Sankashti Chaturthi 2023: ದಿನಾಂಕ, ಮುಹೂರ್ತ, ವ್ರತ ಕತೆ ಇಲ್ಲಿದೆ..

By Suvarna NewsFirst Published Feb 5, 2023, 11:12 AM IST
Highlights

ದ್ವಿಜಪ್ರಿಯ ಸಂಕಷ್ಟ ಚತುರ್ಥಿಯ ದಿನದಂದು ಉಪವಾಸ ಮತ್ತು ಪೂಜೆಯನ್ನು ಕಥೆಯಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಈ ಬಾರಿಯ ಸಂಕಷ್ಟಿ ದಿನಾಂಕ, ಮುಹೂರ್ತ ಹಾಗೂ ವ್ರತ ಕತೆ ಇಲ್ಲಿದೆ.

ಫಲ್ಗುಣ ಮಾಸದ ಸಂಕಷ್ಟ ಚತುರ್ಥಿಯ ಉಪವಾಸವನ್ನು ಫೆಬ್ರವರಿ 9, 2023 ರಂದು ಆಚರಿಸಲಾಗುತ್ತದೆ. ಈ ದಿನ ಬಪ್ಪನ ಆರನೇ ರೂಪವಾದ ದ್ವಿಜಪ್ರಿಯ ಗಣೇಶನನ್ನು ಪೂಜಿಸಲಾಗುತ್ತದೆ. ಇದನ್ನು ದ್ವಿಜಪ್ರಿಯ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನದ ಪೂಜೆಯು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ ಮತ್ತು ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ದ್ವಿಜಪ್ರಿಯ ಸಂಕಷ್ಟ ಚತುರ್ಥಿಯ ದಿನದಂದು ಉಪವಾಸ ಮತ್ತು ಪೂಜೆಯನ್ನು ಕಥೆಯಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ದ್ವಿಜಪ್ರಿಯ ಸಂಕಷ್ಟಿ ಚತುರ್ಥಿಯ ಕಥೆ ಮತ್ತು ಶುಭ ಮುಹೂರ್ತವನ್ನು ತಿಳಿಯೋಣ.

ದ್ವಿಜಪ್ರಿಯ ಸಂಕಷ್ಟ ಚತುರ್ಥಿ 2023 ಮುಹೂರ್ತ (Dwijapriya Sankashti Chaturthi 2023 muhurt)
ಈ ಬಾರಿಯ ಸಂಕಷ್ಟಿ ಚತುರ್ಥಿಯ ಉಪವಾಸವನ್ನು ಫೆಬ್ರವರಿ 9, 2023ರಂದು ಆಚರಿಸಲಾಗುತ್ತದೆ. 
ಫಲ್ಗುಣ ಕೃಷ್ಣ ಸಂಕಷ್ಟಿ ಚತುರ್ಥಿ ದಿನಾಂಕ ಪ್ರಾರಂಭ - 09 ಫೆಬ್ರವರಿ 2023, ಬೆಳಿಗ್ಗೆ 06.23
ಫಲ್ಗುಣ ಕೃಷ್ಣ ಸಂಕಷ್ಟಿ ಚತುರ್ಥಿ ದಿನಾಂಕ ಕೊನೆ - 10 ಫೆಬ್ರವರಿ 2023, ಬೆಳಿಗ್ಗೆ 07.58 
ಚಂದ್ರೋದಯ ಸಮಯ - 09.25 (9 ಫೆಬ್ರವರಿ 2023)

Valentine's Day ಬಂತು; ನಿಮ್ಮ ಪ್ರಪೋಸಲ್ ಒಪ್ಪಿಕೊಳ್ಳುತ್ತಾರೋ, ಇಲ್ಲವೋ?

ದ್ವಿಜಪ್ರಿಯಾ ಸಂಕಷ್ಟಿ ಚತುರ್ಥಿ ಕಥೆ (vrat katha)
ದಂತಕಥೆಯ ಪ್ರಕಾರ, ಒಮ್ಮೆ ಶಿವ ಮತ್ತು ಪಾರ್ವತಿಯ ನಡುವೆ ಚೌಪದ ಆಟವು ಪ್ರಾರಂಭವಾಯಿತು, ಆದರೆ ಆ ಸಮಯದಲ್ಲಿ ಈ ಆಟದ ತೀರ್ಪುಗಾರನ ಪಾತ್ರವನ್ನು ನಿರ್ವಹಿಸುವ ಬೇರೆ ಯಾರೂ ಅಲ್ಲಿ ಇರಲಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಶಿವ ಮತ್ತು ಪಾರ್ವತಿ ಒಟ್ಟಾಗಿ ಮಣ್ಣಿನ ಮೂರ್ತಿಯನ್ನು ಮಾಡಿ ಅದರಲ್ಲಿ ತಮ್ಮ ಪ್ರಾಣವನ್ನು ಹಾಕಿದರು. ಶಂಕರ-ಪಾರ್ವತಿ ಈ ಆಟದಲ್ಲಿ ಯಾರು ಗೆದ್ದಿದ್ದು ಎಂದು ನಿರ್ಧರಿಸಲು ಮಣ್ಣಿನಿಂದ ಮಾಡಿದ ಮಗುವಿಗೆ ಆದೇಶಿಸಿದರು.

ಮಾತೆ ಪಾರ್ವತಿಯ ಕೋಪ
ಪಾರ್ವತಿ ಮತ್ತು ಶಿವನ ನಡುವೆ ಚೌಪದ ಆಟ ಪ್ರಾರಂಭವಾಯಿತು. ಪಾರ್ವತಿ ದೇವಿಯು ಶಿವನನ್ನು ಪ್ರತಿ ನಡೆಯಲ್ಲೂ ಸೋಲಿಸಿದಳು. ಅದೇ ರೀತಿ ಆಟ ಸಾಗಿತು. ಆದರೆ ಒಮ್ಮೆ ಮಗು ತಪ್ಪಾಗಿ ತಾಯಿ ಪಾರ್ವತಿ ಸೋತಳು ಎಂದು ಘೋಷಿಸಿತು. ಬಾಲಕನ ಈ ತಪ್ಪಿನಿಂದಾಗಿ ದೇವಿ ಕೋಪಗೊಂಡಳು. ಕೋಪದಲ್ಲಿ, ಅವಳು ಮಗುವನ್ನು ಕುಂಟನಾಗು ಎಂದು ಶಪಿಸಿದಳು. ಮಗು ತನ್ನ ತಪ್ಪಿಗೆ ತಾಯಿ ಪಾರ್ವತಿಗೆ ಪದೇ ಪದೇ ಕ್ಷಮೆ ಯಾಚಿಸಿತು, ಆದರೆ ಈಗ ಶಾಪವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ದೇವಿ ಹೇಳಿದಳು. ಮಗು ತಾಯಿಯಿಂದ ಪರಿಹಾರವನ್ನು ಕೇಳಿತು.

ದ್ವಿಜಪ್ರಿಯ ಸಂಕಷ್ಟ ಚತುರ್ಥಿಯ ಮಹಿಮೆಯಿಂದ ಶಾಪದಿಂದ ಮುಕ್ತಿ ಪಡೆದ ಮಗು
ಪಾರ್ವತಿ ದೇವಿಯು ಮಗುವಿಗೆ ಶಾಪ ವಿಮೋಚನೆಯ ಮಾರ್ಗವನ್ನು ಹೇಳಿದಳು ಮತ್ತು ಫಾಲ್ಗುಣ ಮಾಸದ ಸಂಕಷ್ಟ ಚತುರ್ಥಿಯಂದು ಗಣಪತಿಯ ದ್ವಂದ್ವ ರೂಪವನ್ನು ನಿಯಮಾನುಸಾರ ಪೂಜಿಸು ಎಂದು ಹೇಳಿದಳು. ಹುಡುಗನು ಹಾಗೆಯೇ ಮಾಡಿದನು ಮತ್ತು ಗೌರಿಯ ಮಗ ಗಣೇಶನು ಹುಡುಗನ ನಿಜವಾದ ಭಕ್ತಿಯನ್ನು ಕಂಡು ತುಂಬಾ ಸಂತೋಷಪಟ್ಟನು. ಮಗು ಶಾಪದಿಂದ ಮುಕ್ತವಾಯಿತು, ಅವನ ಕಾಲುಗಳು ಸಂಪೂರ್ಣವಾಗಿ ಆರೋಗ್ಯಕರವಾದವು ಮತ್ತು ಅವನು ತನ್ನ ಜೀವನವನ್ನು ಶಾಂತಿಯುತವಾಗಿ ಬದುಕಲು ಪ್ರಾರಂಭಿಸಿದನು.

ವಾರ ಭವಿಷ್ಯ: ವಿತ್ತೀಯ ಸಮಸ್ಯೆಗಳಿಂದ ತುಲಾ ಕಂಗಾಲು, ಉಳಿದ ರಾಶಿಗಳಿಗೆ ಈ ವಾರ ಹೇಗಿರಲಿದೆ?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!