ಶಿಕ್ಷಕರನ್ನು ಬಲಿಪಡೆಯುತ್ತಿರುವ ಕೊರೋನಾ: ಬೆಚ್ಚಿ ಬೀಳಿಸುತ್ತಿದೆ ಜಿಲ್ಲಾವಾರು ಈ ಅಂಕಿ- ಅಂಶಗಳು

By Suvarna NewsFirst Published Oct 9, 2020, 6:16 PM IST
Highlights

ಶಾಲೆ ಪುನಾರಂಭದ ಬಗ್ಗೆ ಚರ್ಚೆ ಎಷ್ಟು ತೀವ್ರವಾಗಿ ನಡೆಯುತ್ತಿದೆಯೋ, ವಿದ್ಯಾಗಮ ಶಾಲೆಯ ಬಗ್ಗೆಯೂ ಅಷ್ಟೇ ಚರ್ಚೆಯಾಗುತ್ತಿದೆ. ಶಿಕ್ಷಕರೂ ಕೂಡಾ ಕೋವಿಡ್‌ಗೆ ಸೋಂಕಿಗೆ ಬಲಿಯಾಗುತ್ತಿದ್ದಾರೆ. 

ಬೆಂಗಳೂರು (ಅ. 09): ಶಾಲೆ ಪುನಾರಂಭದ ಬಗ್ಗೆ ಚರ್ಚೆ ಎಷ್ಟು ತೀವ್ರವಾಗಿ ನಡೆಯುತ್ತಿದೆಯೋ, ವಿದ್ಯಾಗಮ ಶಾಲೆಯ ಬಗ್ಗೆಯೂ ಅಷ್ಟೇ ಚರ್ಚೆಯಾಗುತ್ತಿದೆ. ಶಿಕ್ಷಕರೂ ಕೂಡಾ ಕೋವಿಡ್‌ಗೆ ಸೋಂಕಿಗೆ ಬಲಿಯಾಗುತ್ತಿದ್ದಾರೆ. ನಿನ್ನೆ ಕಲಬುರ್ಗಿಯ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, 4 ಮಕ್ಕಳಿಗೂ ಹರಡಿದೆ. 

ವಿದ್ಯಾಗಮ ಶಾಲೆ ಆರಂಭವಾದಾಗಿನಿಂದ ಶಿಕ್ಷಕರು ಬಹಳ ಸಮಸ್ಯೆ ಎದುರಾಗುತ್ತಿದೆ. ಬೆಳಗಾವಿಯಲ್ಲಿ 50 ಕ್ಕೂ ಹೆಚ್ಚು ಶಿಕ್ಷಕರು ಸಾವನ್ನಪ್ಪಿದ್ದರೆ ಕೊಪ್ಪಳದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾಗಮ ಶಾಲೆ ಮುಚ್ಚಿಸಬೇಕು ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಜಿಲ್ಲಾವಾರು ವರದಿ ನೋಡೋಣ ಬನ್ನಿ..!

click me!