
ಗದಗ (ಜೂ.10): ಮನೆಯಲ್ಲಿ ಮಲಗಿದ್ದ ವೇಳೆ ವೃದ್ಧನ ಮೇಲೆ ಛಾವಣಿ ಕುಸಿದುಬಿದ್ದ ಘಟನೆ ಗದಗ ನಗರದ ಖಾನತೋಟ ಬಡಾವಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಮಣ್ಣಿನಡಿ ಸಿಲುಕಿದ್ದ ವೃದ್ಧನನ್ನು ಯುವಕರ ತಂಡ ರಕ್ಷಣೆ ಮಾಡಿದೆ.
ರಾಮಣ್ಣ ಶಿಂಧೆ(85),ಛಾವಣಿ ಕುಸಿದು ಅವಶೇಷಗಳಡಿ ಸಿಲುಕಿದ್ದ ವೃದ್ಧ. ಹಲವು ದಿನಗಳಿಂದ ಮಳೆಯಾಗುತ್ತಿದೆ. ಇದರಿಂದ ಹಳೆ ಕಾಲದ ಮಣ್ಣಿನ ತೇವಗೊಂಡಿತ್ತು. ಇಂದು ಕುಸಿದು ಬಿದ್ದಿದೆ.
ಮನೆಯ ಛಾವಣಿ ಕುಸಿದು ಮಕ್ಕಳಿಬ್ಬರು ದಾರುಣ ಸಾವು!
ಪತ್ನಿ ರೇಣುಕಾ ಬಾಯಿ ಚಹಾ ತರಲು ಆಚೆ ಹೋಗಿದ್ದಾಗ ನಡೆದಿರುವ ದುರಂತ. ಮರಳಿ ಮನೆಗೆ ಬಂದು ನೋಡಿದಾಗ ಮಣ್ಣಿನಡಿಯಲ್ಲಿ ಸಿಲುಕಿದ್ದ ಪತಿಯನ್ನ ಕಂಡು ಸಹಾಯಕ್ಕೆ ಕೂಗಿದ್ದಾಳೆ. ಇದೇ ವೇಳೆ ವೃದ್ಧ ಮಹಿಳೆಯ ಕೂಗಾಟ ಕೇಳಿ ಸ್ಥಳಕ್ಕೆ ಬಂದ ಯುವಕರ ತಂಡ. ಮಣ್ಣಿನಡಿ ಸಿಲುಕಿದ್ದ ವೃದ್ಧನ ರಕ್ಷಣೆ ಮಾಡಿ ಬಳಿಕ ಆಟೋದಲ್ಲಿ ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ. ಚಿಕಿತ್ಸೆ ಪಡೆಯುತ್ತಿರುವ ವೃದ್ಧ. ಯುವಕರ ಸಮಯಪ್ರಜ್ಞೆಯಿಂದ ಬದುಕುಳಿದ ಹಿರಿಜೀವ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ