ನೀತಿ ಸಂಹಿತೆ ಪರಿಣಾಮ: ಚೌಕಿದಾರ್ ಚಹಾ ಕಪ್ ವಾಪಸ್!

Published : Mar 29, 2019, 02:27 PM IST
ನೀತಿ ಸಂಹಿತೆ ಪರಿಣಾಮ: ಚೌಕಿದಾರ್ ಚಹಾ ಕಪ್ ವಾಪಸ್!

ಸಾರಾಂಶ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ| #MainBhiChowkidar ಚಹಾ ಕಪ್‌ಗಳನ್ನು ವಾಪಸ್ಸು ಪಡೆದ ರೈಲ್ವೇ ಇಲಾಖೆ| #MainBhiChowkidar ಟಿಕೆಟ್ ಗಳನ್ನೂ ವಾಪಸ್ಸು ಪಡೆದಿರುವ ಇಲಾಖೆ| ತಾಬ್ದಿ ರೈಲುಗಳಲ್ಲಿ ಕೊಡಲಾಗುತ್ತಿದ್ದ #MainBhiChowkidar ಚಹಾ ಕಪ್‌ಗಳು| ಪ್ರಯಾಣಿಕರಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆ|

ನವದೆಹಲಿ(ಮಾ.29): ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಭಾರತೀಯ ರೈಲ್ವೇ ಇಲಾಖೆ #MainBhiChowkidar ಚಹಾ ಕಪ್‌ಗಳನ್ನು ವಾಪಸ್ಸು ಪಡೆದಿದೆ.

ಈ ಹಿಂದೆ #MainBhiChowkidar ಎಂದು ಮುದ್ರಣಗೊಂಡಿರುವ ಟಿಕೆಟ್ ಗಳನ್ನು ವಾಪಸ್ಸು ಪಡೆದಿದ್ದ ರೈಲ್ವೇ ಇಲಾಖೆ, ಇದೀಗ ಶತಾಬ್ದಿ ರೈಲುಗಳಲ್ಲಿ ಕೊಡಲಾಗುತ್ತಿದ್ದ #MainBhiChowkidar ಚಹಾ ಕಪ್‌ಗಳನ್ನು ವಾಪಸ್ಸು ಪಡೆದಿದೆ.

ಈ ಕುರಿತು ಖುದ್ದು ಪ್ರಯಾಣಿಕರೇ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಅದರಂತೆ #MainBhiChowkidar ಚಹಾ ಕಪ್‌ಗಳನ್ನು ವಾಪಸ್ಸು ಪಡೆದಿರುವ ರೈಲ್ವೇ ಇಲಾಖೆ, ಚುನಾವಣೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಭರವಸೆ ನೀಡಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!