ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಬೆಂಗಳೂರಿನ ವ್ಯಕ್ತಿ..!

By Web DeskFirst Published Apr 26, 2019, 3:57 PM IST
Highlights

ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ ಬೆಂಗಳೂರಿನ ಈ ವ್ಯಕ್ತಿ| ಅಭಿವೃದ್ಧಿ ಮಾಡಿಲ್ಲ, ಹೀಗಾಗಿ ಮೋದಿಯನ್ನು ಸೋಲಿಸಿಯೇ ಸಿದ್ದ ಎಂದು ಪಣತೊಟ್ಟಿದ್ದಾರೆ ಈ ವ್ಯಕ್ತಿ

ವಾರಾಣಸಿ[ಏ.26]: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಈ ಪಟ್ಟಿಗೆ ಬೆಂಗಳೂರಿನ ವ್ಯಕ್ತಿಯೊಬ್ಬರ ಹೆಸರು ಸೇರ್ಪಡೆಗೊಂಡಿದೆ. 

ಹೌದು, ಬೆಂಗಳೂರಿನ ಕೆಜಿ ಹಳ್ಳಿಯ ಗೋವಿಂದಪುರದ ನಿವಾಸಿ ಸುಹೈಲ್ ಸೇಠ್ ವಾರಾಣಸಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಮೋದಿಯನ್ನ ಸೋಲಿಸಲೇಬೇಕು ಎಂದು ಪಣತೊಟ್ಟಿದ್ದಾರೆ.

"

ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಸುಹೈಲ್ ಸೇಠ್  'ಮೋದಿ ಯಾವುದೇ ಕೆಲಸ ಮಾಡಿಲ್ಲ, ಮೋದಿ ಮಾಡದ ಕೆಲಸ ನಾನು ಮಾಡ್ತೀನಿ ಮೋದಿ ದುಡ್ಡು ಕೊಟ್ಟು ಜನರನ್ನು ಕರೆತಂದು ರೋಡ್ ಶೋ ಮಾಡಿದ್ದಾರೆ. ಮೋದಿಗೆ ವಾರಾಣಸಿಯಲ್ಲಿ ಜನರ ಬೆಂಬಲ ಇಲ್ಲ, ಮೋದಿ ಇಲ್ಲಿ ಯಾವುದೇ ಕಲಸ ಮಾಡಿಲ್ಲ ಮೋದಿ ವಿರುದ್ಧ ನಾನು ಗೆಲ್ಲುವುದು ಸತ್ಯ' ಎಂದಿದ್ದಾರೆ. 

click me!
Last Updated Apr 26, 2019, 5:57 PM IST
click me!