ಬಿಎಸ್‌ವೈಗೆ ರಾಜ್ಯಾಧ್ಯಕ್ಷ ಸ್ಥಾನ ಹೋಗುತ್ತೆ : ಹಿರಿಯ ಮುಖಂಡ

By Web DeskFirst Published Apr 5, 2019, 9:44 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ  ರಾಜ್ಯ ರಾಜಕೀಯ ನಾಯಕರಲ್ಲಿ ಪರಸ್ಪರ ವಾಕ್ಸಮರಗಳು ಜೋರಾಗಿದೆ. ಇದೇ ವೇಳೆ ಕಾಮಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಲೋಕಸಭಾ ಚುನಾವಣೆ ಬಳಿಕ ಯಡಿಯೂರಪ್ಪ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. 

ದಾವ​ಣ​ಗೆರೆ: ಲೋಕ​ಸಭೆ ಚುನಾ​ವಣೆ ನಂತರ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಅವರಿಗೆ ಇರುವ ಬಿಜೆಪಿ ರಾಜ್ಯಾ​ಧ್ಯಕ್ಷ ಸ್ಥಾನ ಹೋಗ​ಲಿದ್ದು, ಮನೆಗೆ ಹೋಗು​ತ್ತಾನೆ ಎಂದು ಕಾಂಗ್ರೆ​ಸ್‌ನ ಹಿರಿಯ ನಾಯಕ, ಶಾಸಕ ಡಾ.ಶಾ​ಮ​ನೂರು ಶಿವ​ಶಂಕ​ರಪ್ಪ ಹೇಳಿದರು. 

ಈ ಮೂಲಕ ದಾವ​ಣ​ಗೆರೆ ಲೋಕ​ಸಭಾ ಕ್ಷೇತ್ರವನ್ನು ಈಗಾಗಲೇ ಗೆದ್ದಾ​ಗಿ​ದೆ ಎಂದು ಹೇಳಿಕೆ ನೀಡಿದ ಬಿಎ​ಸ್‌ವೈಗೆ ತಿರು​ಗೇಟು ನೀಡಿ​ದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಿ​ತಾಂಶ ಹೊರ ಬೀಳು​ತ್ತಿ​ದ್ದಂತೆಯೇ ಯಡಿ​ಯೂ​ರಪ್ಪಗೆ ಇರುವ ಸ್ಥಾನವೂ ಹೋಗಲಿದೆ. 

ಹೀಗಾಗಿ ಅವರ ಮುಂದಿನ ಜೀವನ ಹೇಗಿರುತ್ತೆ ಅನ್ನುವುದನ್ನು ನೋಡೋಣ. ದಾವ​ಣ​ಗೆರೆ ಕ್ಷೇತ್ರ​ಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾವು ಸಾಮಾನ್ಯ ವ್ಯಕ್ತಿ​ಯನ್ನು ನಿಲ್ಲಿ​ಸಿ​ದ್ದೇವೆ. ನಮ್ಮ ಅಭ್ಯರ್ಥಿಯ ಗೆಲುವು ಖಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

click me!