ದಿನ ಭವಿಷ್ಯ: ಬುಧ ವಕ್ರಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯವೇನಿದೆ?

By Suvarna NewsFirst Published May 10, 2022, 5:00 AM IST
Highlights

10 ಮೇ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಸಿಂಹಕ್ಕೆ ಹೊಸ ಆದಾಯದ ಅವಕಾಶಗಳು

ಮೇಷ(Aries): ನೀವೇ ಸರಿ, ನೀವು ಹೇಳಿದ್ದೇ ನಡೆಯಬೇಕೆಂಬ ಧೋರಣೆ ಬೇಡ. ಕೆಲವೊಮ್ಮೆ ನಿಮ್ಮ ಮಾತುಗಳು ತಪ್ಪಾಗುವ ಕಾರಣಕ್ಕೆ ನಿಮ್ಮ ಘನತೆಯೇನು ಕಡಿಮೆಯಾಗುವುದಿಲ್ಲ. ಇನ್ನೊಬ್ಬರ ಸಲಹೆಗಳನ್ನು ಪರಿಗಣಿಸಿ. ಆರೋಗ್ಯ ಚೆನ್ನಾಗಿರಲಿದೆ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ.

ವೃಷಭ(Taurus): ಯಾರೋ ಏನೋ ಅಂದುಕೊಳ್ಳುತ್ತಾರೆಂಬ ಭಯದಲ್ಲಿ ಎಲ್ಲರೊಂದಿಗೆ ಸುಲಭವಾಗಿ ಬೆರೆಯಲು ಹಿಂಜರಿಯುವ ಸ್ವಭಾವ ಬಿಡಿ. ಯಾರು ಏನಾದರೂ ಅಂದುಕೊಳ್ಳಲಿ, ನನ್ ಬದುಕು ನನದೇ ಎಂಬ ನಿರ್ಧಾರಕ್ಕೆ ಬನ್ನಿ. ನಿಮಗೆ ಬೇಕಾದುದನ್ನು ಕೇಳಿ ಪಡೆಯಿರಿ. ಭಜರಂಗ ಬಾಣ ಹೇಳಿ. 

Latest Videos

ಮಿಥುನ(Gemini): ಜೀವನ ಕಳೆದಂತೆಲ್ಲ ಕೆಲ ಹಳೆಯ ಸ್ನೇಹಗಳು ಕಳಚಿಕೊಳ್ಳುತ್ತವೆ, ಹೊಸತು ಹುಟ್ಟಿಕೊಳ್ಳುತ್ತವೆ. ಹಳತನ್ನು ನೆನೆದು ಕೊರಗುವುದು ಬಿಡಿ, ಬದುಕು ಇರುವುದು ಹೀಗೆಯೇ ಎಂಬ ವಾಸ್ತವ ಅರಿತರೆ ನೆಮ್ಮದಿ. ನೆರವು ಕೇಳಿ ಬಂದವರಿಗೆ ನೋವು ಮಾಡಬೇಡಿ. ದುರ್ಗಾ ಅಷ್ಟೋತ್ತರ ಪಠಿಸಿ. 

ಕಟಕ(Cancer): ಮಕ್ಕಳ ವಿಷಯವಾಗಿ ಅವರಿಂದ ಎಲ್ಲವನ್ನೂ ಬಯಸುವ ನಿರೀಕ್ಷೆ ಬಿಡಿ. ಎಲ್ಲರೂ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಮಕ್ಕಳನ್ನು ಸಹಜ ಸಂತೋಷದಲ್ಲಿ ಬೆಳೆಯಲು ಬಿಡಿ. ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಿ. ಆಂಜನೇಯನಿಗೆ ಕೆಂಪು ಹೂಗಳನ್ನು ಅರ್ಪಿಸಿ. 

ಸಿಂಹ(Leo): ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿ. ಹೊಸ ದಾರಿಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಹೊಸ ಆದಾಯದ ಮೂಲಗಳು ದಕ್ಕಲಿವೆ. ಸಂಗಾತಿಯ ಪ್ರೀತಿಯನ್ನು ಅನುಭವಿಸಲಿರುವಿರಿ. ರಾಮ ನಾಮ ಜಪ ಮಾಡಿ. 

ತಾವು ಹೇಳಿದ್ದೇ ಆಗಬೇಕೆನ್ನೋ ನಾಲ್ಕು ರಾಶಿಗಳಿವು..

ಕನ್ಯಾ(Virgo): ಕಷ್ಟ ಪಡುತ್ತೀರಿ ನಿಜ, ಆತುರದಲ್ಲಿ ಫಲಿತಾಂಶ ಬಯಸಲು ಹೋಗಬೇಡಿ. ಯಾವಾಗ ಫಲ ಕೊಡಬೇಕೆಂಬುದನ್ನು ಕಾಲ ನಿರ್ಧಾರ ಮಾಡುತ್ತದೆಂಬುದನ್ನು ಅರಿಯಿರಿ. ಮನೆಯಲ್ಲಿ ಎಲ್ಲರ ಮನಸ್ಸಿಗೆ ಅಗತ್ಯ ಸಮಾಧಾನ ಹೇಳಿ. ಆಂಜನೇಯ ಅಷ್ಟೋತ್ತರ ಶತನಾಮಾವಳಿ ಹೇಳಿ. 

ತುಲಾ(Libra): ಸ್ನೇಹಿತರು ಹೆಚ್ಚಿದ್ದಾರೆ ಎಂಬುದೇನೋ ಸರಿ, ಆದರೆ ಎಂಥ ಸ್ನೇಹಿತರು ಇದ್ದಾರೆ ಎಂದು ಯೋಚಿಸಿದ್ದೀರಾ? ದುಷ್ಟ ಸ್ನೇಹಿತರ ಸಹವಾಸದಿಂದ ದೂರ ಉಳಿಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ದಂಡ ತೆರಬೇಕಾಗುವುದು. ಆಂಜನೇಯ ಭಜಂಗ ಸ್ತೋತ್ರ ಹೇಳಿ. 

ವೃಶ್ಚಿಕ(Scorpio): ನಿಮ್ಮ ಕೋಪವನ್ನು ನಿಯಂತ್ರಣ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಗಮನ ಹರಿಸಿ. ಇದರಿಂದಾಗಿ ಸುತ್ತಲಿರುವವರು ಎಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಒಮ್ಮೆ ಅವಲೋಕಿಸಿ. ಯೋಗ, ಧ್ಯಾನದ ಮೊರೆ ಹೋಗಿ. ಹತ್ತಿರದ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ಧನುಸ್ಸು(Sagittarius): ಸುಮ್ಮನೆ ಕಷ್ಟ ಪಟ್ಟು ದುಡಿಯುತ್ತಾ ಕೂರಬೇಡಿ. ನೀವು ಮಾತನಾಡದೆ ಬರೀ ಕೆಲಸ ಮಾಡುತ್ತಿದ್ದರೆ ನಿಮ್ಮನ್ನು ಬಳಸಿಕೊಳ್ಳುವವರು ಹೆಚ್ಚುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡಿ. ಪ್ರಯಾಣ ಯೋಜನೆಗಳನ್ನು ಮಾಡುವಿರಿ. ಆಂಜನೇಯನಿಗೆ ವೀಳ್ಯದ ಹಾರ ಸಮರ್ಪಿಸಿ. 

ಮಕರ(Capricorn): ಹಿಂದೆ ಮಾಡಿದ ತಪ್ಪುಗಳು ಇಂದು ಕಾಡಬಹುದು. ಶತ್ರುಗಳಿಂದ ಕೊಂಚ ಬಾಧೆ ಇರುತ್ತದೆ. ಸಮಾಧಾನದಿಂದ ಮಾತನಾಡಿದರೆ ಅದರಿಂದ ಹೊರ ಬರುವ ಸಾಧ್ಯತೆಗಳು ಗೋಚರವಾಗಲಿವೆ.  ಮನೆದೇವರ ಸ್ಮರಣೆ ಮಾಡಿ. 

ಕುಂಭ(Aquarius): ಇನ್ನೂ ಎಷ್ಟು ಸಮಯ ಎಲ್ಲವನ್ನೂ ನುಂಗಿಕೊಂಡಿರುತ್ತೀರಿ? ನಿಮ್ಮ ಮೌನದಿಂದ ಒಳಿತಾಗಿದ್ದಕ್ಕಿಂತ ನಿಮಗೆ ಕೇಡಾಗುವುದೇ ಹೆಚ್ಚು. ನಿಮಗೇನು ಬೇಕೋ ಅದನ್ನು ಬಾಯಿ ಬಿಟ್ಟು ಕೇಳದ ಹೊರತು ಸಿಗುವುದಿಲ್ಲ, ಕೆಟ್ಟವರಾಗುವ ಭಯ ಬಿಡಿ. ಇಷ್ಟ ದೇವರಲ್ಲಿ ಪ್ರಾರ್ಥಿಸಿ. 

ವೃಷಭದಲ್ಲಿ ಬುಧ ವಕ್ರಿ; ನಿಮ್ಮ ರಾಶಿಯ ಮೇಲೇನು ಪರಿಣಾಮವಾಗಲಿದೆ?

ಮೀನ(Pisces): ಆತುರಪಟ್ಟು ಕೆಲವೊಂದು ಮಾತು ಕೊಟ್ಟಿದ್ದೀರಿ. ಈಗದನ್ನು ನಡೆಸಿಕೊಡುವುದು ಕಷ್ಟ ಎಂದಾಗಿದೆ. ಸರಿಯಾದ ಮಾತುಕತೆಯಿಂದ ಬಹುತೇಕ ಸಮಸ್ಯೆಗಳು ಈಡೇರುತ್ತವೆ ಎಂಬುದು ತಿಳಿದು ಮುಂದುವರಿಯಿರಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

click me!