ದಶಕದ ಬಳಿಕ ಒಂದಾದ ಸಿದ್ದು, ಜಿಟಿಡಿ!: ಮೈಸೂರಲ್ಲಿ ಹಳೇ ದೋಸ್ತಿಗಳ ಅಬ್ಬರ!

Published : Apr 15, 2019, 12:17 PM ISTUpdated : Apr 15, 2019, 12:18 PM IST
ದಶಕದ ಬಳಿಕ ಒಂದಾದ ಸಿದ್ದು, ಜಿಟಿಡಿ!: ಮೈಸೂರಲ್ಲಿ ಹಳೇ ದೋಸ್ತಿಗಳ ಅಬ್ಬರ!

ಸಾರಾಂಶ

ಮೈತ್ರಿ ಧರ್ಮ ಪರಿಪಾಲನೆಗೆ ದಶಕದಿಂದ ದೂರವಿದ್ದ ಹಳೇ ದೋಸ್ತಿಗಳು ಮತ್ತೆ ಒಂದಾಗಿದ್ದಾರೆ. ಈ ಮೂಲಕ ಮೈಸೂರು ಕೊಡಗು ಮೈತ್ರಿ ಅಭ್ಯರ್ಥಿ ಪರ ಒಟ್ಟಾಗಿ ಮತಯಾಚನೆ ಮಾಡಿದ್ದಾರೆ.

ಮೈಸೂರು[ಏ.15]: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಸ್ಪರ ಎದುರಾಳಿಗಳಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಿ.ಟಿ.ದೇವೇಗೌಡ ದಶಕಗಳ ನಂತರ ಒಂದಾಗಿ ಭಾನುವಾರ ಮೈತ್ರಿ ಅಭ್ಯರ್ಥಿ ವಿಜಯಶಂಕರ್‌ ಪರವಾಗಿ ಮತ ಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯ ಎಂಬುದು ಗಣಿತ ಅಲ್ಲ, ಅದೊಂದು ಕೆಮಿಸ್ಟ್ರಿ. 2 ಮತ್ತು 2 ಸೇರಿ 4 ಆಗಲ್ಲ. 2 ಪ್ಲಸ್‌ ಎಷ್ಟುಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾರೂ ಪರ್ಮನೆಂಟ್‌ ಸ್ನೇಹಿತರು ಇರೋಲ್ಲ, ಪರ್ಮನೆಂಟ್‌ ವೈರಿಗಳೂ ಇರಲ್ಲ ಎಂದರು.

ನಾನು ಜಿ.ಟಿ. ದೇವೇಗೌಡ ಒಟ್ಟಿಗೆ ಪ್ರಚಾರಕ್ಕೆ ಹೋಗದಿದ್ದರೆ ಗೊಂದಲ ಏರ್ಪಡುತ್ತದೆ. ಅದು ಹಾಗೆಯೇ ಉಳಿಯುತ್ತದೆ ಎಂಬ ಕಾರಣಕ್ಕೆ ಒಗ್ಗಟ್ಟಾಗಿ ಬಂದಿದ್ದೇವೆ. ನಾನು ಜಿ.ಟಿ.ದೇವೇಗೌಡಗೆ ಹೇಳಿದ್ದೆ. ನಾನು ಬರ್ತೀನಿ, ನೀನು ಬಾ ಎಂದಿದ್ದೆ. ನಾವಿಬ್ಬರೂ ಬೆಂಗಳೂರಿನಲ್ಲಿ ಸಭೆ ಮಾಡಿದ್ದೆವು ಎಂದು ಹೇಳಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!