ಧಾರವಾಡ: ಅಮಾವಾಸ್ಯೆ ದಿನ ಸ್ಮಶಾನದಲ್ಲಿ ವ್ಯಕ್ತಿ ನಿಗೂಢ ಸಾವು

Published : Apr 05, 2019, 10:25 PM ISTUpdated : Apr 05, 2019, 10:47 PM IST
ಧಾರವಾಡ: ಅಮಾವಾಸ್ಯೆ ದಿನ ಸ್ಮಶಾನದಲ್ಲಿ ವ್ಯಕ್ತಿ ನಿಗೂಢ ಸಾವು

ಸಾರಾಂಶ

ಸ್ಮಶಾನದಲ್ಲಿ ಹೃದಯಾಘಾತದಿಂದ ನಮಃ ಶಿವಾಯ ಎಂಬ ವ್ಯಕ್ತಿ ಸಾವು- ಧಾರವಾಡದ ಹೊಸ ಯಲ್ಲಾಪುರ ಬಡಾವಣೆಯಲ್ಲಿರೋ ಸ್ಮಶಾನದಲ್ಲಿ ಘಟನೆ| ವಾಮಾಚಾರ ಮಾಡಲು ಬಂದು ಸಾವನ್ನಪ್ಪಿರುವ ಶಂಕೆ |

ಧಾರವಾಡ, [ಏ.05]:  ಹೃದಯಾಘಾತದಿಂದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಧಾರವಾಡದ ಹೊಸ ಯಲ್ಲಾಪುರ ಬಡಾವಣೆಯ ಸ್ಮಶಾನದಲ್ಲಿ ನಡೆದಿದೆ.

ನಮಃ ಶಿವಾಯ ಸಾವನ್ನಪ್ಪಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಇಂದು[ಶುಕ್ರವಾರ] ಅಮವಾಸ್ಯೆ ಇರುವ ಕಾರಣ  ಒಂದು ದಿನ ಮುಂಚೆ ಅಂದ್ರೆ ನಿನ್ನೆ ಗುರುವಾರ ರಾತ್ರಿ ವಾಮಾಚಾರ ಮಾಡಲು ಸ್ಮಶಾನಕ್ಕೆ ತೆರಳಿದ್ದು, ಈ ವೇಳೆ ಕಾರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.
 
ಕಾರಿನಲ್ಲಿ ಕುಂಕುಮ ಲೇಪಿತ ತೆಂಗಿನಕಾಯಿ, ಕಪ್ಪು ಬಟ್ಟೆಯ ಗೊಂಬೆಗಳು ಪತ್ತೆ ಸೇರಿದಂತೆ ಹಲವು ಪೂಜಾ ಸಾಮಗ್ರಿ ಪತ್ತೆಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿಅಮವಾಸ್ಯೆ ಇರುವ ಕಾರಣ ವಾಮಾಚಾರಕ್ಕೆ ಬಂದಿದ್ದ ಎನ್ನಲಾಗಿದೆ. 

ವಿಷಯ ತಿಳಿದು ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

PREV
click me!

Recommended Stories

ಧಾರವಾಡ ಯುವ ಕಾಂಗ್ರೆಸ್‌ ನಾಯಕನ ಬರ್ಬರ ಹ*ತ್ಯೆ, ತನ್ನ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾತ ರಾಜಕೀಯ ದ್ವೇಷಕ್ಕೆ ಬಲಿ?
ಕೂಲಿ ಕಾರ್ಮಿಕಳ ಮಗಳಿಗೆ 512 ಅಂಕ! 7 ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡ ತಂದೆ