ಸ್ವಲ್ಪ ತಾಳ್ಮೆಯಿಂದಿರಿ, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ರಾಯಭಾರಿ ಕಚೇರಿ ಮನವಿ

By Suvarna NewsFirst Published Mar 6, 2022, 9:17 PM IST
Highlights

ಯುದ್ಧಪೀಡಿತ ಪೂರ್ವ ಉಕ್ರೇನಿಯನ್ ನಗರವಾದ ಸುಮಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ.

ನವದೆಹಲಿ: ಯುದ್ಧಪೀಡಿತ ಪೂರ್ವ ಉಕ್ರೇನಿಯನ್ ನಗರವಾದ ಸುಮಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ಉಕ್ರೇನ್‌ನ (Ukraine) ಭಾರತೀಯ ರಾಯಭಾರಿ ಪಾರ್ಥ ಸತ್ಪತಿ (Partha Satpathy) ಹೇಳಿದ್ದಾರೆ. ಸುಮಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳು (Indian student) ರಷ್ಯಾದ ಗಡಿಗೆ ತೆರಳಲು ನಿರ್ಧರಿಸಿದ್ದಾರೆ ಮತ್ತು ಅವರಿಗೆ ಏನಾದರೂ ಸಂಭವಿಸಿದರೆ ಭಾರತ ಸರ್ಕಾರ ಮತ್ತು ಉಕ್ರೇನ್‌ನಲ್ಲಿರುವ ರಾಯಭಾರ ಕಚೇರಿ ಹೊಣೆ ಎಂದು ಹೇಳುವ ವೀಡಿಯೊಗಳನ್ನು ಪೋಸ್ಟ್ ಮಾಡಿದ ಗಂಟೆಗಳ ನಂತರ ಬಂದ ಸಂದೇಶದಲ್ಲಿ ಸತ್ಪತಿ ಈ ಹೇಳಿಕೆಯನ್ನು ನೀಡಿದ್ದಾರೆ.

ರಾಯಭಾರ ಕಚೇರಿಯ (embassy) ಭರವಸೆಯ ನಂತರ ಪೂರ್ವ ಉಕ್ರೇನಿಯನ್ ನಲ್ಲಿರುವ ವಿದ್ಯಾರ್ಥಿಗಳು ಅಲ್ಲಿಯೇ ತಂಗಿದ್ದಾರೆ, ಕಳೆದ ಎರಡು ವಾರಗಳು ನಮಗೆಲ್ಲರಿಗೂ ಅತ್ಯಂತ ದುಃಖಕರ ಮತ್ತು ಸವಾಲಿನದ್ದಾಗಿತ್ತು. ನಮ್ಮ ಜೀವನದಲ್ಲಿ ಇಂತಹ ನೋವು ಮತ್ತು ಅಡೆತಡೆಗಳನ್ನು ಯಾರೂ ನೋಡಿರಲಿಲ್ಲ ಎಂದು ಸತ್ಪತಿ ಹೇಳಿದರು.

Latest Videos

ಅದೇನೇ ಇದ್ದರೂ, ಈ ಕಷ್ಟದ ಸಮಯದಲ್ಲಿ ಧೈರ್ಯಶಾಲಿಯಾಗಿರಲು ನಮ್ಮ ಭಾರತೀಯ ಪ್ರಜೆಗಳು, ವಿಶೇಷವಾಗಿ ಯುವ ಭಾರತೀಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಪ್ರಬುದ್ಧತೆ ಮತ್ತು ಸ್ಥೈರ್ಯದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಮೊದಲು ವಿದ್ಯಾರ್ಥಿಗಳ ಸ್ಥಳಾಂತರ ಬಳಿಕವೇ ಶಿಕ್ಷಣಕ್ಕೆ ನೆರವು: ಸಚಿವ ಅಶ್ವತ್ಥ್ ನಾರಾಯಣ್

“ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರವನ್ನು ಖಚಿತಪಡಿಸಿಕೊಳ್ಳಲು ನಮ್ಮ ರಾಯಭಾರ ಕಚೇರಿಯು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಈ ಸಮಯದಲ್ಲಿ ನಮ್ಮ ವಿದ್ಯಾರ್ಥಿಗಳು ಬಹಳಷ್ಟು ಅನುಭವಿಸಿದ್ದಾರೆ ಮತ್ತು ಸಾಟಿಯಿಲ್ಲದ ಶಕ್ತಿ ಮತ್ತು ನಿರ್ಣಯವನ್ನು ತೋರಿಸಿದ್ದಾರೆ ಎಂದು ನನಗೆ ತಿಳಿದಿದೆ ಎಂದು ಟ್ವೀಟ್ ಮಾಡಿದ್ದಾರೆ. ನಿಮ್ಮ ಸುರಕ್ಷತೆಯೇ ನಮಗೆ ಪ್ರಮುಖವಾದದ್ದು, ಹೀಗಾಗಿ ಸ್ವಲ್ಪ ಸಹನೆ
ಮತ್ತು ತಾಳ್ಮೆಯಿಂದಿರಬೇಕೆಂದು ಮನವಿ ಮಾಡಿದ್ದಾರೆ.

ನಮಗೆ ಏನಾದರೂ ಆದರೆ ಅದಕ್ಕೆ ಮೋದಿ ಸರ್ಕಾರವೇ ಕಾರಣ: ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಸುಮಿ ಸ್ಟೇಟ್ ಯೂನಿವರ್ಸಿಟಿಯ ಭಾರತೀಯ ವಿದ್ಯಾರ್ಥಿಗಳು ಶನಿವಾರ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಅಲ್ಲಿ ತಮಗೆ ಏನಾದರೂ ಆದರೆ ಅದಕ್ಕೆ ಭಾರತ ಸರ್ಕಾರ ಮತ್ತು ಅಧಿಕಾರಿಗಳನ್ನು ದೂಷಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ ತಾವಾಗಿಯೇ ಗಡಿಯತ್ತ ಸಾಗುವುದಾಗಿ ತಿಳಿಸಿದ್ದರು. ಆದರೆ ಪ್ರಧಾನಿ ಕಚೇರಿಯ ಕರೆಯ ನಂತರ ವಿದ್ಯಾರ್ಥಿಗಳು ಗಡಿಯತ್ತ ತೆರಳುವ ನಿರ್ಧಾರ ಕೈಬಿಟ್ಟಿದ್ದಾರೆ.

ತಾವು ಇರುವ ಸ್ಥಳದಿಂದ ನಿರ್ಗಮಿಸುವುದಾಗಿ ಘೋಷಿಸಿದ ವಿದ್ಯಾರ್ಥಿಗಳು,  ತಮಗೆ ಏನಾದರೂ ತೊಂದರೆಯಾದರೆ ಅದಕ್ಕೆ ಭಾರತ ಸರ್ಕಾರವೇ ಹೊಣೆ ಎಂದು ವೀಡಿಯೊದಲ್ಲಿ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆಯಾದರೆ ಮಿಷನ್ ಗಂಗಾ ಅತ್ಯಂತ ದೊಡ್ಡ ವೈಫಲ್ಯ ಎಂದು ವಿದ್ಯಾರ್ಥಿಯೊಬ್ಬರು ಎಚ್ಚರಿಸಿದ್ದಾರೆ.

ಶಿಕ್ಷಕನ ಶಿಕ್ಷೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಲೇರಿದ ತೆಲಂಗಾಣದ 2 ನೇ ತರಗತಿಯ ಬಾಲಕ!

“ನಾವು ಸುಮಿ ಸ್ಟೇಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು. ಇದು ಯುದ್ಧದ 10ನೇ ದಿನವಾಗಿದೆ ಮತ್ತು ಇಂದು ರಷ್ಯಾ ಎರಡು ನಗರಗಳಿಗೆ ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ಕದನ ವಿರಾಮವನ್ನು ಘೋಷಿಸಿದೆ. ಅವುಗಳಲ್ಲಿ ಮತ್ತೊಂದು ಸುಮಿಯಿಂದ 600 ಕಿಮೀ ದೂರದಲ್ಲಿರುವ ಮರಿಯುಪೋಲ್. ಬೆಳಗ್ಗೆಯಿಂದ ನಾವು ನಿರಂತರವಾಗಿ ಬಾಂಬ್ ದಾಳಿ, ಶೆಲ್ ದಾಳಿಗಳನ್ನು ನೋಡುತ್ತಿದ್ದೇವೆ. ಇದರಿಂದ ನಾವು ಆತಂಕಗೊಂಡಿದ್ದೇವೆ ಎಂದಿದ್ದಾರೆ.

ನಾವು ಸಾಕಷ್ಟು ಕಾಯುತ್ತಿದ್ದೇವೆ. ಆದರೆ ನಾವು ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ. ಪ್ರಾಣವನ್ನೇ ಪಣಕ್ಕಿಟ್ಟು ಗಡಿಯತ್ತ ಸಾಗುತ್ತಿದ್ದೇವೆ. ನಮಗೆ ಏನಾದರೂ ಆದರೆ ಅದಕ್ಕೆ ಭಾರತ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿ ಹೊಣೆಯಾಗುತ್ತದೆ. ನಮ್ಮಲ್ಲಿ ಯಾರಿಗಾದರೂ ಏನಾದರೂ ತೊಂದರೆಯಾದರೆ ಮಿಷನ್ ಗಂಗಾ ಅತ್ಯಂತ ದೊಡ್ಡ ವೈಫಲ್ಯವಾಗುತ್ತದೆ ಎಂದು ಭಾರತೀಯ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಇದು ಸುಮಿ ಸ್ಟೇಟ್ ಯೂನಿವರ್ಸಿಟಿ ವಿದ್ಯಾರ್ಥಿಗಳ ಕೊನೆಯ ವೀಡಿಯೊವಾಗಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ ಮತ್ತು ನಾವು ರಷ್ಯಾ ತೆರೆದ ಗಡಿಯತ್ತ ಹೋಗುತ್ತಿದ್ದೇವೆ ಎಂದು ಇನ್ನೊಬ್ಬ ವಿದ್ಯಾರ್ಥಿ ಹೇಳಿದ್ದಾರೆ. ಆದರೆ, ಪ್ರಧಾನಿ ಕಚೇರಿಯಿಂದ ಕರೆ ಬಂದ ನಂತರ ವಿದ್ಯಾರ್ಥಿಗಳು ಇನ್ನೂ ಎರಡು ದಿನ ಕಾಯಲು ನಿರ್ಧರಿಸಿದ್ದಾರೆ.

click me!