ಬಾಗಲಕೋಟೆ: ಪೊಲೀಸ್‌ ಪರೀಕ್ಷೆಯಲ್ಲಿ ಹೈಟೆಕ್‌ ನಕಲು, ಯುವಕನ ಬಂಧನ

Suvarna News   | Asianet News
Published : Nov 23, 2020, 11:07 AM ISTUpdated : Nov 23, 2020, 12:18 PM IST
ಬಾಗಲಕೋಟೆ: ಪೊಲೀಸ್‌ ಪರೀಕ್ಷೆಯಲ್ಲಿ ಹೈಟೆಕ್‌ ನಕಲು, ಯುವಕನ ಬಂಧನ

ಸಾರಾಂಶ

ರಾಜ್ಯ ಪೋಲಿಸ್‌ ಇಲಾಖೆಯ ಸಶಸ್ತ್ರ & ಮೀಸಲು‌ ಪಡೆ ಪರೀಕ್ಷೆ‌ಯಲ್ಲಿ ನಕಲು ಮಾಡಲು ಯತ್ನಿಸಿದ ಯುವಕನ ಬಂಧನ| ಬಾಗಲಕೋಟೆ ನಗರದಲ್ಲಿ ನಡೆದ ಘಟನೆ| ಮಾಸ್ಕ್ ಒಳಗೊಂದು, ಕಿವಿಯಲ್ಲೊಂದು ಎಲೆಕ್ಟ್ರಾನಿಕ್ ವಸ್ತುಗಳನ್ನ ಹಾಕಿಕೊಂಡು ಮೋಸದಿಂದ ಉತ್ತರ ಪತ್ರಿಕೆ ಬರೆಯುತ್ತಿದ್ದ ಯುವಕ| 

ಬಾಗಲಕೋಟೆ(ನ.23): ಪೊಲೀಸ್‌ ಪರೀಕ್ಷೆಯಲ್ಲಿ ಮೊಬೈಲ್ ಡಿವೈಸ್ ಬಳಸಿ ಉತ್ತರ ಪತ್ರಿಕೆ ಬರೆಯುತ್ತಿದ್ದ ಯುವಕನೊಬ್ಬನ್ನ ಪೊಲೀಸರು ಬಂಧಿಸಿದ ಘಟನೆ ನಿನ್ನೆ(ಭಾನುವಾರ) ನಡೆದಿದೆ. 

ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಎಸ್.ಪಿ.ಲೋಕೇಶ್ ಜಗಲಾಸರ್ ಅವರು, ನಗರದಲ್ಲಿ ಭಾನುವಾರ ನಡೆದಿದ್ದ ರಾಜ್ಯ ಪೊಲೀಸ್‌ ಇಲಾಖೆಯ ಸಶಸ್ತ್ರ & ಮೀಸಲು‌ ಪಡೆ ಪರೀಕ್ಷೆ‌ಯಲ್ಲಿ ನಕಲು ಮಾಡಲು ಯತ್ನಿಸಿದ ಶ್ರೀಮಂತ ಸದಲಗಿ ಎಂಬ ಯುವಕನನ್ನ ಬಂಧಿಸಲಾಗಿದೆ ಎಂದು ತಿಳಿದ್ದಾರೆ. 

ಗಂಡನ ಲವ್ವಿಡವ್ವಿ ಪತ್ತೆ ಹಚ್ಚಲು ಹೋದ ಹೆಂಡ್ತಿ: ಮಾನಕ್ಕೆ ಅಂಜಿ ಮಹಿಳೆ ಆತ್ಮಹತ್ಯೆ

ಬಂಧಿತ ಶ್ರೀಮಂತ ಸದಲಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮೈಗೂರ ಗ್ರಾಮದವನಾಗಿದ್ದಾನೆ ಎಂದು ತಿಳಿದು ಬಂದಿದೆ. ನಗರದ ವಿದ್ಯಾಗಿರಿಯ ಪಬ್ಲಿಕ್ ಶಾಲೆಯ 464ನೇ ಬ್ಲಾಕ್ ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಶ್ರೀಮಂತ ಮಾಸ್ಕ್ ಒಳಗೊಂದು, ಕಿವಿಯಲ್ಲೊಂದು ಎಲೆಕ್ಟ್ರಾನಿಕ್ ವಸ್ತುಗಳನ್ನ ಹಾಕಿಕೊಂಡು ಮೋಸದಿಂದ ಉತ್ತರ ಪತ್ರಿಕೆ ಬರೆಯುವ ಮೂಲಕ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ಮುಂದಾಗಿದ್ದ ಎಂದು ತಿಳಿಸಿದ್ದಾರೆ.

ಯುವಕನ ಕೃತ್ಯಕ್ಕೆ ಸಹಕಾರ ನೀಡಿದವರನ್ನು ಸಹ ಬಂಧಿಸಲಾಗುವುದು. ನಿನ್ನೆ ಜಿಲ್ಲೆಯಾದ್ಯಂತ ಸುಮಾರು ಅಂದಾಜು 10 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಎಸ್.ಪಿ ಜಗಲಾಸರ್ ಮಾಹಿತಿ ನೀಡಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ