಿರಿವಂತಿಕೆ ಯೋಗ

By Sushma HegdeFirst Published Aug 20, 2024, 1:34 PM IST
Highlights

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಶ್ರೀಕೃಷ್ಣನ ಕೃಪೆ ಯಾವಾಗಲೂ ಇರುತ್ತದೆ. 
 

ಹಿಂದೂ ಪಂಚಾಂಗದ ಪ್ರಕಾರ, ಕೃಷ್ಣಾಷ್ಟಮಿ ಆಚರಣೆಗಳನ್ನು ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷದ ಅಷ್ಟಮಿ ತಿಥಿಯನ್ನು ಆಗಸ್ಟ್ 26 ಸೋಮವಾರದಂದು ಆಚರಿಸಲಾಗುತ್ತದೆ. ಈ ಶುಭ ದಿನದಂದು ನಂದಗೋಪಾಲನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಆಧ್ಯಾತ್ಮಿಕ ಮಾರ್ಗವನ್ನು ಪ್ರಭಾವಿಸುವ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಅವರು ತಮ್ಮ ಕಾರ್ಯಗಳು ಮತ್ತು ವ್ಯಕ್ತಿತ್ವದ ಆಧಾರದ ಮೇಲೆ ದೇವರ ಆಶೀರ್ವಾದವನ್ನು ಪಡೆಯುತ್ತಾರೆ. ಅದಕ್ಕಾಗಿಯೇ ಕೆಲವು ರಾಶಿಚಕ್ರ ಚಿಹ್ನೆಗಳು ದೇವರಿಗೆ ಪ್ರಿಯವಾಗಿವೆ. ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣನ ಕೆಲವು ಪ್ರಿಯ ರಾಶಿಗಳಿವೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ವೃಷಭ ರಾಶಿ ಎಂದರೆ ವೇಣು ಮಾಧವನಿಗೆ ತುಂಬಾ ಪ್ರಿಯ. ಇವರಿಗೆ ಶ್ರೀಕೃಷ್ಣನ ಆಶೀರ್ವಾದವಿದೆ. ಯಾವುದೇ ಕೆಲಸ ಮಾಡಿದರೂ ಉತ್ತಮ ಫಲಿತಾಂಶವನ್ನು ಸಾಧಿಸುತ್ತಾರೆ. ಅವರು ಮಾಡುವ ಎಲ್ಲ ಕೆಲಸದಲ್ಲೂ ಸುಲಭವಾಗಿ ಯಶಸ್ವಿಯಾಗುತ್ತಾರೆ. ಈ ರಾಶಿಯವರು ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ವಿಶೇಷ ಪೂಜೆಯನ್ನು ಮಾಡಬೇಕು.ಹಾಗೂ ಕೃಷ್ಣನಿಗೆ ಬೆಣ್ಣೆ ಮತ್ತು ಸಿಹಿಯನ್ನು ಅರ್ಪಿಸಬೇಕು.

Latest Videos

ಕರ್ಕ ರಾಶಿಯವರಿಗೆ ಶ್ರೀಕೃಷ್ಣನ ಕೃಪೆ ಸದಾ ಇರುತ್ತದೆ. ಈ ಕಾರಣದಿಂದಾಗಿ, ಅವರ ಅದೃಷ್ಟವು ಅಗಾಧವಾಗಿ ಹೆಚ್ಚಾಗುತ್ತದೆ.ಆಶೀರ್ವಾದದಿಂದ ಈ ರಾಶಿಯವರಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ಉದ್ಯೋಗಿಗಳು ಉನ್ನತ ಹುದ್ದೆಗಳನ್ನು ತಲುಪುತ್ತಾರೆ. ಇದಲ್ಲದೆ, ಅವರ ವೈಯಕ್ತಿಕ ಜೀವನವು ಸಂತೋಷ ಮತ್ತು ಉತ್ಸಾಹದಿಂದ ತುಂಬಿರುತ್ತದೆ. ಜನ್ಮಾಷ್ಟಮಿಯಂದು ಗೋಡಂಬಿ, ಕುಂಕುಮ, ಸಿಹಿಯನ್ನು ನೈವೆದ್ಯ ಮಾಡಿ. 

ಸಿಂಹ ರಾಶಿಯ ಜನರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅದಕ್ಕಾಗಿಯೇ ಶ್ರೀಕೃಷ್ಣ ಶೀರ್ವಾದವಿರುತ್ತೆ. ಸಿಂಹ ರಾಶಿಯವರು ತಮ್ಮ ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತಾರೆ. ಅವರು ಪ್ರತಿಯೊಂದು ಕ್ಷೇತ್ರದಲ್ಲೂ ವೈಯಕ್ತಿಕ ಜೀವನ ಅಥವಾ ವೃತ್ತಿಪರ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಆದ್ದರಿಂದಲೇ ಅವರ ಜೀವನದಲ್ಲಿ ಹೆಚ್ಚು ಸಂತೋಷ ಮತ್ತು ಶಾಂತಿ ಇರುತ್ತದೆ. ಆದರೆ ಕೈಗೆತ್ತಿಕೊಂಡ ಕೆಲಸ ಯಶಸ್ವಿಯಾಗಬೇಕಾದರೆ ವೇಣು ಮಾಧವನ ಜೊತೆ ರಾಧಾದೇವಿಯ ಆರಾಧನೆ ಮಾಡಬೇಕು. ಅಲ್ಲದೆ ಹಸುವಿಗೆ ಹಸಿರು ಹುಲ್ಲನ್ನು ಕೊಡಿ.

ತುಲಾ ರಾಶಿಯವರು ಯಾವಾಗಲೂ ಶ್ರೀಕೃಷ್ಣನ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ. ಅವರು ತಮ್ಮ ಜೀವನದ ಎಲ್ಲಾ ಅಂಶಗಳಲ್ಲಿ ಗೌರವವನ್ನು ಪಡೆಯುತ್ತಾರೆ. ಇದರಿಂದಾಗಿ ಅವರು ದೀರ್ಘಕಾಲ ಸಂತೋಷವಾಗಿರುತ್ತಾರೆ. ತುಲಾ ರಾಶಿಯವರು ಜನ್ಮಾಷ್ಟಮಿಯಂದು ಶ್ರೀಕೃಷ್ಣನನ್ನು ಪೂಜಿಸಿ ಬೆಣ್ಣೆ ಮತ್ತು ಸಕ್ಕರೆಯ ಮಿಶ್ರಣವನ್ನು ನೈವೇದ್ಯ ಮಾಡಿದರೆ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುತ್ತದೆ. ಹಸುವಿಗೆ ಕುಂಕುಮವನ್ನು ಹಚ್ಚಿ. ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

click me!