Daily Horoscope: ಈ ರಾಶಿಯವರು ಕೈಗೊಂಡ ಕಾರ್ಯಗಳಿಗೆ ಕೋಪದಿಂದ ವಿಘ್ನ

By Suvarna NewsFirst Published Dec 16, 2021, 5:10 AM IST
Highlights

16 ಡಿಸೆಂಬರ್ 2021, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಕರ, ಕುಂಭ ರಾಶಿಯವರಿಗೆ ಕಾಡಲಿದೆ ಕ್ಲೇಶ, ಚಿಂತೆ

ಮೇಷ(Aries): ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ. ನೀವು ಪರರಿಗೆ ಮಾಡಿರುವ ವಂಚನೆ ಬಯಲಿಗೆ ಬರುವ ಸಾಧ್ಯತೆ. ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳದಿದ್ದಲ್ಲಿ ಮತ್ತಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾದೀತು. ರಾಯರ ಸ್ಮರಣೆ ಮಾಡಿ. 

ವೃಷಭ(Taurus): ಹೊಸ ಹೂಡಿಕೆ ಸಧ್ಯ ಫಲಕಾರಿಯಾಗದು. ದುಡುಕು ವರ್ತನೆಯಿಂದ ಧನನಷ್ಟ. ಸ್ಥಿರಾಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ. ಕುಟುಂಬ ಜೀವನದಲ್ಲಿ ಸುಖ, ಶಾಂತಿ ಇರುತ್ತದೆ. ಸಂಗಾತಿಯ ಸಲಹೆ ಪಡೆಯದೆ ಯಾವೊಂದು ನಿರ್ಧಾರಗಳನ್ನೂ ತೆಗೆದುಕೊಳ್ಳಬೇಡಿ. ಕೃಷ್ಣನಿಗೆ ತುಳಸಿ ಅರ್ಪಿಸಿ. 

Latest Videos

ಮಿಥುನ(Gemini): ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಕಾರ್ಯಗಳಲ್ಲಿ ತೊಡಗುವಿರಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಸಾಧ್ಯತೆ ಇದೆ. ಸ್ನೇಹಿತರು, ನೆಂಟರಿಷ್ಟರ ಭೇಟಿಯಿಂದ ಮನೋಲ್ಲಾಸ. ಗುರು ರಾಘವೇಂದ್ರರ ಭಜನೆ ಮಾಡಿ. 

ಕಟಕ(Cancer): ಕೆಲಸ ಕಾರ್ಯಗಳಲ್ಲಿ ಉದಾಸೀನ ಧೋರಣೆ ಕಂಡುಬರುವುದು. ಸ್ನೇಹಿತರೊಂದಿಗೆ ಹೊರಗೆ ಸುತ್ತಾಡುವ ಅವಕಾಶವಿದೆ. ಕೋಪವನ್ನು ನಿಯಂತ್ರಿಸಿಕೊಂಡರಷ್ಟೇ ಮನಸ್ಸಿಗೆ ನೆಮ್ಮದಿ. ಆರೋಗ್ಯ ಸಮಸ್ಯೆಗಳು ಕಿರಿಕಿರಿ ತಂದಾವು. ಗಣಪತಿಗೆ ಕಡಲೆ ಅರ್ಪಿಸಿ. 

Shani Dev: ಮಹಿಳೆಯರು ಶನಿ ದೇವರನ್ನು ಪೂಜಿಸಬಹುದೇ?

ಸಿಂಹ(Leo): ತೆಗೆದುಕೊಂಡ ಸಣ್ಣಪುಟ್ಟ ಸಾಲವನ್ನು ಇಂದೇ ತೀರಿಸಿ. ನಂತರವಷ್ಟೇ ಕಾರ್ಯಗಳಲ್ಲಿ ಧನಲಾಭ ಮಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು. ಹೊಸತನ್ನು ಕಲಿಯುವ ಅವಕಾಶದಿಂದ ನವಚೈತನ್ಯ. ರಾಘವೇಂದ್ರ ಸ್ವಾಮಿಯ ಸ್ಮರಣೆ ಮಾಡಿ.

ಕನ್ಯಾ(Virgo): ಒಳ್ಳೆಯ ಸುದ್ದಿ ಕೇಳುವುದರಿಂದ ದಿನ ಪ್ರಾರಂಭವಾಗುವುದು. ಹೀಗಾಗಿ ದಿನವಿಡೀ ಖುಷಿಯಾಗಿರುವಿರಿ. ಪಾಲುದಾರಿಕೆ ಕೆಲಸಗಳಲ್ಲಿ ಯಶಸ್ಸು. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಷೇರು  ಮಾರುಕಟ್ಟೆ ವ್ಯವಹಾರದಲ್ಲಿ ಲಾಭದಾಯಕ ಆದಾಯವಿದ್ದರೂ ದುಡುಕದೇ ಮುಂದುವರಿಯಿರಿ. ವಿಷ್ಣು ಸಹಸ್ರನಾಮ ಪಠಿಸಿ. 

ತುಲಾ(Libra): ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಶುಭಸುದ್ದಿ ಇಂದು ಕೇಳಿಬರಲಿದೆ. ಗುರುಹಿರಿಯರಿಗೆ ಗೌರವ ತೋರಿ ಆಶೀರ್ವಾದ ಬಲ ಪಡೆದುಕೊಂಡರೆ ನಿರುದ್ಯೋಗಿಗಳಿಗೆ ಅಡ್ಡಿ ನಿವಾರಣೆಯಾಗಿ ಅವಕಾಶ ಒದಗುವುದು. ಅಮ್ಮನವರಿಗೆ ಅರ್ಚನೆ ಮಾಡಿಸಿ.

Morning Routine: ಬೆಳಗ್ಗೆದ್ದ ಕೂಡ್ಲೇ ಇದ್ಯಾವ್ದನ್ನೂ ನೋಡ್ಬೇಡಿ, ದುರದೃಷ್ಟ ಬೆನ್ನು ಹತ್ತಬಹುದು

ವೃಶ್ಚಿಕ(Scorpio): ಇಂದು ನಿಮಗೆ ಅದೃಷ್ಟ ಬೆಂಬಲವಾಗಿ ನಿಲ್ಲಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ. ವಿವಾಹ ಕಾರ್ಯಕ್ಕೆ ಚಾಲನೆ. ಕಷ್ಟ ಪಟ್ಟರೆ ಅದೃಷ್ಟವೂ ಸಾಥ್ ಕೊಟ್ಟ ಕೈಗೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗುವುದು. ರಾಮಧ್ಯಾನ ಮಾಡಿ. 

ಧನುಸ್ಸು(Sagittarius): ಗಣ್ಯವ್ಯಕ್ತಿಗಳ ಭೇಟಿಯಿಂದ ಬಹಳ ದಿನದಿಂದ ಸ್ಥಗಿತಗೊಂಡಿದ್ದ ಕೆಲಸ ಮುಂದುವರೆಯುವುದು. ಹೊಸ ಸ್ನೇಹಿತರು ಸಿಕ್ಕು ಕೆಲಸ ಕಾರ್ಯಗಳು ಸುಗಮ. ದೂರ ಸಂಚಾರದಿಂದ ಕಾರ್ಯಾನುಕೂಲ. ಮಕ್ಕಳಿಂದ ಶುಭಸುದ್ದಿ. ಶಾರದಾಂಬೆಯ ಸ್ಮರಣೆ ಮಾಡಿ. 

ಮಕರ(Capricorn): ಕಚೇರಿಯಲ್ಲಿ ಸಹೋದ್ಯೋಗಿಗಳೊಡನೆ ಜಗಳ ತಪ್ಪಿಸಿ, ಆದಷ್ಟು ಕೆಲಸದೆಡೆ ಗಮನ ವಹಿಸಿ. ಹಿರಿಯರ ಮಾತಿನಿಂದ ಮನಸ್ಸಿಗೆ ಕ್ಲೇಶ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಹಾಗೂ ಕುಟುಂಬದವರ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿ. ರಾಮ ಭಜನೆಯಿಂದ ಒಳಿತಾಗುವುದು. 

ಕುಂಭ(Aquarius): ನಿಮ್ಮಿಂದ ಹೋಗುವುದೇ ಇಲ್ಲವೇನೋ ಎಂಬಂಥ ಕಷ್ಟಗಳ ಬಗ್ಗೆ ಚಿಂತೆಯಲ್ಲಿ ಮುಳುಗುವಿರಿ. ವೃಥಾ ಚಿಂತಿಸುವುದರಿಂದ ಫಲವಿಲ್ಲ. ಭವಿಷ್ಯದಲ್ಲಿ ಎಲ್ಲ ಒಳಿತಾಗುತ್ತದೆ. ಸಧ್ಯಕ್ಕೆ ಕೆಲಸ ಕಾರ್ಯಗಳ ಕಡೆ ಗಮನ ವಹಿಸಿ. ಸಂಗಾತಿಗೆ ಹೆಚ್ಚಿನ ಸಮಯ ಕೊಡಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಮೀನ(Pisces): ಹಣಕಾಸಿನ ಮುಗ್ಗಟ್ಟು ಬಾಧಿಸಲಿದೆ. ಹಣ ಎಲ್ಲೆಲ್ಲಿ ವ್ಯರ್ಥ ಪೋಲಾಗುತ್ತಿದೆ ಎಂಬ ಬಗ್ಗೆ ಅವಲೋಕನ ಅಗತ್ಯ. ದೊಡ್ಡದೊಂದು ಕನಸಿಗೆ ಕೈ ಹಾಕುವ ಮುನ್ನ ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನು ಹತ್ತಿಯೇ ಮೇಲೆ ಹೋಗಬೇಕೆಂಬುದು ನೆನಪಿಡಿ. ತಾಯಿಯ ಕಾಲಿಗೆ ಮನಸ್ಕರಿಸಿ ದಿನ ಆರಂಭಿಸಿ.

click me!