ನಿಮ್ಮ ದಿನವು ಹೇಗಿರುತ್ತೆ..? ಇಂದು ನಿಮಗೆ ಯಾವ ಶುಭ ಫಲ ಕಾದಿದೆ. ಏನು ಮಾಡಿದರೆ ಒಳಿತು..?
ಮೇಷ : ಶಾಂತ ಮನಸ್ಸಿನಿಂದ ಕೆಲಸಗಳು ಹೆಚ್ಚು ಯಶ ಕಾಣುತ್ತವೆ. ಹಾಗಾಗಿ ಬೆಳಗ್ಗೆಯೇ ಶಾಂತಚಿತ್ತದಿಂದ ಇರಿ
ವೃಷಭ : ನೀವು ಇರುವ ಸ್ಥಳದ ಬಗ್ಗೆ ನಿಮಗೆ ಅರಿವು ಇರಲಿ. ಹೆಚ್ಚು ಮಾತನಾಡುವುದು ಬೇಡ, ಸಲ್ಲದ ವಿಚಾರಗಳನ್ನು ಮನಸ್ಸಿನಿಂದ ತೆಗೆಯಿರಿ
ಮಿಥುನ :ಸ್ವಾರ್ಥಿಗಳ ಸಂಗಡದಿಂದ ದೂರವಾಗಿರಿ, ನಿಮ್ಮ ಎಲ್ಲಾ ಕೆಲಸಗಳನ್ನು ಸಮರ್ಥಿಸಿಕೊಳ್ಳುವುದು ಬೇಡ.
ಕಟಕ : ಸ್ನೇಹಿತರ ಹೊಸ ಕೆಲಸಗಳಿಗೆ ನೀವು ನೆರವು ನೀಡಲಿದ್ದೀರಿ. ಆರೋಗ್ಯದ ದೃಷ್ಟಿಯಿಂದ ವ್ಯಾಯಾಮ ಮಾಡುತ್ತಾ ಬನ್ನಿ
ಸಿಂಹ : ಅತಿಯಾದ ಹೊಗಳಿಕೆಯ ಮಾತುಗಳಿಗೆ ಕಿವಿಯಾಗದಿರಿ. ಧೈರ್ಯದಿಂದ ಹೊಸ ನಿರ್ಧಾರ ಕೈಗೊಳ್ಳುವಿರಿ
ಕನ್ಯಾ : ನಿಮ್ಮಲ್ಲಿರುವ ಒಳ್ಳೆಯ ಚಿಂತನೆಯಿಂದ ದಿನಾಂತ್ಯಕ್ಕೆ ಒಳ್ಳೆಯ ಕಾರ್ಯವೂ ಆಗಲಿದೆ. ಕೆಡುಕು ಮಾಡುವವರು ಕಡಿಮೆಯಾಗಲಿದ್ದಾರೆ.
ತುಲಾ : ದಿನವಿಡಿ ನಗುವಿನಿಂದ ಇರುವಿರಿ, ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಿ.
ವರಶ್ಚಿಕ : ಎಲ್ಲಾ ಕಡೆಗಳನ್ನೂ ದೇವರನ್ನು ಹುಡುಕಿ ಹೊರಡದಿರಿ. ಮಾಡುವ ಕೆಲಸದಲ್ಲೇ ಅವನು ನಿಮಗೆ ಸಿಗುತ್ತಾನೆ.
ಧನಸ್ಸು : ದೂರುಗಳಿಗೆ ಹೆಚ್ಚು ಚಿಂತೆ ಮಾಡುವುದು ಬೇಡ. ಆಡಿಕೊಳ್ಳುವವರ ಮುಂದೆ ಬೆಳೆದು ನಿಲ್ಲುತ್ತೇನೆ ಎನ್ನುವ ಸಂಕಲ್ಪ ಮಾಡಿ
ಮಕರ : ಆತುರದ ಕೈಗೆ ಬುದ್ದಿ ಕೊಡದಿರಿ. ಎಲ್ಲರನ್ನೂ ಪ್ರೀತಿಯಿಂದ ಕಾಣುವುದರಿಂದ ನಿಮಗೂ ಎಲ್ಲರಿಂದ ಪ್ರೀತಿ ದೊರೆಯುತ್ತದೆ
ಕುಂಭ : ಪ್ರಸ್ತುತ ರಾಜಕಾರಣದ ಬಗ್ಗೆ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಶಕ್ತಿಗೆ ತಕ್ಕಂತ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವಿರಿ.
ಮೀನ : ಮತ್ತೊಬ್ಬರ ಬಗ್ಗೆ ಚಿಂತೆ ಬೇಡ. ನಿಮ್ಮ ಕೆಲಸದಲ್ಲಿ ನಿರತರಾಗಿ