ವೋಟ್ ಕೇಳೋಕೆ ಹೋಗಿದ್ದ ಸಿ.ಟಿ.ರವಿಗೆ ಗ್ರಾಮಸ್ಥರಿಂದ ಸಖತ್ ಕ್ಲಾಸ್

Published : Apr 17, 2019, 10:20 PM IST
ವೋಟ್ ಕೇಳೋಕೆ ಹೋಗಿದ್ದ ಸಿ.ಟಿ.ರವಿಗೆ ಗ್ರಾಮಸ್ಥರಿಂದ ಸಖತ್ ಕ್ಲಾಸ್

ಸಾರಾಂಶ

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಶಾಸಕ ಸಿ. ಟಿ. ರವಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ| ಚಿಕ್ಕಮಗಳೂರು ಜಿಲ್ಲೆ ದೇವನೂರಿನಲ್ಲಿ ಸಿ.ಟಿ.ರವಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಚಿಕ್ಕಮಗಳೂರು, [ಏ.17]: ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ಹೋಗಿದ್ದ ಶಾಸಕ ಸಿ.ಟಿ.ರವಿಗೆ ಚಿಕ್ಕಮಗಳೂರು ತಾಲೂಕಿನ ದೇವನೂರಿನ ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ. 

ಇಂದು [ಬುಧವಾರ] ಉಡುಪಿ_ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರಕ್ಕೆ ಹೋಗಿದ್ದ ಸಿ.ಟಿ.ರವಿ ಅವರನ್ನು ಕುಡಿಯುವ ನೀರು, ರಸ್ತೆ ಮೂಲಭೂತ ಸೌಲಭ್ಯ ನೀಡುವಂತೆ ಗ್ರಾಮಸ್ಥರು ತರಾಟೆ ತೆಗೆದುಕೊಂಡರು.

ಸಖತ್ ಕ್ಲಾಸ್ ತೆಗೆದುಕೊಂಡ ಮೇಲೂ ಸಿ.ಟಿ.ರವಿ, ಇದು ದೇಶದ ಚುನಾವಣೆ ಮೋದಿಗೆ ಮತ ಹಾಕಿ ಎಂದರು. ಸ್ಥಳಿಯರು ನೀವು ಹೇಳಿದ್ರು ಮೋದಿಗೆ ವೋಟ್ ಹಾಕ್ತೀವಿ, ಹೇಳದಿದ್ದರೂ ವೋಟ್ ಹಾಕ್ತೀವಿ. ಮೊದಲು ನಮಗೆ ನೀರು ಕೊಡಿ ಎಂದು ಆಗ್ರಹಿಸಿದರು. ಗ್ರಾಮಸ್ಥರು ತರಾಟೆ ತಗೆದುಕೊಳ್ಳುತ್ತಿದ್ದಂತೆ ಸಿ. ಟಿ. ರವಿ. ಸ್ಥಳದಿಂದ ಕಾಲ್ಕಿತ್ತಿದ್ದಾರೆ. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!