ಲೋಕಸಭಾ ಚುನಾವಣಾ ಮತ ಎಣಿಕೆ ಆರಂಭ| ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನ ಪತಿಯನ್ನು ನೆನೆದ ತೇಜಸ್ವಿನಿ ಅನಂತ್ ಕುಮಾರ್| ಬಿಜೆಪಿ ಹಾಗೂ ತೇಜಸ್ವಿ ಸೂರ್ಯಗೆ ಶುಭ ಕೋರಿದ ಅನಂತ್ ಕುಮಾರ್ ಪತ್ನಿ
ಬೆಂಗಳೂರು[ಮೇ.23]: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಮತದಾನ ಪ್ರಕ್ರಿಯೆ ಶುರುವಾಗಿದ್ದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಿರುವಾಗ ಈ ಕ್ಷೇತ್ರದ ಮಾಜಿ ಸಂಸದ, ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಟ್ವೀಟ್ ಒಂದನ್ನು ತಮ್ಮ ಪತಿಯನ್ನು ನೆನಪಿಸಿಕೊಂಡಿದ್ದಾರೆ ಹಾಗೂ ಇದೇ ಸಂದರ್ಭದಲ್ಲಿ ತೇಜಸ್ವಿ ಸೂರ್ಯಗೆ ಶುಭ ಕೋರಿದ್ದಾರೆ.
Bengaluru South will be going to BJP again. The constituency which opened the BJP account in South India by in 1991 and he held this constituency 6 times with hard work & clean hands since 1996 for .
All the best for
ಟ್ವೀಟ್ ಮಾಡಿರುವ ತೇಜಸ್ವಿನಿ ಅನಂತ್ ಕುಮಾರ್ 'ಬೆಂಗಳೂರು ದಕ್ಷಿಣದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸಲಿದೆ. 1991ರಲ್ಲಿ ಅನಂತ್ ಕುಮಾರ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ಖಾತೆ ತೆರೆದಿದ್ದರು. 1996ರಿಂದ ತಮ್ಮ ಕಠಿಣ ಪರಿಶ್ರಮ ಹಾಗೂ ಜನಸೇವೆಯಿಂದ ಅವರು ಸತತ ಆರು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದರು. ತೇಜಸ್ವಿ ಸೂರ್ಯ ಹಾಗೂ ಬಿಜೆಪಿಗೆ ನನ್ನ ಶುಭ ಹಾರೈಕೆಗಳು' ಎಂದಿದ್ದಾರೆ.
The trends for & are encouraging. That's very good ! ji will make our !
Bharat Mata Ji Jai !
ಆರಂಭಿಕ ಟ್ರೆಂಡ್ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ತೇಜಸ್ವಿನಿ 'ಆರಂಭಿಕ ಟ್ರೆಂಡ್ ಬಿಜೆಪಿಗೆ ಸಿಹಿ ಕೊಟ್ಟಿದೆ. ಇದು ತುಂಬಾ ಒಳ್ಳೆಯ ವಿಚಾರ' ಎಂದಿದ್ದಾರೆ.