ಅಕ್ಟರ್ ಕ್ರೂರಿ, ಬಾಬರ್ ನಿರ್ದಯಿ: 8ನೇ ತರಗತಿಗೆ ನೂತನ ಪಠ್ಯ ಪುಸ್ತಕ ಬಿಡುಗಡೆ

Published : Jul 17, 2025, 07:27 AM ISTUpdated : Jul 17, 2025, 10:12 AM IST
Akbar Jodha in history

ಸಾರಾಂಶ

ಎನ್‌ಸಿಇರ್‌ಟಿ ಬಿಡುಗಡೆ ಮಾಡಿರುವ 8ನೇ ತರಗತಿ ಹೊಸ ಪಠ್ಯಪುಸ್ತಕದಲ್ಲಿ (ಕೇಂದ್ರೀಯ ಪಠ್ಯ) ದೆಹಲಿ ಸುಲ್ತಾನರು, ಮೊಘಲರು, ಮರಾಠರು, ವಿಜಯನಗರ ಸಾಮ್ರಾಜ್ಯ ಹಾಗೂ ವಸಾಹತುಶಾಹಿ ಆಡಳಿತದ ಕುರಿತು ಪಾಠಗಳನ್ನು ಸೇರ್ಪಡೆಗೊಳಿಸಲಾಗಿದೆ.

ನವದೆಹಲಿ: ಎನ್‌ಸಿಇರ್‌ಟಿ ಬಿಡುಗಡೆ ಮಾಡಿರುವ 8ನೇ ತರಗತಿ ಹೊಸ ಪಠ್ಯಪುಸ್ತಕದಲ್ಲಿ (ಕೇಂದ್ರೀಯ ಪಠ್ಯ) ದೆಹಲಿ ಸುಲ್ತಾನರು, ಮೊಘಲರು, ಮರಾಠರು, ವಿಜಯನಗರ ಸಾಮ್ರಾಜ್ಯ ಹಾಗೂ ವಸಾಹತುಶಾಹಿ ಆಡಳಿತದ ಕುರಿತು ಪಾಠಗಳನ್ನು ಸೇರ್ಪಡೆಗೊಳಿಸಲಾಗಿದೆ.

ಮೊಗಲ್ ದೊರೆ ಅಕ್ಬರನ ಆಡಳಿತ ಕ್ರೂರತೆ ಹಾಗೂ ಸಹಿಷ್ಣುತೆಯ ಮಿಶ್ರಣವಾಗಿತ್ತು. ಬಾಬರ್‌ನಿರ್ದಯ ಆಡಳಿತಗಾರನಾಗಿದ್ದ. ಔರಂಗಜೇಬ್ ಮಿಲಿಟರಿ ಆಡಳಿತಗಾರನಾಗಿದ್ದು, ಮುಸ್ಲಿಮೇತರರ ಮೇಲೆ ಮರುತೆರಿಗೆ ಜಾರಿಗೆ ತಂದಿದ್ದ ಎಂದು ತಿಳಿಸಲಾಗಿದೆ.

'ಇತಿಹಾಸದ ಕೆಲವು ಕರಾಳ ಅವಧಿಗಳ ಟಿಪ್ಪಣಿ' ಎಂಬ ಅಧ್ಯಾಯದಲ್ಲಿ ಕೆಲವು ಕ್ರೂರ ಆಡಳಿತಗಾರರು ನಡೆಸಿದ ಹತ್ಯಾಕಾಂಡ, ಅಧಿಕಾರ ದುರ್ಬಳಕೆಯನ್ನು ವಿವರಿಸಲಾಗಿದೆ. 13ರಿಂದ 17ನೇ ಶತಮಾನದವರೆಗಿನ ಭಾರತೀಯ ಇತಿಹಾಸವನ್ನು ಒಳಗೊಂಡ 'ಭಾರತದ ರಾಜಕೀಯ ನಕ್ಷೆಯ ಪುನಾರಚನೆ' ಎಂಬ ಅಧ್ಯಾಯದಲ್ಲಿ ದೆಹಲಿ ಸುಲ್ತಾನರು, ವಿಜಯನಗರ ಸಾಮ್ರಾಜ್ಯ, ಮೊಘಲರು ಮತ್ತು ಸಿಬ್ಬರ ಉದಯ ಹಾಗೂ ಪತನದ ಕುರಿತು ತಿಳಿಸಿಕೊಡಲಾಗಿದೆ.

'ಅಕ್ಬರನ ಆಡಳಿತ ಕ್ರೂರತೆ ಹಾಗೂ ಸಹಿಷ್ಣುತೆಯ ಮಿಶ್ರಣವಾಗಿತ್ತು. ಆತನ ಆಡಳಿತದ ಉನ್ನತ ಹುದ್ದೆಗಳಲ್ಲಿ ಮುಸ್ಲಿಮೇತರರನ್ನು ಅಲ್ಪಸಂಖ್ಯಾತರ ನಾಗಿ ಇರಿಸಲಾಗಿತ್ತು. ಚಿತ್ತೋರ್‌ಗಢ ಮುತ್ತಿಗೆಯ ಬಳಕ ಅಕ್ಬರ್ 30,000 ನಾಗರಿಕರ ಹತ್ಯಾಕಾಂಡಕ್ಕೆ ಆದೇಶಿಸಿದ. ಬಾಬರ್ ಅಸಂಖ್ಯ ನಾಗರಿಕರನ್ನು ಹತ್ಯೆ ಗೈದ ಕ್ರೂರ ಮತ್ತು ನಿರ್ದಯಿ ಆಡಳಿತಗಾರನಾಗಿದ್ದ. ಔರಂಗಜೇಬ ದೇವಾಲಯ ನಾಶಪಡಿಸಿದ್ದ' ಎಂದು ಪಠ್ಯದಲ್ಲಿ ವಿವರಿಸಲಾಗಿದೆ.

ಶಿವಾಜಿ ಗುಣಗಾನ:

ಶಿವಾಜಿ 'ಚತುರ ತಂತ್ರಗಾರ' ರಾಗಿದ್ದರು. ಪರಧರ್ಮ ಸಹಿಷ್ಣುವಾಗಿದ್ದು, ಹಿಂದೂ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿದಿದ್ದರು ಎಂದು ವರ್ಣಿಸಲಾಗಿದೆ. ಅಕ್ಬರನ ವಿರುದ್ಧ ಹೋರಾಡಿದ ರಾಣಿ ದುರ್ಗಾವತಿ, ಮೇವಾರದ ರಾಜ ಮಹಾ ರಾಣಾ ಪ್ರತಾಪ್, ಔರಂಗಜೇಬನಿಗೆ ಪ್ರತಿರೋಧ ಒಡ್ಡಿದ ಅಹೋಮರ ಬಗ್ಗೆಯೂ ವಿವರಿಸಲಾಗಿದೆ.

ಕೇಂದ್ರೀಯ ಪಠ್ಯದಲ್ಲಿ ಅಣು ಸಂಶೋಧಕ ಆಚಾರ್ಯ ಕಣಾದ, 2ನೇ ಭಾಸ್ಕರನ ಬಗ್ಗೆ ಪಾಠ

ನವದೆಹಲಿ: ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತೀಯ ಜ್ಞಾನದ ಜೊತೆಗೆ ಸಮಕಾಲೀನ ವಿಜ್ಞಾನವನ್ನೂ ಕಲಿಸುವ ಉದ್ದೇಶದಿಂದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇ ಆರ್‌ಟಿ) 8ನೇ ತರಗತಿ ಪಠ್ಯ ಪುಸ್ತಕದಲ್ಲಿ ಹೊಸ ಪಾಠಗಳನ್ನು ಅಳವಡಿಸಿದೆ. ಪರಮಾಣು ಕಲ್ಪನೆಯ ಪ್ರವರ್ತಕ ಆಚಾರ್ಯ ಕಣಾದ, ಪ್ರಾಚೀನ ವೈದ್ಯಪದ್ಧತಿ, ಪ್ರಾಚೀನ ಕಾಲದ ಬಾಹ್ಯಾಕಾಶ ಸಂಶೋಧನೆ ಮೊದಲಾದ ವಿಷಯಗಳ ಜೊತೆಗೆ ಆಧುನಿಕ ಕಾಲದ ಇಸ್ರೋ, ಕೋವಿಡ್-19, ಅಣುವಿಜ್ಞಾನಗಳ ಕುರಿತ ಪಾಠಗಳನ್ನು ಸೇರ್ಪಡೆಗೊಳಿಸಲಾಗಿದೆ.

ಆಧುನಿಕ ಲಸಿಕೆಗಳು ಬರುವುದಕ್ಕೂ ಪೂರ್ವದಲ್ಲಿ, ಭಾರತವು ಸಿಡುಬಿನಿಂದ ರಕ್ಷಿಸಲು ವೇರಿಯೊಲೇಷನ್ ಎಂಬ ಸಾಂಪ್ರದಾಯಿಕ ವಿಧಾನವನ್ನು ಹೊಂದಿತು ಎಂದು ತಿಳಿಸಲಾಗಿದೆ. 'ಕಣಗಳ ನಿಜವಾದ ಗುಣಧರ್ಮ' ಅಧ್ಯಾಯದಲ್ಲಿ, ಪರಮಾಣು ಕಲ್ಪನೆಯ ಬಗ್ಗೆ ಮೊದಲಿಗೆ ತಿಳಿಸಿದ ಪ್ರಾಚೀನ ಭಾರತೀಯ ತತ್ವಜ್ಞಾನಿ ಆಚಾರ್ಯ ಕಣಾದರ ಕುರಿತು ಉಲ್ಲೇಖಿಸಲಾಗಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ