ತಪ್ಪಿಯೂ ಗಣೇಶನಿಗೆ ಈ 5 ವಸ್ತುಗಳನ್ನು ಅರ್ಪಿಸುವ ತಪ್ಪು ಮಾಡ್ಬೇಡಿ!

By Suvarna NewsFirst Published Jun 14, 2023, 11:41 AM IST
Highlights

ಇಂದು ಬುಧವಾರ, ಗಣೇಶನ ದಿನ. ಈ ದಿನ ಬಹುತೇಕ ಎಲ್ಲರೂ ಗಣೇಶನನ್ನು ಪೂಜಿಸುತ್ತಾರೆ. ಆದರೆ, ಈ ಪೂಜೆಯಲ್ಲಿ ಕೆಲ ವಸ್ತುಗಳನ್ನು ಬಳಸಬಾರದು. ಗಣೇಶನಿಗೆ ಕೆಲ ಪೂಜಾ ಸಾಮಗ್ರಿಗಳನ್ನು ಅರ್ಪಿಸಬಾರದು ಎಂಬುದನ್ನು ತಿಳಿದುಕೊಂಡಿದ್ದೀರಾ?

ಹಿಂದೂ ಧರ್ಮದ ಪ್ರಕಾರ, ವಾರದ ಏಳು ದಿನಗಳನ್ನು ವಿವಿಧ ದೇವರುಗಳಿಗೆ ಅರ್ಪಿಸಲಾಗಿದೆ. ಬುಧವಾರ ಗಣೇಶನ ದಿನ. ಬಪ್ಪನನ್ನು ವಿಘ್ನಕರ್ತ ಮತ್ತು ವಿಘ್ನಹರ್ತಾ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವು ಗಣೇಶನ ಪೂಜೆಯಿಂದ ಆರಂಭವಾಗುತ್ತದೆ. ಬುಧವಾರದಂದು ಮನಃಪೂರ್ವಕವಾಗಿ ಗಣಪತಿಯನ್ನು ಪೂಜಿಸುವುದರಿಂದ ಗಣಪತಿ ಸಂತುಷ್ಟನಾಗುತ್ತಾನೆ ಮತ್ತು ಭಕ್ತರ ಎಲ್ಲಾ ದುಃಖಗಳನ್ನು ದೂರ ಮಾಡುತ್ತಾನೆ. ಆದರೆ ಇದಕ್ಕೆ ತದ್ವಿರುದ್ಧವಾಗಿ, ಈ ದಿನ ಪೂಜೆಯಲ್ಲಿ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ  ಬಪ್ಪ ಕೋಪಗೊಳ್ಳುತ್ತಾನೆ ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ಗಣೇಶನ ಪೂಜೆಯಲ್ಲಿ ಈ ವಸ್ತುಗಳನ್ನು ಅರ್ಪಿಸಬೇಡಿ.

ಚಂದ್ರನಿಗೆ ಸಂಬಂಧಿಸಿದ ವಸ್ತುಗಳನ್ನು ಅರ್ಪಿಸಬೇಡಿ
ಒಮ್ಮೆ ಚಂದ್ರನು ಗಣೇಶನನ್ನು ಅಣಕಿಸಿದಾಗ ಕೋಪಗೊಂಡು ಚಂದ್ರನು ತನ್ನ ಸೌಂದರ್ಯವನ್ನು ಕಳೆದುಕೊಳ್ಳುವಂತೆ ಗಣಪತಿಯು ಶಾಪ ನೀಡುತ್ತಾನೆ. ಇದರಿಂದಾಗಿ ಗಣೇಶ ಪೂಜೆಯಲ್ಲಿ ಬಿಳಿ ಶ್ರೀಗಂಧ, ಬಿಳಿ ಬಟ್ಟೆ, ಬಿಳಿ ಪವಿತ್ರ ದಾರ ಇತ್ಯಾದಿಗಳನ್ನು ಅರ್ಪಿಸುವುದಿಲ್ಲ. ನೀವು ಅವನಿಗೆ ಕೆಂಪು ಅಥವಾ ಹಳದಿ ಚಂದನ ಅರ್ಪಿಸಬಹುದು. 

Latest Videos

ಕಷ್ಟದ ಮೇಲೆ ಕಷ್ಟ ಬರಲಿ, ಗೆದ್ದೇಗೆಲ್ತೀವಿ ಅನ್ನೋ ಛಲದಂಕ ಮಲ್ಲರು ಈ ರಾಶಿಯವ್ರು; ಅವರಿಗೆ ಗೆಲುವು ಶತಸಿದ್ಧ

ತುಳಸಿ
ತುಳಸಿಯನ್ನು ವಿಷ್ಣುವಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸಬೇಡಿ. ದಂತಕಥೆಯ ಪ್ರಕಾರ, ತುಳಸಿಯ ಮದುವೆಯ ಪ್ರಸ್ತಾಪವನ್ನು ಗಣೇಶ ತಿರಸ್ಕರಿಸಿದನು. ಇದರಿಂದ ತುಳಸಿಯು ಕೋಪಗೊಂಡಳು ಮತ್ತು ಗಣೇಶನಿಗೆ ಒಂದಲ್ಲ ಎರಡು ಮದುವೆಗಳನ್ನು ಆಗುವಂತೆ ಶಪಿಸಿದಳು. ಇದಾದ ಮೇಲೆ ಶ್ರೀ ಗಣೇಶನು ತುಳಸಿಯನ್ನು ನೀನು ಅಸುರನನ್ನು ಮದುವೆಯಾಗು ಎಂದು ಶಪಿಸಿದನು. ಇದರ ನಂತರ, ಗಣಪತಿಯ ಪೂಜೆಯಲ್ಲಿ ತುಳಸಿಯನ್ನು ಅರ್ಪಿಸುವುದು ನಿಷಿದ್ಧವೆಂದು ಪರಿಗಣಿಸಲಾಗಿದೆ.

ಕೇತಕಿ ಹೂವುಗಳು
ಗಣೇಶನಿಗೆ ಬಿಳಿ ಹೂವುಗಳು ಅಥವಾ ಕೇತಕಿ ಹೂವುಗಳನ್ನು ಅರ್ಪಿಸಬೇಡಿ. ಪುರಾಣಗಳ ಪ್ರಕಾರ, ಶಿವನಿಗೆ ಕೇತಕಿ ಹೂವುಗಳು ಇಷ್ಟವಿಲ್ಲ. ಈ ಕಾರಣದಿಂದ ಗಣಪತಿಗೆ ಕೇತಕಿ ಹೂಗಳನ್ನು ಅರ್ಪಿಸಬಾರದು. ಜೊತೆಗೆ ಒಣಗಿದ ಹೂವುಗಳನ್ನು ಅರ್ಪಿಸುವುದು ಅಶುಭ.

Daily Horoscope: ವೃಶ್ಚಿಕಕ್ಕೆ ಎದುರಾಗಲಿದೆ ಅವಮಾನದ ಪರಿಸ್ಥಿತಿ

ಮುರಿದ ಅಕ್ಷತೆ
ಗಣಪತಿಗೆ ಯಾವಾಗಲೂ ಸಂಪೂರ್ಣ ಮತ್ತು ಒದ್ದೆಯಾದ ಅನ್ನವನ್ನು ಅರ್ಪಿಸಿ. ಅಕ್ಷತೆ ಕೂಡಾ ಮುರಿದಿರಬಾರದು. ಅಕ್ಷತೆಯನ್ನು ಅರ್ಪಿಸುವಾಗ ಅದನ್ನು ಕೊಂಚ ಒದ್ದೆ ಮಾಡಬೇಕು.  ಏಕೆಂದರೆ ಗಣೇಶನ ಒಂದು ಹಲ್ಲು ಮುರಿದಿದೆ. ಆದ್ದರಿಂದ ಅವರಿಗೆ ಒದ್ದೆಯಾದ ಅಕ್ಕಿಯನ್ನು ತೆಗೆದುಕೊಳ್ಳುವುದು ಸುಲಭ.

ಒಣಗಿದ ಹೂವುಗಳು
ಗಣೇಶನ ಪೂಜೆಯಲ್ಲಿ ಒಣಗಿದ ಮತ್ತು ಹಳೆಯ ಹೂವುಗಳನ್ನು ಅರ್ಪಿಸಬೇಡಿ. ಒಣಗಿದ ಹೂವುಗಳನ್ನು ಬಳಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಬಡತನ ನೆಲೆಸುತ್ತದೆ. ಆದ್ದರಿಂದ, ಪೂಜೆಯ ಸಮಯದಲ್ಲಿ ಗಣೇಶನಿಗೆ ತಾಜಾ ಹೂವುಗಳನ್ನು ಅರ್ಪಿಸಿ.

ಗಣಪತಿಗೆ ಏನು ಅರ್ಪಿಸಬೇಕು?
ಗಣಪತಿಗೆ ದೂರ್ವೆಯನ್ನು ಅರ್ಪಿಸಬೇಕು. ಅಲ್ಲದೆ, ಹಸಿ ಅರಿಶಿನ, ಲಡ್ಡುಗಳು, ಮೋದಕಗಳು, ಹಳದಿ ಹೂವುಗಳು ಮತ್ತು ಬಟ್ಟೆಗಳನ್ನು ಅರ್ಪಿಸಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!